Police Bhavan Kalaburagi

Police Bhavan Kalaburagi

Monday, November 13, 2017

Yadgir District Reported Crimes Updated on 13-11-2017

                                            Yadgir District Reported Crimes
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 196/2017 ಕಲಂ: 279, 337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ ;- ದಿ: 12/11/17 ರಂದು 2.15 ಪಿಎಮ್ಕ್ಕೆ ಶ್ರೀಮತಿ ಬಸಮ್ಮ ಗಂಡ ಶಿವಮಾನಪ್ಪ ಮೇಟಿ ಸಾ|| ಯಡಿಯಾಪುರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 09/11/2017 ರಂದು ಚಿಗರಿಹಾಳಕ್ಕೆ ಹೋಗುವ ಕುರಿತು ಹೆಗ್ಗಣದೊಡ್ಡಿ ಟಂಟಂ ದಲ್ಲಿ ಕುಳಿತು ಹೋಗುತ್ತಿರುವಾಗ ಮದ್ಯಾಹ್ನ 12.15 ಗಂಟೆ ಸುಮಾರಿಗೆ ಕರಡಕಲ್ ಕ್ಯಾಂಪ್ ದಾಟಿ ಗುಡ್ಡದ ವಾರಿಯಲ್ಲಿ ಹೋಗುತ್ತಿದ್ದಾಗ ನಾವು ಕುಳಿತ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ನಾವು ನಿಧಾನವಾಗಿ ಚಲಾಯಿಸು ಅಂತ ಹೇಳಿದರೂ ಹಾಗೇ ಅತಿವೇಗವಾಗಿ ಓಡಿಸಿಕೊಂಡು ಹೋದವನೇ ಒಮ್ಮೆಲೆ ಎಡಭಾಗಕ್ಕೆ ಕಟ್ ಮಾಡಿದಾಗ ಟಂಟಂ ಪಲ್ಟಿಯಾಗಿ ಬಿದ್ದು ಟಂಟಂದಲ್ಲಿದ್ದ ನನಗೆ ಕಿವಿಗೆ ಹಾಗೂ ಬಲಭುಜಕ್ಕೆ ತರಚಿದ ರಕ್ತಗಾಯವಾಗಿ ಎದೆಗೆ ಹಾಗೂ ಬೆನ್ನಿಗೆ ಒಳಪೆಟ್ಟಾಗಿರುತ್ತದೆ ಜೊತೆಯಲ್ಲಿದ್ದ ತಾಯಮ್ಮ ಇವಳಿಗೆ ಹಣೆಗೆ ರಕ್ತಗಾಯವಾಗಿ ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಸಿದ್ದಪ್ಪ ಮೇಟಿ ಈತನಿಗೆ ಎರಡೂ ಮೊಳಕಾಲ ಕೆಳಗೆ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೆ ಟಂಟಂದಲ್ಲಿದ್ದ ಚಿಗರಿಹಾಳ ಗ್ರಾಮದ ಹಳ್ಳೆಪ್ಪ ಟಣಕೇದಾರ ಈತನಿಗೆ ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಗುಪ್ತಾಂಗಕ್ಕೆ ಭಾರಿ ಪೆಟ್ಟಾಗಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಟಂಟಂ ನಂಬರ ನೋಡಲಾಗಿ ಕೆಎ33 8889 ಅಂತ ಇದ್ದು ಅದರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟಂಟಂ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 196/17 ಕಲಂ: 279, 337, 338 ಐಪಿಸಿ ಸಂ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಕ್ರಮ ಕೈಕೊಂಡೆನು

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 444/2017.ಕಲಂ 323.324.54.506.ಸಂ 34 ಐ,ಪಿ.ಸಿ.;- ದಿನಾಂಕ 12/11/2017 ರಂದು ಸಾಯಂಕಾಲ 18-30 ಗಂಟೆಗೆ ಪಿಯರ್ಾದಿ ಶ್ರೀ ಮಹ್ಮದ ರೀಯಾಜುದ್ದಿನ್ ತಂದೆ ಮಕ್ಬುಲ್ ಸಾಬ ಖೂರೇಶಿ ವ|| 28 ಜಾ|| ಮುಸ್ಲಿಂ ಉ|| ಆಟೋಚಾಲಕ ಸಾ|| ದೇವರ ಗೋನಾಲ ತಾ|| ಸುರಪೂರ ಹಾ|| ವ|| ಆಸರ ಮೋಹಲ್ಲಾ ನಿವಾಸಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿಸಿದ ದೂರು ಹಾಜರ ಪಡಿಸಿದ್ದು ಸಾರಾಂಶ ವೆನೇಂದರೆ ದಿನಾಂಕ 11/11/2017 ರಂದು ನಾನು ದೇವರ ಗೋನಾಲ್ ಗ್ರಾಂದಿಂದ 11-00 ಎ.ಎಂ.ಕ್ಕೆ ಶಹಾಪೂರಕ್ಕೆ ಬಂದೆನು ಶಹಾಪೂರದಲ್ಲಿ ನನ್ನ ಕೆಲಸವನ್ನು ಮುಗಿಸಿಕೊಂಡು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಸುರಪೂರಕ್ಕೆ ಹೋಗಬೆಕೆಂದು ಕನ್ಯಾಕೊಳ್ಳೂರ ಬೇಸ್ ಹಗಸಿ ಹತ್ತಿರ ನಿಂತು ಬಸ್ಸಿಗಾಗಿ ಕಾಯುತ್ತಿರುವಾಗ ನಮ್ಮ ಓಣಿಯ 1] ತೋಫೀಖ್ ತಂದೆ ಹನೀಫ್ ಜಮಖಂಡಿ, 2] ಆಸೀಫ್ ತಂದೆ ಹನೀಫ್ ಜಮಖಂಡಿ ಇವರು ನನ್ನ ಹತ್ತಿರ ಬಂದವರೆ ಎಲೆ ಸೂಳೀ ಮಗನೆ ನಿನ್ನ ತಿಂಡಿ ಬಹಳ ವಾಗಿದೆ ಪುನ: ಏಕೆ ಬಂದಿರುವೆ ಸೂಳೀಮಗನೆ ಅಂತ ಅವಾಚ್ಚ ಶಬ್ದಗಳಿಂದ ಬೈದು ಇಬ್ಬರು ಕೂಡಿ ನನ್ನನ್ನು ನೆಲಕ್ಕೆ ಕೆಡವಿದ್ದರಿಂದ  ತಲೆಗೆ ಗುಪ್ತಗಾಯವಾಗಿದ್ದು ತೋಫೀಕ್ ಇವನು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ಎಡಕಿವಿಗೆ ಹೋಡೆದು ರಕ್ತಗಾಯ ಪಡಿಸಿದನು. ಅವನ ತಮ್ಮನಾದ ಆಸೀಫ್ ಇವನು ನನ್ನ ಎದೆಯ ಮೇಲೆ ಕುಳೀತು ಎದೆಗೆ ಗುದ್ದಿ ಕುತ್ತಿಗೆಗೆ ಚೂರಿದನು ಮತ್ತು ಕೈಯಿಂದ ಬಾಯಿಗೆ, ಮುಗಿಗೆ, ಬಲಕಣ್ಣಿಗೆ, ಗುದ್ದಿದ್ದನು ನನಗೆ ಹೋಡೆಯುತ್ತಿರುವದನ್ನು ಅಲ್ಲೆ ಇದ್ದ ನನಗೆ ಪರಿಚಯ ವಿರುವ ಬಾಬು ತಂದೆ ಅಬ್ದುಲ್ ವಾಹಬ ಚೌದರಿ ಸಾ|| ಗುತ್ತಿಪೇಟ್ ಶಹಾಪೂರ ಮತ್ತು ಸಮದ್ ಸಾಬ ಚೌದರಿ ಸಾ|| ಇಬ್ಬರು ಆಸರ ಮೋಹಲ್ಲಾ ಇವರು ಬಂದು ಜಗಳ ಬಿಡಿಸಿದ ನಂತರ ತೌಫಿಕ್ ಮತ್ತು ಆಸೀಫ್ ಇಬ್ಬರು ಕೂಡಿ ಇನ್ನೋಂದು ಸಲ ಶಹಾಪೂರಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೈಯ ಹಾಕಿರುತ್ತಾರೆ, ಸದರಿ ಘಟನೆಯು ದಿನಾಂಕ 11/11/2017 ರಂದು ಸಾಯಂಕಾಲ 7-00 ಗಂಟೆಗೆ ಜರುಗಿರುತ್ತದೆ.ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 444/2017 ಕಲಂ 323.324.504.506 ಸಂ 34 ಐ.ಪಿ.ಸಿ. ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 163/2017 ಕಲಂ: 504,324,355,323,506 ಸಂ 34 ಐಪಿಸಿ;- ದಿನಾಂಕ: 12/11/2017 ರಂದು 4-30 ಪಿಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಯಂಕಪ್ಪ ನಾಯ್ಕೋಡಿ, ವ:47, ಜಾ:ಕಬ್ಬೇರ, ಉ:ಒಕ್ಕಲುತನ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹಾಲಗೇರಾ ಗ್ರಾಮದ ಸಾರ್ವಜನಿಕರ ಅನಕೂಲಕ್ಕೆಂದು ನಮ್ಮ ಪಂಚಾಯತ ವತಿಯಿಂದ ಹೊಲಗದ್ದೆಗಳಿಗೆ ಹೊಗಲು ನಮ್ಮ ಹೊಲ ನಮ್ಮ ದಾರಿ ಯೋಜನೆ ಅಡಿಯಲ್ಲಿ ದಾರಿಗಳನ್ನು ಮಾಡಿರುತ್ತಾರೆ. ಆದರೆ ನಮ್ಮೂರಿನ ಕೆಲವರು ತಮ್ಮ ತಮ್ಮ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದ್ದರಿಂದ ಸದರಿ ದಾರಿಗಳು ಹಾಳಾಗಿ ಸಾರ್ವಜನಿಕರಿಗೆ ತಿರುಗಾಡಲು ಮತ್ತು ಎತ್ತು ಬಂಡಿ ಗಳೆ ಹೋಗಲು ತೊಂದರೆಯಾಗುತ್ತಿರುವುದಾಗಿ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದರು. ಆಗ ನಾನು ಅಕ್ರಮ ಮರಳು ಸಾಗಾಣಿಕೆ ಮಾಡುವವರ ಬಗ್ಗೆ ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಪಂಚಾಯತಿ ವತಿಯಿಂದ ದೂರು ಕೊಟ್ಟರಾಯಿತು ಎಂದು ಹೇಳಿ ಅವರಿಗೆ ಸಮಾಧಾನ ಮಾಡಿದ್ದೇನು. ಹೀಗಿದ್ದು ಇಂದು ದಿನಾಂಕ: 12/11/2017 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಮ್ಮೂರ ಹನುಮಾನ ದೇವಸ್ಥಾನದ ಹತ್ತಿರ ನಾನು ಮತ್ತು ಮಲ್ಲಣ್ಣಗೌಡ ತಂದೆ ಭೀಮಣ್ಣಗೌಡ ಹಾಗೂ ಸಂಗಪ್ಪ ತಂದೆ ಯಲ್ಲಪ್ಪ 3 ಜನ ಮಾತಾಡುತ್ತಾ ಕುಳಿತುಕೊಂಡಾಗ ಅಲ್ಲಿಗೆ ಬಂದ ನಮ್ಮೂರ 1) ಯಲ್ಲಪ್ಪ ತಂದೆ ಯಂಕಪ್ಪ ನಾಯ್ಕೋಡಿ, 2) ಯಂಕಪ್ಪ ತಂದೆ ಯಂಕಪ್ಪ ನಾಯ್ಕೋಡಿ ಮತ್ತು 3) ಚನ್ನಬಸಮ್ಮ ಗಂಡ ಯಂಕಪ್ಪ ನಾಯ್ಕೋಡಿ ಎಲ್ಲರೂ ಜಾ:ಕಬ್ಬೇರ ಇವರೆಲ್ಲರೂ ಸೇರಿ ಬಂದವರೆ ನನಗೆ ಏ ಮಗನೆ ಶಾಣ್ಯಾ ನಾವು ಉಸಕು ಹೊಡೆದು ದಾರಿಗಳು ಕೆಡಿಸಿವಿ ಎಂದು ನಮ್ಮ ಮೇಲೆ ಕಂಪ್ಲೇಟು ಮಾಡುತ್ತೇನೆ ಎಂದು ಹೇಳುತ್ತಿರುವಿಯಂತ ನಿನ್ನ ಸೊಕ್ಕು ಜಾಸ್ತಿಯಾಗಿದೆ ಮಗನೆ ಎಂದು ಜಗಳ ತೆಗೆದವರೆ ಯಲ್ಲಪ್ಪನು ಅಲ್ಲೆ ಬಿದ್ದ ಕಟ್ಟಿಗೆಯಿಂದ ನನ್ನ ಡುಬ್ಬಕ್ಕೆ ಮತ್ತು ಎಡಗಾಲ ಮೊಳಕಾಲಿಗೆ ಹೊಡೆದು ಒಳೆಪೆಟ್ಟು ಮಾಡಿದನು. ಯಂಕಪ್ಪನು ಕೈಯಿಂದ ಎದೆಗೆ, ಹೊಟ್ಟೆಗೆ ಗುದ್ದಿದನು. ಚನ್ನಬಸಮ್ಮ ಇವಳು ಬಂದು ತನ್ನ ಬಲಗಾಲ ಚಪ್ಪಲಿಯಿಂದ ಎದೆಗೆ ಹೊಡೆದು ನನಗೆ ಅವಮಾನ ಮಾಡಿದಳು. ಆಗ ಸಂಗಡವಿದ್ದ ಮಲ್ಲಣ್ಣಗೌಡ ಮತ್ತು ಸಂಗಪ್ಪ ಇವರ ಜಗಳ ಬಿಡಿಸಿರುತ್ತಾರೆ. ಆಗ ಯಲ್ಲಪ್ಪನು ಮಗನೆ ಶಾಣ್ಯಾ ನಿನ್ನ ಹೆಂಡತಿ ಪಂಚಾಯತಿ ಅಧ್ಯಕ್ಷಳಾಗಿದ್ದಾಳೆಂದು ಊರಲ್ಲಿ ಬಹಳ ನಡೆಸಿದಿ ನಿನಗೆ ಜೀವಂತ ಬಿಡುವುದಿಲ್ಲ ಖಲಾಸ ಮಾಡುತ್ತೇನೆ ಎಂದು ಜೀವದ ಬೆದರಿಕೆ ಹಾಕಿದನು. ಆದ್ದರಿಂದ ವಿನಾಕಾರಣ ಬಂದು ನನಗೆ ಕಟ್ಟಿಗೆಯಿಂದ, ಚಪ್ಪಲಿಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 163/2017 ಕಲಂ: 504,324,355,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 164/2017 ಕಲಂ: 279,337,338,304(ಎ) ಐಪಿಸಿ;-ದಿನಾಂಕ: 12/11/2017 ರಂದು 7-30 ಪಿಎಮ್ ಕ್ಕೆ ಜಿಲ್ಲಾ ನಿಸ್ತಂತು ಕೊಣೆಯಿಂದ ಜಿಜಿಹೆಚ್ ಯಾದಗಿರಿಯಲ್ಲಿ ಆರ್.ಟಿ.ಎ ಡೆತ್ ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ನೀಡಿದ ಮೇರೆಗೆ ನಮ್ಮ ಠಾಣೆಯ ಶ್ರೀ ಗಂಗಾಧರ ಪಾಟಿಲ್ ಎ.ಎಸ್.ಐ ರವರು ಜಿಜಿಹೆಚ್ ಯಾದಗಿರಕ್ಕೆ 8 ಪಿಎಮ್ ಕ್ಕೆ ಭೇಟಿ ನೀಡಿ, ಎಮ್.ಎಲ್.ಸಿ ಪಡೆದುಕೊಂಡು ಅಲ್ಲಿದ್ದ ಗಾಯಾಳು ಶ್ರೀ ಅಜರ್ುನ ತಂದೆ ಮಂಜುನಾಥ ಅರ್ಲಾಪೂರ, ವ:19, ಜಾ:ರಜಪೂತ, ಉ:ಹೊಟೆಲ್ ಕೆಲಸ ಸಾ: ಮದನಪೂರ ಗಲ್ಲಿ ಯಾದಗಿರಿ ಈತನ ಹೇಳಿಕೆ ಫಿರ್ಯಾಧಿಯನ್ನು 8-15 ಪಿಎಮ್ ದಿಂದ 9-15 ಪಿಎಮ್ ದ ವರೆಗೆ ಪಡೆದುಕೊಂಡು ನಮ್ಮ ಠಾಣೆಯ ಶ್ರೀ ಸಿದ್ದಪ್ಪ ಪಿ.ಸಿ 137 ರವರ ಮುಖಾಂತರ ಕಳುಹಿಸಿದ್ದು, 10 ಪಿಎಮ ಕ್ಕೆ ಪಿಸಿ 137 ರವರು ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸಾರಾಂಶವೇನಂದರೆ ಇಂದು ದಿನಾಂಕ: 12/11/2017 ರಂದು ಸಾಯಂಕಾಲ ನಾನು ಮತ್ತು ನನ್ನ ಗೆಳೆಯರಾದ ಶಿವು ತಂದೆ ಭೀಮರಾಯ ಮಡಿವಾಳ, ಮಂಜುನಾಥ ತಂದೆ ಡಾನಬಾಬು ಅರ್ಲಾಪೂರ 3 ಜನ ಕೂಡಿಕೊಂಡು ಶಿವುನ ಮೋಟರ್ ಸೈಕಲ್ ನಂ. ಕೆಎ 33 ಯು 3249 ನೇದ್ದರ ಮೇಲೆ ಕೆಲಸದ ಪ್ರಯುಕ್ತ ಗುರುಸಣಗಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಯಾದಗಿರಿಗೆ ಬರುತ್ತಿದ್ದೇವು. ಮೋಟರ್ ಸೈಕಲ್ ಅನ್ನು ಶಿವು ಚಲಾಯಿಸುತ್ತಿದ್ದು, ನಾನು ಮತ್ತು ಮಂಜುನಾಥ ಹಿಂದೆ ಕುಳಿತ್ತಿದ್ದೇವು. ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸ ದಾಟಿ ಬರುತ್ತಿದ್ದಾಗ ಯಾದಗಿರಿ ಕಡೆ ಬರುತ್ತಿದ್ದಾಗ ಶಿವು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ನಾವು ನಿಧಾನವಾಗಿ ಹೋಗು ಎಂದು ಹೇಳಿದರು ಕೇಳದೆ ಅದೇ ವೇಗದಲ್ಲಿ ಹೊರಟಿದ್ದು, ಸಾಯಂಕಾಲ 6-30 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಸಣ್ಣ ನಾಗಲಪ್ಪ ಇವರ ಹೊಲದ ಹತ್ತಿರ ಎದುರುಗಡೆ ಯಾದಗಿರಿ ಕಡೆಯಿಂದ ಒಂದು ಟವೇರಾ ವಾಹನ ನಂ. ಎಮ್.ಹೆಚ್ 46 ಬಿ 0209 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಸದರಿ ಟವೇರಾ ವಾಹನದ ಚಾಲಕ ಮತ್ತು ನಾವು ಕುಳಿತ ಮೋಟರ್ ಸೈಕಲ್ ಚಲಾಯಿಸುತ್ತಿದ್ದ ಶಿವು ಇಬ್ಬರೂ ತಮ್ಮ ತಮ್ಮ ವಾಹನಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದೇವು. ಈ ಅಪಘಾತದಲ್ಲಿ ನನ್ನ ಮುಖಕ್ಕೆ, ಹಣೆಗೆ ತರಚಿದಗಾಯಗಳು, ಬಲಗಾಲ ತೊಡೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿರುತ್ತದೆ ಮತ್ತು ಬಲಗಾಲ ಬೆರಳುಗಳಿಗೆ ರಕ್ತಗಾಯವಾಗಿತ್ತು. ಮೋಟರ್ ಸೈಕಲ್ ಓಡಿಸುತ್ತಿದ್ದ ಶಿವುನಿಗೆ ಬಾಯಿ, ಬಲಗಡೆ ಗದ್ದಕ್ಕೆ ಮತ್ತು ಬಲಗಣ್ಣಿನ ಹತ್ತಿರ ಭಾರಿ ರಕ್ತಗಾಯಗಳಾಗಿದ್ದು, ಬಲ ಮೊಳಕಾಲಿನ ಚಿಪ್ಪಿಗೆ ಭಾರಿ ರಕ್ತಗಾಯವಾಗಿ ಎಲುಬು ಹೊರಗಡೆ ಬಂದಿತ್ತು. ಮಂಜುನಾಥನಿಗೆ ಬಲಗಾಲ ತೊಡೆ ಮತ್ತು ಮೊಳಕಾಲ ಕೆಳಗೆ ಎಲುಬು ಮುರಿದು ಭಾರಿ ರಕ್ತಗಾಯ, ತಲೆಗೆ ರಕ್ತಗಾಯ ಮತ್ತು ಎರಡು ಕೈಗಳಿಗೆ ತರಚಿದ ರಕ್ತಗಾಯಗಳಾಗಿದ್ದವು. ಶಿವು ಈತನು ಅಪಘಾತದಲ್ಲಿ ಆದ ಭಾರಿ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟನು. ಅಲ್ಲಿಯೇ ಇದ್ದ ಟವೇರಾ ವಾಹನ ಚಾಲಕನಿಗೆ ಹೆಸರು ವಿಳಾಸ ಕೇಳಲಾಗಿ ಅಮೀರ ಜಾನ ತಂದೆ ಮೊಹ್ಮದ ನಬಿ ಸಾ: ಸೇಡಂ ಎಂದು ಗೊತ್ತಾಯಿತು. ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದವರು ನಮಗೆ ಅಪಘಾತವಾದದ್ದು ನೋಡಿ 108 ಅಂಬ್ಯುಲೇನ್ಸಗೆ ಫೋನ ಮಾಡಿ ಅದರಲ್ಲಿ ಹಾಕಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಮತ್ತು ಮೃತ ಶಿವು ಈತನ ಶವವನ್ನು ಕೂಡ ಯಾದಗಿರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದಿರುತ್ತಾರೆ. ಕಾರಣ ನಾವು ಕುಳಿತು ಹೊರಟ ಮೋಟರ್ ಸೈಕಲ್ ಸವಾರ ಶಿವು ಮತ್ತು ಟವೇರಾ ವಾಹನದ ಚಾಲಕ ಅಮೀರಜಾನ ಇವರಿಬ್ಬರು ತಮ್ಮ ತಮ್ಮ ವಾಹನಗಳನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಹೊರಟು ವಾಹನಗಳ ಮೇಲಿನ ನಿಯಂತ್ರಣ ಕಳೆದುಕೊಂಡು ಯಾದಗಿರಿ-ಶಹಾಪೂರ ಮೇನ ರೋಡ ಸಣ್ಣನಾಗಲಪ್ಪ ಇವರ ಹೊಲದ ಹತ್ತಿರ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಅಪಘಾತವಾಗಿ ಶಿವು ಈತನು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಸತ್ತಿದ್ದು, ನನಗೆ ಮತ್ತು ಮಂಜುನಾಥನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ಇದ್ದ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 164/2017 ಕಲಂ: 279,337,338,304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

No comments: