Police Bhavan Kalaburagi

Police Bhavan Kalaburagi

Monday, September 18, 2017

Yadgir District Reported Crimes Updated on 18-09-2017


Yadgir District Reported Crimes

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 169/2017 ಕಲಂ: 323,324,447,504,506 ಸಂಗಡ 34 ಐಪಿಸಿ ;- ದಿನಾಂಕ: 18/09/2017 ರಂದು 9.30 ಎಎಮ್ ಸುಮಾರಿಗೆ ಪಿರ್ಯಾದಿ ಹಾಗೂ ತನ್ನ ಹೆಂಡತಿ ಇಬ್ಬರೂ ತಮ್ಮ ಹೊಲ ಸರ್ವೇ ನಂ 35 ರಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಅತಿಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈಯುತ್ತಾ ಹೊಲದಲ್ಲಿ ನಮಗೂ ಪಾಲು ಬರುತ್ತದೆ ಅಂತ ಪಿರ್ಯದಿಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೆ ಅಲ್ಲಿಯೇ ಇದ್ದ ಬಡಿಗೆಯಿಂದ ತಲೆಗೆ, ಕೈಗೆ, ಕಾಲಿಗೆ ಹಾಗೂ ಬಲ ಕಿವಿಯ ಹತ್ತಿರ ಹೊಡೆದು ಗುಪ್ತಗಾಯ, ರಕ್ತಗಾಯ ಮಾಡಿ ಜೀವದ ಬೆದಿರಕೆ ಹಾಕಿದ ಅಪರಾಧ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 175/2017 ಕಲಂ 379 ಐಪಿಸಿ ;- ದಿನಾಂಕ:18/09/2017 ರಂದು ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269, ಮಹಾಂತೇಶ ಎಪಿಸಿ 48, ಜೀಪ ಚಾಲಕ ಇವರೊಂದಿಗೆ ಯಾದಗಿರದಲ್ಲಿ ಠಾನೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಠಾಣೆಯಿಂದ 8-30 ಎಎಂಕ್ಕೆ ಹೊರಟು ಕನಕ ಚೌಕ್, ಡಿಗ್ರಿ ಕಾಲೇಜ ಮುಖಾಂತರ ಜಿಲ್ಲಾ ಪೊಲೀಸ್ ಕಾಯರ್ಾಲಯದ ಕಡೆಗೆ ಹೋಗುತ್ತಿರುವಾಗ ಜಿಲ್ಲಾ ಕ್ರೀಡಾಂಗಣ ಹತ್ತಿರ ರೋಡಿನ ಮೇಲೆ ನಮ್ಮ ಎದುರಗಡೆ ಒಂದು ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು ಸಿಬ್ಬಂದಿಯವರ ಸಹಾಯದಿಂದ ಟ್ರ್ಯಾಕ್ಟರನ್ನು ನಿಲ್ಲಿಸಿ ಚಾಲಕನನ್ನು 9-00 ಎಎಂಕ್ಕೆ ಚಾಲಕನಿಗೆ ಮತ್ತು ದರಲ್ಲಿದ್ದ ಇನ್ನೀಬ್ಬರಿಗೆ ಹಿಡಿದುಕೊಂಡು ವಿಚಾರಿಸಲು ಚಾಲಕನು ತನ್ನ ಹೆಸರು 1) ಹಣಮಂತ ತಂ. ಸಾಬಣ್ಣ ತಳಗೇರಿ ವಃ 27 ಜಾಃ ಬೇಡರು ಉಃ ಟ್ರ್ಯಾಕ್ಟರ ಚಾಲಕ ಸಾಃ ಖಾನಳ್ಳಿ ತಾಃಜಿಃ ಯಾದಗಿರಿ ಅಂತಾ ತಿಳಿಸಿದನು. ಸಂಗಡ ಇದ್ದ ಇಬ್ಬರಿಗೆ ವಿಚಾರಿಸಲು ಸದರಿಯವರು ಉಸುಕು ತುಂಬುವ ಲೇಬರಗಳಿದ್ದು ಅವರು ತಮ್ಮ ಹೆಸರುಗಳು 2) ರಾಜು  ತಂ. ಭಿಮರಾಯ ರಾಠೋಡ ವಃ 28 ಜಾಃ ಲಂಬಾಣಿ ಉಃ ಲೇಬರ ಕೆಲಸ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃ ಯಾದಗಿರಿ, 3) ಗೋಪಿ ತಂ. ಭಿಮು ರಾಠೋಡ ವಃ 20 ಜಾಃ ಲಂಬಾಣಿ ಉಃ ಲೇಬರ ಕೆಲೆ ಸಾಃ ಮುದ್ನಾಳ ದೊಡ್ಡ ತಾಂಡಾ ತಾಃ ಯಾದಗಿರಿ ಅಂತಾ ತಿಳಿಸಿದರು. ಸದರಿಯವರಿಗೆ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದರ ಬಗ್ಗೆ ಕೇಳಿದ್ದಕ್ಕೆ ಯಾವುದೇ ಪರವಾನಿಗೆ ಮತ್ತು ಕಾಗದ ಪತ್ರಗಳು ಇರುವುದಿಲ್ಲಾ, ಗೋಪಿನಾಥ ತಂ. ಭಿಮ್ಲಾನಾಯಕ ರಾಠೋಡ,  ಈತನು ಟ್ರ್ಯಾಕ್ಟರ ಮಾಲಿಕನಿದ್ದು ಟ್ರ್ಯಾಕ್ಟರದಲ್ಲಿ ಲಕ್ಷ್ಮಣ ತಂ. ಭಿಮ್ಲಾ ನಾಯಕ ರಾಠೋಡ ಸಾಃ ಮುದ್ನಾಳ ದೊಡ್ಡ ತಾಂಡ ತಾಃಯಾದಗಿರಿ ಈತನು ಟ್ರ್ಯಾಕ್ಟ್ಟರಗಳಲ್ಲಿ ಉಸುಕನ್ನು ತುಂಬಿ ಕಳುಹಿಸಿಕೊಡುತ್ತಾನೆ. ಎಲ್ಲಿಂದ ಮರಳನ್ನು ತುಂಬಿಕೊಂಡು ಬಂದಿದ್ದು ಅಂತಾ ವಿಚಾರಿಸಲು ಯಾದಗಿರಿಯ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಇರುವ ಬಯಲು ಹನುಮಾನ ದೇವರ ಗುಡಿಯ ಹಳ್ಳದಲ್ಲಿ ತುಂಬಿಕೊಂಡು ಬಂದಿರುತ್ತೆವೆ ಅಂತಾ ತಿಳಿಸಿದರು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರು ಹಾಗೂ ಲಕ್ಷ್ಮಣ ಉಸುಕು ತುಂಬಿಸುವವನು, ಲೇಬರಗಳು ಕೂಡಿಕೊಂಡು ಮರಳನ್ನು ಅಕ್ರಮವಾಗಿ ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜಿನ್ ನಂ.ಕೆಎ-33-ಟಿಎ-8288, (ಚೆಸ್ಸಿನಂ.ಖ325.1ಊ21813 ಚೆಸ್ಸಿ ನಂ. ಒಇಂ8ಅಅಂ1ಈಉ2098138) ಟ್ರಾಲಿ ನಂ.ಕೆಎ-33-ಟಿಎ8289 (ಟ್ರಾಲಿ ಚೆಸ್ಸಿ ನಂ. 21/2016) ಇದ್ದು ಅದರಲ್ಲಿ ಮರಳು ತುಂಬಿದ್ದು ಮುಂದಿನ ಕ್ರಮಕ್ಕಾಗಿ ಸಿಬ್ಬಂದಿ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಆರೋಪಿ ಸಮೇತ ಯಾದಗಿರಿ ನಗರ ಠಾಣೆಗೆ 9-45 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರದಲ್ಲಿ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ. 190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ವರದಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 10 ಎಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ  ಕ್ರಮಕ್ಕಾಗಿ ವರದಿ ನೀಡಿದ್ದರಿಂದ ನಾನು  ಈ ಮೇಲಿನಂತೆ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತೇನೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ:87 ಕೆ ಪಿ ಆಕ್ಟ ;- ದಿನಾಂಕ:17-09-2017 ರಂದು 6:00 ಪಿ.ಎಮ್ ಕ್ಕೆ  ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರವನ್ನು ಮತ್ತು 4 ಜನ ಆರೋಪಿತರನ್ನು ಹಾಗು ಅವರಿಂದ ಜಪ್ತು ಮಾಡಿದ ಮುದ್ದೇಮಾಲನ್ನು ಸೂಕ್ತ ಕ್ರಮ ಜರುಗಿಸಲು ಹಾಜರುಪಡಿಸಿದ್ದು, ಪಿ.ಎಸ್.ಐ ರವರು ಹಾಜರುಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ತಾವು ಈ ದಿವಸ ದಿಃ17-09-2017 ರಂದು ಠಾಣೆಯಲ್ಲಿದ್ದಾಗ ಬರದೇವನಾಳ ಸೀಮಾಂತರದ ನಳಗುಂಡಾ ತಾಂಡದ ಲಕ್ಷ್ಮಣ್ ತಂದೆ ಹಿರಪ್ಪ ಚವ್ಹಾಣ ರವರ ಹೋಲದ ಸಮೀಪ ಸಕರ್ಾರಿ ಗುಡ್ಡದಲ್ಲಿ ಜಾಗೆಯಲ್ಲಿ ಕೆಲವು ಜನರು ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಪ್ತಿ ಪಂಚನಾಮೆಯಲ್ಲಿ ನಮೂದು ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಕೈಕೊಂಡಿದ್ದು, ಇಸ್ಪೀಟ್ ಜೂಜಾಟ ಆಡುತ್ತಿದ್ದ 1) ಚಂದ್ರಶೇಖರ ತಂದೆ ರಾಮಪ್ಪ ವ:36 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ಜಾಲಿಗಿಡ ತಾಂಡಾ ತಾ:ಸುರಪೂರ 2) ಶಿವಪ್ಪ ತಂದೆ ಗೋವಿಂದಪ್ಪ ರಾಠೋಡ ವ:45 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ರಾಮನಗರ ತಾಂಡಾ ಬರದೇವನಾಳ ತಾ:ಸುರಪೂರ 3) ಗುಂಡಪ್ಪ ತಂದೆ ಶರಣಪ್ಪ ಜಾದವ ವ:30 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ಮಾರನಾಳ ಕ್ರಾಸ್ ತಾ:ಸುರಪೂರ 4) ಬಾಲಚಂದ್ರ ತಂದೆ ಶಂಕ್ರಪ್ಪ ಚವ್ಹಾನ ವ;32ವರ್ಷ ಜಾ: ಲಂಬಾಣಿ ಉ:ಒಕ್ಕಲುತನ ಸಾ:ಜಾಲಿಗಿಡ ತಾಂಡಾ ಇವರನ್ನು ದಸ್ತಗಿರ ಮಾಡಿದ್ದು ಮತ್ತು 1) ತಾರಾಸಿಂಗ ತಂದೆ ಗೋವಿಂದಪ್ಪ ರಾಠೋಡ ಸಾ: ಮಾರನಾಳ ಕ್ರಾಸ್ ತಾ: ಸುರಪೂರ 2) ಕಾಮೇಶ ತಂದೆ ತಾರಾಸಿಂಗ ರಾಠೋಡ ಸಾ:ಜಾಲಿಗಿಡ ತಾಂಡಾ (ಬಸವ ನಗರ) 3) ಶೇಖರ ತಂದೆ ನಾರಾಯಣ ಜಾದವ ಸಾ:ಜಾಲಿಗಿಡದ ತಾಂಡಾ 4) ಗ್ಯಾನಪ್ಪ ತಂದೆ ರಾಮಪ್ಪ ಜಾದವ ಸಾ:ಮಾವಿನಗಿಡ ತಾಂಡಾ ರವರು ಓಡಿ ಹೋಗಿದ್ದು ಸಿಕ್ಕ ಆರೋಪಿತರಿಂದ ಮತ್ತು ಸ್ಥಳದಿಂದ ಒಟ್ಟು 1120/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡು 4:30 ಪಿ.ಎಮ್ ದಿಂದ 5:30 ಪಿಎಮ್ ವರೆಗೆ ಜಪ್ತಿ ಪಂಚನಾಮೆಯನ್ನು ಜರುಗಿಸಿ ವಶಕ್ಕೆ ಪಡೆದುಕೊಂಡು ಬಂದು ಜಪ್ತಿ ಪಂಚನಾಮೆ ಮತ್ತು 4 ಜನ ಆರೋಪಿತರಿಗೆ ಹಾಜರುಪಡಿಸಿದ್ದು, ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದು ಇದ್ದು,ಸದರಿ ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 100/2017 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 279,  338 , 304 (ಚಿ)ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 11/09/2017 ರಂದು  ಸಾಯಂಕಾಲ 5-10 ಪಿ.ಎಂ. ದ ಸುಮಾರಿಗೆ ಫಿಯರ್ಾದಿಯ  ತಂದೆಯಾದ ಗಾಯಾಳು ವೀರಭದ್ರಪ್ಪ ಇವರು ಯಾದಗಿರಿ ನಗರದ ಶಾಸ್ತ್ರಿ ನಗರದ ಕ್ರಾಸ್ ಹತ್ತಿರ ಶಶಿ ಸುಪರ್ ಬಜಾರ್ ಹತ್ತಿರ ಬರುವ ಮುಖ್ಯ ರಸ್ತೆಯೆ ಮೇಲೆ ನಡೆದುಕೊಂಡು ಹೊರಟಿದ್ದಾಗ  ಲಾರಿ ನಂಬರ ಎಮ್.ಎಚ್.-25, ಬಿ-9615 ನೆದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಫಿಯರ್ಾದಿಯ ತಂದೆಗೆ ಡಿಕ್ಕಿ ಪಡಿಸಿದಾಗ ಗಾಯಾಳು ವಿರಭದ್ರಪ್ಪ ಇವರಿಗೆ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯ, ಗದ್ದಕ್ಕೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು  ಮತ್ತು ಎಡಗೈಗೆ ಹಾಗೂ ಎದೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಗಾಯಾಳು ಈತನು ಬೆವುಶ್ ಆಗಿರುತ್ತಾನೆ. ಲಾರಿ  ಚಾಲಕನು ಅಪಘಾತಪಡಿಸಿ ಸ್ಥಳದಲ್ಲಿಂದ ಸ್ವಲ್ಪ ಮುಂದೆ ಹೋಗಿ ತನ್ನ ಲಾರಿಯನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ   ಲಾರಿ ಚಾಲಕನ  ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2017 ಕಲಂ 279, 338, 304 (ಚಿ) ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಗಾಯಾಳುದಾರರಿಗೆ ಹಚ್ಚಿನ ಉಪಚಾರಕ್ಕಾಗಿ ಬಳ್ಳಾರಿ ವಿಮ್ಸ್ ಹೋಗಿ ಅಲ್ಲಿಂದ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 17/09/2017 ರಂದು ಬೆಳಿಗ್ಗೆ 06.37 ಎಎಮ್ ಕ್ಕೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಾ ಮೃತಪಟ್ಟಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಅದೆ.                                    

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ. 364/2017.ಕಲಂ 406.420.323.324.504.506.ಸಂ 34 ಐ.ಪಿ.ಸಿ.;- ದಿನಾಂಕ 17/09/2017 ರಂದು 19-30 ಪಿ.ಎಂ.ಕ್ಕೆ ಪಿಯರ್ಾದಿದಾರಳಾದ ಬಸಮ್ಮ ಗಂಡ ಚಂದ್ರಶೇಖರ ಸಾ|| ಹೋತಪೇಟ ಗ್ರಾಮ ಹಾ|| ವ|| ಶಹಾಪೂರ ಪಟ್ಟಣದ ಗುತ್ತಿಪೇಠ್ ಏರಿಯಾದಲ್ಲಿ ವಾಸವಿದ್ದು ಇವಳು ಠಾಣೆಗೆ ಹಾಜರಾಗಿ ಒಂದು ದೂರು ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ಸದರಿಯವಳ ಕಬ್ಜೆ ಹಾಗೂ ಉಪಬೋಗದಲ್ಲಿದ್ದ ಹೋತಪೇಠ ಗ್ರಾಮದ ಸವರ್ೆ ನಂ 80/3 ನ್ನೇದ್ದರ 3 ಎಕರೆ 36 ಗುಂಟೆಯ ಜಮೀನನ್ನು ಆರೋಫಿ ನಂ 1 ಇತನು ತನ್ನ ಸೌಂಸಾರದ ಅಡಚಣೆಯಿಂದ ಇತರೆ ಆರೋಫಿತರಾದ 2 ಮತ್ತು 3ನ್ನೇವರೋಂದಿಗೆ ಕೂಡಿಕೊಂಡು ಪಿಯರ್ಾದಿ ಮತ್ತು ಆಕೆಯ ಮಗನಿಗೆ ಸದರಿ ಜಮೀನು  ಅಡವ್ ಇಟ್ಟು ಕೊಳ್ಳೂತ್ತೆವೆ ಎಂದು ಹೇಳಿ ದಿನಾಂಕ 18/03/2016 ರಂದು 1-00ಪಿ.ಎಂ. ಕ್ಕೆ ಶಹಾಪೂರದ ಉಪ ನೋದಣಿ ಕಚೆರಿಗೆ ಕರೆದು ಕೊಂಡು ಹೋಗಿ ಪಿಯ್ಯಾದಿ ಮತ್ತು ಆಕೆಯ ಮಗ ಸಿದ್ದಲಿಂಗಪ್ಪ ಇವರ ಕಡೆಯಿಂದ ಖರಿದಿರೇಜಿಸ್ಟರ ಆರೋಪಿ ನಂ 3 ಅರುಣ ಕುಮಾರ ಇತನ ಹೆಸರಿನಿಂದ ಮಾಡಿಸಿ ಮೋಸ, ವಂಚನೆ ಮಾಡಿದ್ದು ಈಬಗ್ಗೆ ದಿನಾಂಕ 08/09/2017 ರಂದು 8-00ಎ.ಎಂ.ಕ್ಕೆ ಶಹಾಪೂರ ಪಟ್ಟಣದ ಗಣೇಶನಗರದ ಏರಿಯಾದಲ್ಲಿ ವಾಸ ವಿದ್ದ ಆರೋಪಿ ನಂ 2 ರಿಂದ 5 ನ್ನೇದ್ದವರ ಮನೆಗೆ ಹೋಗಿ ವಿಚಾರಿಸಿದ ಕೂಡಲೆ ಸದರಿಯವರೆಲ್ಲರು ಮನೆಯಮುಂದೆ ಪಿಯರ್ಾದಿಗೆ ಮತ್ತು ಆಕೆಯ ಮಗ ಸಿದ್ದಲಿಂಗಪ್ಪನಿಗೆ ಅವಾಚ್ಚಶಬ್ದಗಳಿಂದ ಬೈದು ಕೈಯಿಂದ ಮುಸ್ಟಿಯಿಂದ ಗುದ್ದಿ ಶೀರೆ ಹಿಡಿದು ಎಳೆದಾಡಿ ಜೀವದ ಬೈಯಹಾಕಿದ್ದು ಇತ್ಯಾದಿ ದೂರಿನ ಆದಾರದ ಮೇಲೆ ಠಾಣೆ ಗುನ್ನೆ 364/2017.ಕಲಂ 406.420.323.324.504.506.ಸಂ 34 ಐ.ಪಿ.ಸಿ.ಧಾಖಲು ಮಾಡಿಕೊಂಡು ತನಿಕೆ ಕೈಕೊಂಡಿದ್ದು ಅದೆ.
 

No comments: