Police Bhavan Kalaburagi

Police Bhavan Kalaburagi

Tuesday, February 27, 2018

Yadgir District Reported Crimes Updated on 27-02-2018


                                      Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 42/2018 ಕಲಂ 457,380 ಐಪಿಸಿ;-ಫಿಯರ್ಾಧಿ ಸಾರಾಂಶವೇನೆಂದರೆ, ದಿನಾಂಕ 25/02/2018 ರಂದು ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ಶಾರದಾಬಾಯಿ ಇಬ್ಬರು ಮನೆಯಲ್ಲಿ ಇದ್ದು, ರಾತ್ರಿ 10-00 ಗಂಟೆಗೆ ಊಟ ಮಾಡಿಕೊಂಡು ಮನೆಯ ಹಾಲದಲ್ಲಿ ಮಲಗಿಕೊಂಡೆವು. ನಂತರ ಬೆಳಿಗ್ಗೆ 6-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಎದ್ದಾಗ ನಮ್ಮ ದೇವರ ಮನೆಯಲ್ಲಿಯ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವುಗ ನಾವು ನೋಡಲಾಗಿ ಯಾರೋ ಕಳ್ಳರು ನಮ್ಮ ದೇವರ ಮನೆಯ ಕಿಡಕಿಯ ಸ್ಟೀಲಗ್ರಿಲ್ ಸ್ಕ್ರೂ ಮುರಿದು ಒಳಗೆ ಪ್ರವೇಶಮಾಡಿ ಕೋಣೆ ಒಳಗೆ ಯಾರು ಬರಬಾರದೆಂದು ರೂಮಿನ ಬಾಗಿಲ ಒಳಗಡೆಯ ಕೊಂಡಿ ಹಾಕಿಕೊಂಡು, ಅಲ್ಲಿದ್ದ ಅಲಮರಿಯಲ್ಲಿಯ ಒಂದು 3 1/2 (ಮೂರುವರೆ) ತೊಲೆಯ ಬಂಗಾರದ ಚೈನ್ (3 ಎಳೆಯ ಸರ), ಅ.ಕಿ 87,500/- ರೂ||, ಒಂದು ತೊಲೆಯ ಬಂಗಾರದ ಕರಮಣಿಯಲ್ಲಿಯ ತಾಳಿ ಚೈನ್, ಅ.ಕಿ 25,000/ ರೂ|| ಮತ್ತು ಒಂದು ಎಕ್ಸೆಕ್ಸ್ ಬ್ಯಾಂಕನಲ್ಲಿ ನಾವು ಇಟ್ಟಿದ್ದ ಲಾಕರ್ಸ್ ಕೀ, ಅ.ಕಿ 00=00 ನೇದ್ದು, ಹಾಗೂ ನನ್ನ ಮಗ ವೆಂಕಟೇಶ ತಂದೆ ಮೊಗಲಾಜಿ ಈತನ ಪಾಸ್ಪೋಟರ್್, ಹೀಗ್ಗೆ ಒಟ್ಟು 1,12,500/-ರೂ|| ನೇದ್ದವುಗಳು ಕಳ್ಳತನ ಮಾಡಿಕೊಂಡು, ಮನೆಯ ಪೂರ್ವದ ಬಾಗಿಲಿನಿಂದ ನಮಗೆ ಗೊತ್ತಾಗದಂತೆ ಹೊರಗೆಹೋಗಿ, ಹೊರಗಡೆ ಬಾಗಿಲ ಕೊಂಡಿ ಹಾಕಿಕೊಂಡು ಹೋಗಿದ್ದು ಇರುತ್ತದೆ. ಈ ಸುದ್ದಿ ತಿಳಿದು ಮನೆಯ ಪಕ್ಕದಲ್ಲಿ ಇದ್ದ ಮಲ್ಲಿಕಾಜರ್ುನ ಯಕ್ಷಂತಿ, ಅಶೋಕ ನ್ಯೂ ಕನ್ನಡ ಉಪನ್ಯಾಸಕರು ಇವರು ಮನೆಗೆ ಬಂದು ನೋಡಿದ್ದು ಇರುತ್ತದೆ. ಕಾರಣ ದಿನಾಂಕ 25/02/2018 ರಂದು ರಾತ್ರಿ 10-00 ಗಂಟೆಗೆಯಿಂದ ದಿನಾಂಕ 26/02/2018 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ದೇವರ ಮನೆಯ ಕಿಡಕಿಯ ಸ್ಟೀಲಗ್ರಿಲ್ಸ್ ಸ್ಕ್ರೂ ಮುರಿದು ಒಳಗೆ ಪ್ರವೇಶಮಾಡಿ ಮನೆಯಲ್ಲಿಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ನಮ್ಮ ಮನೆಯಲ್ಲಿ ಕಳ್ಳತನವಾದ ನಮ್ಮ ಸಾಮಾನುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2018 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 32/2018 ಕಲಂ: 379 ಐಪಿಸಿ ;- ದಿನಾಂಕ: 26/02/2018 ರಂದು 5 ಪಿಎಮ್ ಕ್ಕೆ ಶ್ರೀ ಮೌನೇಶ್ವರ ಮಾಲಿಪಾಟಿಲ್ ಸಿ.ಪಿ.ಐ ಯಾದಗಿರಿ ವೃತ್ತ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ದಿವಸ ದಿನಾಂಕ: 26/02/2018 ರಂದು ಸಾಯಂಕಾಲ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಹಾಲಗೇರಾ ಗ್ರಾಮದ ಬೀಟ್ ಹೆಡ ಕಾನ್ಸಟೇಬಲ್ ರಾಮಲು ಹೆಚ್.ಸಿ 120 ರವರು ನನಗೆ ಫೋನ ಮಾಡಿ ತಿಳಿಸಿದ್ದೇನಂದರೆ ಸರ್ ನಾನು ದಾವಣಗೇರೆ ಬ/ಬ ಕರ್ತವ್ಯದಲ್ಲಿದ್ದೇನೆ. ನನ್ನ ಬೀಟ ವ್ಯಾಪ್ತಿಯ ಹಾಲಗೇರಾ ಗ್ರಾಮದ ಭೀಮಾ ನದಿ ದಡದಿಂದ ಯಾರೋ ಒಬ್ಬನು ಟ್ರ್ಯಾಕ್ಟರದಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಆಂದ್ರದವರ ಶೆಡ್ಡ ಕಡೆಯಿಂದ ಯಾದಗಿರಿ-ವಡಗೇರಾ ಮೇನ ರೋಡ ಮುಖಾಂತರ ಹಾಲಗೇರಾ ಕಡೆ ಬರುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದಿರುತ್ತದೆ ಎಂದು ತಿಳಿಸಿದಾಗ ನಾನು ಸಿಬ್ಬಂದಿಯವರಾದ ಗಂಗಾಧರ ಪಾಟಿಲ್ ಎ.ಎಸ್.ಐ, ಪ್ರಕಾಶ ಹೆಚ್.ಸಿ 18 ರವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 161 ನೇದ್ದರಲ್ಲಿ ಹೊರಟು 4 ಪಿಎಮ್ ಕ್ಕೆ ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ಸರಕಾರಿ ಪ್ರೌಢ ಶಾಲೆ ಹತ್ತಿರ ಹೋದಾಗ ಆ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಅದರ ಚಾಲಕನು ಮರಳು ತುಂಬಿಕೊಂಡು ಬರುತ್ತಿರುವುದನ್ನು, ನೋಡಿ ನಾವು ಹೋಗಿ ಟ್ರ್ಯಾಕ್ಟರನ್ನು ನಿಲ್ಲಿಸಿದಾಗ ಅದರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿ, ಇಳಿದು ಓಡಿ ಹೋದನು. ನಾವು ಬೆನ್ನಹತ್ತಿದರು ಸಿಗಲಿಲ್ಲ. ಸದರಿ ಟ್ರ್ಯಾಕ್ಟರ ನೋಡಲಾಗಿ ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು, ಟ್ರ್ಯಾಕ್ಟರಕ್ಕೆ ನೊಂದಣಿ ನಂಬರ ಇರಲಿಲ್ಲ. ಇಂಜನ ನಂ. 1ಕಙ5105ಆಏಊಂ002360 ಚಾಸ್ಸಿ ನಂ. ಕಙ3029ಆ446304 ಇದ್ದು, ಟ್ರ್ಯಾಲಿಗೆ ಕೂಡಾ ನಂಬರ ಇರುವುದಿಲ್ಲ. ಕೆಂಪು ಬಣ್ಣದ ಟ್ರ್ಯಾಲಿ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಅಕ್ರಮವಾಗಿ ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸಿದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ನಿಲ್ಲಿಸಿದಾಗ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 5 ಪಿಎಮ್ ಕ್ಕೆ ಟ್ರ್ಯಾಕ್ಟರದೊಂದಿಗೆ ಮರಳಿ ಠಾಣೆಗೆ ಬಂದು ನಿಮಗೆ ದೂರು ನೀಡುತ್ತಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 32/2018 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 38/2018 ಕಲಂ: 279, 337, 338 ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ;- ದಿನಾಂಕ 26-02-2018 ರಂದು 6 ಪಿ.ಎಮ್ ಕ್ಕೆ ಶ್ರೀ ಶಿವಲಿಂಗಪ್ಪಾ ಎ.ಎಸ್.ಐ ಯಾದಗಿರಿ ಗ್ರಾಮೀಣ ಠಾಣೆರವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಗಾಯಾಳು ಶ್ರೀ ಈರಪ್ಪಾ ತಂದೆ ಶರಣಪ್ಪಾ ಕೊಟ್ರಕಿ ವಯಾ:20 ಉ: ಕೂಲಿ ಕೆಲಸ ಜಾ: ಕಬ್ಬೇರ ಸಾ: ಕಟಗಿ ಶಹಾಪೂರ ತಾ:ಜಿ: ಯಾದಗಿರಿ ಇವರಿಂದ ಪಡೆದುಕೊಂಡು ಬಂದ ಹೇಳಿಕೆ ಫಿರ್ಯಾಧಿ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ 25-02-2018 ರಂದು ಬೆಳಗ್ಗೆ ನಾನು ಹಾಗೂ ನಮ್ಮ ಗ್ರಾಮದ ನನ್ನ ಗೆಳೆಯನಾದ ಸಾಬಣ್ಣಾ ತಂದೆ ರಾಜಪ್ಪಾ ನಾಟೇಕಾರ ಇಬ್ಬರೂ ಕೂಡಿ ಎಸ್. ಹೊಸಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದ ಸಾಬಣ್ಣಾ ಇವರ ಅಜ್ಜಿಯನ್ನು ಕರೆದುಕೊಂಡು ಬರಬೆಕೆಂದು ಸಾಬಣ್ಣನ ಮೋಟಾರ ಸೈಕಲ್ ನಂ: ಕೆ.ಎ-33/ಕೆ-5907 ನೆದ್ದರ ಮೇಲೆ ನಮ್ಮ ಗ್ರಾಮದಿಂದ ಬೆಳಗ್ಗೆ 8-30 ಗಂಟೆಗೆ ಎಸ್. ಹೊಸಳ್ಳಿ ಗ್ರಾಮದ ಕಡೆಗೆ ಹೊರಟೇವು ಆಗ ಮೋಟಾರ ಸೈಕಲ್ ಸಾಬಣ್ಣಾ ಇತನು ನಡೆಸುತ್ತಿದ್ದನು. ನಾವಿಬ್ಬರೂ ಮೋಟಾರ ಸೈಕಲ್ ಮೇಲೆ ಹೊರಟು ಕಟಗಿ ಶಹಾಪೂರ ದಾಟಿ ಎಸ್.ಹೊಸಳ್ಳಿ ಗ್ರಾಮದ ಹತ್ತಿರ ಇರುವ ಇಟ್ಟಂಗಿ ಬಟ್ಟಿ ಹತ್ತಿರ ಹೋಗುತ್ತಿದ್ದಾಗ ಆಗ ಸಮಯ ಬೆಳಗ್ಗೆ 9 ಗಂಟೆ ಯಾಗಿರಬಹುದು. ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಎಸ್, ಹೊಸಳ್ಳಿ ಗ್ರಾಮದ ಕಡೆಯಿಂದ ಒಂದು ಟ್ರ್ಯಾಕ್ಟರ ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬರುವುದನ್ನು ನೋಡಿ ನಾವು ಆತನಿಗೆ ಸಾವಕಾಶವಾಗಿ ಬರುವಂತೆ ಕೈಸನ್ನೆ ಮಾಡಿ ಹೇಳಿದರೂ ಟ್ರ್ಯಾಕ್ಟರ ಚಾಲಕನು ಅದನ್ನು ಲೆಕ್ಕಿಸದೇ ಅದೇ ವೇಗದಲ್ಲಿ ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿಹೊಡೆದು ಅಫಘಾತ ಪಡಿಸಿದನು. ಆತನು ಡಿಕ್ಕಿಪಡಿಸಿದ ರಭಸಕ್ಕೆ ನಾವಿಬ್ಬರೂ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆವು. ನಂತರ ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ನನ್ನ ಬಲಗಾಲಿಗೆ ಭಾರಿ ಗುಪ್ತಗಾಯವಾಗಿ ಮೊಳಕಾಲಿನ ಮೇಲೆ ಮುರಿದಂತಾಗಿದ್ದು ಮತ್ತು ಮೊಳಕಾಲಿನಿಂದ ಕೆಳಗಡೆ ರಕ್ತಗಾಯ ಮತ್ತು ಸೊಂಟಕ್ಕೆ ಭಾರಿ ಗುಪ್ತಗಾಯವಾಗಿತ್ತು. ನನ್ನಂತೆ ಸಾಬಣ್ಣನಿಗೆ ಬಲಗಾಲಿನ ಮೊಳಕಾಲು ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಂತಾಗಿತ್ತು. ನಂತರ  ಟ್ರ್ಯಾಕ್ಟರ ನಂಬರ ನೋಡಲಾಗಿ ಅದರ ನಂಬರ ಕೆ.ಎ-33/ಟಿ.ಎ-5117 ಮತ್ತು ಟ್ರೈಲಿ ನಂ: ಕೆ.ಎ-33/ಟಿ-5118 ಅಂತಾ ಇತ್ತು  ಚಾಲಕನು ಘಟನೆ ನಂತರ  ಅಲ್ಲಿಂದ ಓಡಿಹೋಗಿದ್ದರಿಂದ ಆತನ ಹೆಸರು ವಿಳಾಸ ಗೊತ್ತಾಗಿಲ್ಲಾ. ನಂತರ ಯಾರೋ 108 ಅಂಬುಲೆನ್ಸ ವಾಹನಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ಅಲ್ಲಿಗೆ ಬಂದಿದ್ದರಿಂದ ನಾವಿಬ್ಬರೂ ಆ ವಾಹನದಲ್ಲಿ ಹತ್ತಿಹುಣಿ ಸಕಾರಿ ಆಸ್ಪತ್ರೆಗೆ ಬಂದು ಅಲ್ಲಿ ತಾತ್ಕಾಲಿವಾಗಿ ಉಪಚಾರ ಪಡೆದುಕೊಂಡಾಗ ಅಲ್ಲಿಗೆ ನಮ್ಮ ಸಂಬಂದಿಕರಾದ ಮರೆಪ್ಪಾ ತಂದೆ ಬಸಪ್ಪಾ ನಟೇಕಾರ ಮತ್ತು ವಂಕಾರೆಪ್ಪಾ ತಂದೆ ಯಂಕಪ್ಪಾ ಕೋಟ್ರಕಿ ಬಂದಿದ್ದು ಇವರು ನಮಗೆ ಅದೇ ಅಂಬುಲೆನ್ಸದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಲ್ಲಿಯ ವೈಧ್ಯಾಧಿಕಾರಿಗಳು  ಭಾರಿ ಗಾಯಹೊಂದಿದ ಸಾಬಣ್ಣನಿಗೆ ಹೆಚ್ಚಿನ ಉಪಚಾರಕ್ಕೆ ಹೈದ್ರಾಬಾದಕ್ಕೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ಸದರಿ ಘಟನೆಯು ನಿನ್ನೆ ದಿನಾಂಕ 25-02-2018 ರಂದು ಬೆಳಗ್ಗೆ 9 ಗಂಟೆಗೆ  ಟ್ರ್ಯಾಕ್ಟರ ನಂಬರ ಕೆ.ಎ-33/ಟಿ.ಎ-5117 ಮತ್ತು ಟ್ರೈಲಿ ನಂ: ಕೆ.ಎ-33/ಟಿ-5118 ನೆದ್ದರ ಚಾಲಕನ ಅಲಕ್ಷ್ಯತನದಿಂದ ಜರುಗಿದ್ದು ಸದರಿ ಟ್ರ್ಯಾಕ್ಟರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 38/2018 ಕಲಂ 279, 337, 338 ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 19/2018 ಕಲಂ 279, 427 ಐಪಿಸಿ;- ದಿನಾಂಕ 25/02/2018 ರಂದು ರಾತ್ರಿ 10-15 ಪಿ.ಎಂ. ಸುಮಾರಿಗೆ ಯಾದಗಿರಿ ನಗರದಲ್ಲಿನ ಗಾಂಧಿವೃತ್ತದಲ್ಲಿರುವ  ಮಹಾತ್ಮಗಾಂಧಿ ಮೂತರ್ಿ ಇರುವ ವೃತ್ತದ ಕಬ್ಬಿಣದ ಗ್ರಿಲ್ ಮತ್ತು ಗೇಟಿಗೆ ಆರೋಪಿತ ಬಸವರಾಜ ಈತನು ತನ್ನ ಟ್ರಕ್ ನಂಬರ ಎಪಿ-25, ಯು-1116 ನೇದ್ದನ್ನು  ನಿರ್ಲಕ್ಷ್ಯತನದಿಂದ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ವಾಹನವನ್ನು ರಿವರ್ಸ ತೆಗೆದುಕೊಳ್ಳುವಾಗ ಗಾಂಧಿ ವೃತ್ತದ ಗೋಡೆಗೆ ಹಾಗೂ ಕಬ್ಬಿಣದ ಗ್ರಿಲ್ಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಅಂದಾಜು 10 ಸಾವಿರದಿಂದ 15 ಸಾವಿರ ವರೆಗೆ ಲುಕ್ಸಾನ ಮಾಡಿದ್ದರ ಬಗ್ಗೆ ಫಿಯರ್ಾದಿ ಅದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ 20/2018 ಕಲಂ 279, 304(ಎ)  ಐಪಿಸಿ;-ದಿನಾಂಕ 26/02/2018 ರಂದು 2-15  ಎ.ಎಂ.ಕ್ಕೆ  ಯಾದಗಿರಿ ಜಿಜಿಎಚ್ ನಿಂದ ಪೋನ್ ಮೂಲಕ ಆರ್.ಟಿ.ಎ/ ಡೆತ್ ಎಮ್.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಮೃತನ ವಾರಸುದಾರರು ಹೇಳಿಕೆ ನೀಡುವವರು ಯಾರು ಇರದ ಕಾರಣ ಆಸ್ಪತ್ರೆಯಲ್ಲಿಯೆ ಕಾಯ್ದು ನಂತರ ಮೃತನ ತಾಯಿಯಾದ ಫಿಯರ್ಾದಿ ಶ್ರೀಮತಿ ಯಂಕಮ್ಮ ಗಂಡ ಬಸಪ್ಪ ಡೊಂಗೇರ  ವಯ;45 ವರ್ಷ, ಜಾ;ಕಬ್ಬಲಿಗ, ಉ;ಹೊಲಮನಿ ಕೆಲಸ, ಸಾ;ಕೌಳುರ, ತಾ;ಜಿ;ಯಾದಗಿರಿ ಇವರು ಆಸ್ಪತ್ರೆಗೆ  ಸಮಯ 5-30 ಎ.ಎಂ.ಕ್ಕೆ ಬಂದು ಮೃತ ಶಿವಪ್ಪ ಈತನ ಮೃತದೇಹವನ್ನು  ಗುತರ್ಿಸಿ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಹೊಲಮನಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನನಗೆ ಒಟ್ಟು 06 ಜನ ಮಕ್ಕಳಿದ್ದು ಅವರಲ್ಲಿ ಇಬ್ಬರು ಗಂಡು ಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡನು ಸುಮಾರು 10 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ನಮ್ಮ ಮನೆಯ ಒಕ್ಕುಲುತನವನ್ನು ನನ್ನ ಹಿರಿಮಗನಾದ ಶಿವಪ್ಪ ವಯಸ್ಸು 20 ವರ್ಷ ಈತನೇ ನೋಡಿಕೊಂಡು ಬರುತ್ತಿದ್ದಾನೆ.  ಹೀಗಿದ್ದು ನನ್ನ ಮಗ ಶಿವಪ್ಪನು ನಮ್ಮ ಎತ್ತುಗಳಿಗೆ ಮೇಯಿಸಲು ಶೇಂಗಾ ಹೊಟ್ಟು ಬೇಕಾಗಿದ್ದು,  ನಮ್ಮ ಸಂಬಂಧಿಕರು ಯಾಗಾಪುರದಲ್ಲಿ ಶೇಂಗಾ ಬೆಳೆದಿದ್ದು ಅವರ ರಾಶಿಯಾಗಿದ್ದರಿಂದ ಅವರ ಹತ್ತಿರ ಶೇಂಗಾ ಹೊಟ್ಟು ತೆಗೆದುಕೊಂಡು ಬರುತ್ತೇನೆ ಅಂತಾ ನನಗೆ ತಿಳಿಸಿದ್ದು ಇರುತ್ತದೆ.  ನಿನ್ನೆ ದಿನಾಂಕ 25/02/2018 ರಂದು ಸಾಯಂಕಾಲ ನಮ್ಮೂರಿನಿಂದ ಯಾಗಾಪುರಕ್ಕೆ ಹೋಗಿ ಶೇಂಗಾ ಹೊಟ್ಟು ತರಲು ನನ್ನ ಅಣ್ಣನಾದ ಶರಣಪ್ಪ ತಂದೆ ನಿಂಗಪ್ಪ ಗಡ್ಡೆಸೂಗುರು ಇವರ ಟ್ರ್ಯಾಕ್ಟರ್ ನಂ.ಕೆಎ-33, ಟಿಎ-4128 ಮತ್ತು ಟ್ರ್ಯಾಲಿ ನಂ.ಕೆಎ-36, ಟಿ-1636 ನೇದ್ದನ್ನು ತೆಗೆದುಕೊಂಡು ತನ್ನ ಸಂಗಡ ಈ ಟ್ರ್ಯಾಕ್ಟ್ರ ಚಾಲಕನಾದ ನಮ್ಮ ಸಂಬಂಧಿ ಮಲ್ಲಿಕಾಜರ್ುನ ತಂದೆ ಶಿವರಾಜ ಡೊಂಗೇರ ಸಾ;ಕೌಳುರ ಮತ್ತು ನಮ್ಮೂರಿನ ಕೂಲಿ ಜನರಾದ ದೊಡ್ಡಪ್ಪ ತಂದೆ ಬೀಮಶೆಪ್ಪ ಬಾಗ್ಲಿ, ಯಂಕಪ್ಪ ತಂದೆ ಮಲ್ಲಯ್ಯ ಡೊಂಗೇರ, ಮಹಾದೇವ ತಂದೆ ನಿಂಗಪ್ಪ ಸುರಪುರ, ರವಿ ತಂದೆ ತಿಪ್ಪಣ್ಣ ಕಾಡಿಮಗೇರಿ ಇವರೆಲ್ಲರನ್ನು ಕರೆದುಕೊಂಡು ಹೋಗಿದ್ದು ನನಗೆ ಗೊತ್ತಿರುತ್ತದೆ.  ಹೀಗಿದ್ದು ಇಂದು ದಿನಾಂಕ 26/02/2018 ರಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿದ್ದಾಗ ನನ್ನ ಅಣ್ಣನಾದ ಶರಣಪ್ಪ ತಂದೆ ನಿಂಗಪ್ಪ ಇವರು ಬಂದು ನನಗೆ ತಿಳಿಸಿದ್ದೇನೆಂದರೆ ನನ್ನ ಮೊಬೈಲ್ ನಂಬರಿಗೆ ನಮ್ಮ ಸಂಬಂಧಿ ಯಂಕಪ್ಪ ತಂದೆ ಮಲ್ಲಯ್ಯ ಡೊಂಗೇರ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನನ್ನ ಟ್ರ್ಯಾಕ್ಟರನ್ನು ನಿನ್ನ ಮಗ ಮತ್ತು ಇತರರು ಸೇರಿಕೊಂಡು ಶೇಂಗಾ ಹೊಟ್ಟು ತರಲು ಯಾಗಾಪುರಕ್ಕೆ ಹೋಗಿ, ಅಲ್ಲಿ ಶೇಂಗಾ ಹೊಟ್ಟು ಲೋಡ್ ಮಾಡಿಕೊಂಡು ಮರಳಿ ನಮ್ಮುರಿಗೆ ಬರುವಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ದಾಟಿದ ನಂತರ ಬರುವ ಮುಸ್ಲಿಂಪುರ ಏರಿಯಾದಲ್ಲಿನ ಲತಿಫಿಯಾ ಮಜೀದ್ ಹತ್ತಿರ ಮುಖ್ಯ ರಸ್ತೆಯ ಮೇಲೆ ದಿನಾಂಕ 26/02/2018 ರ ಸಮಯ ಅಂದಾಜು ಮದ್ಯರಾತ್ರಿ 1-30 ಎ.ಎಂ. ಸುಮಾರಿಗೆ ಬರುತ್ತಿರುವಾಗ ಟ್ರ್ಯಾಕ್ಟರನ್ನು ಮಲ್ಲಿಕಾಜರ್ುನ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಮುಖ್ಯ ರಸ್ತೆಯ ಮೇಲೆ ಹಾಕಿದ್ದ ರೋಡ್ ಹಂಪ್ಸ್ಗಳನ್ನು ನೋಡದೇ ಅದೇ ವೇಗದಲ್ಲಿ ಹೊರಟಿದ್ದಾಗ ಟ್ರ್ಯಾಕ್ಟ್ರ ಒಮ್ಮೊಲೆ ಜಂಪ್ ಆದಾಗ ಟ್ರ್ಯಾಕ್ಟ್ರ ಇಂಜಿನ್ ಕ್ಯಾಬಿನಿನಲ್ಲಿ ಕುಳಿತಿದ್ದ ಶಿವಪ್ಪ ಈತನು ಸಿಡಿದು  ದಪ್ ಅಂತಾ ಕೆಳಕ್ಕೆ ಬಿದ್ದಾಗ ನಾವೆಲ್ಲರೂ ಚೀರಿದಾಗ ಟ್ರ್ಯಾಕ್ಟ್ರ ಚಾಲಕ ಮಲ್ಲಿಕಾಜರ್ುನನು ಸ್ವಲ್ಪ ಮುಂದೆ ಹೋಗಿ ಟ್ರ್ಯಾಕ್ಟರ್ನ್ನು ನಿಲ್ಲಿಸಿದ್ದು ನಾವೆಲ್ಲರೂ ಕೆಳಗೆ ಇಳಿದು ನೋಡಲಾಗಿ ಶಿವಪ್ಪನಿಗೆ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ರಕ್ತಸೋರುತ್ತಿದ್ದು ಮತ್ತು ಎದೆಗೆ ಭಾರೀ ಗುಪ್ತಗಾಯವಾದಂತೆ ಕಾಣುತ್ತಿದ್ದು ಅಲ್ಲದೆ ತರಚಿದ ಗಾಯವಾಗಿದ್ದು ಇರುತ್ತದೆ. ನಾವು ಎಲ್ಲರೂ ಗಾಬರಿಯಿಂದ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ಸೇರಿಕೆ ಮಾಡಲು ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿದ್ದ ವೈದ್ಯರು ಶಿವಪ್ಪನಿಗೆ ಪರೀಕ್ಷಿಸಿ ನೋಡಿ ಶಿವಪ್ಪನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಆಗ ಸಮಯ ಮದ್ಯರಾತ್ರಿ 1;55 ಎ.ಎಂ ಆಗಿರುತ್ತದೆ. ನೀವು ತಕ್ಷಣ ಆಸ್ಪತ್ರೆಗೆ ಬರಬೇಕು ಅಂದಾಗ ನಾವಿಬ್ಬರು ಗಾಬರಿಯಿಂದ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ಶಿವಪ್ಪನ ಮೃತದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿದ್ದು ಇರುತ್ತದೆ ನಮಗೆ ಪೋನಿನಲ್ಲಿ ಯಂಕಪ್ಪ ತಿಳಿಸಿದಂತೆ ಘಟನೆ ಜರುಗಿದ್ದು ನಿಜವಿರುತ್ತದೆ. ನನ್ನ ಮಗನ ಶವವನ್ನು ನಾನು ಗುತರ್ಿಸಿರುತ್ತೇನೆ. ಸದರಿ ಅಪಘಾತವು ಇಂದು ದಿನಾಂಕ 26/02/2018 ರಂದು ಮದ್ಯರಾತ್ರಿ 1-30 ಎ.ಎಂ.ಕ್ಕೆ ಯಾದಗಿರಿ ನಗರದ ಮುಸ್ಲಿಂಪುರ ಏರಿಯಾದಲ್ಲಿ ಬರುವ  ಲತಿಫಿಯಾ ಮಜೀದ್ ಹತ್ತಿರ ಬರುವ ಮುಖ್ಯ ರಸ್ತೆಯ ಮೇಲೆ ಜರುಗಿದ್ದು ಸದರಿ ಘಟನೆಗೆ ಟ್ರ್ಯಾಕ್ಟರ  ನಂ.ಕೆಎ-33, ಟಿಎ-4128 ಮತ್ತು ಟ್ರ್ಯಾಲಿ ನಂ.ಕೆಎ-36, ಟಿ-1636 ನೇದ್ದರ ಚಾಲಕ ಮಲ್ಲಿಕಾಜರ್ುನ ಈತನ ಅತೀವೇಗ ಮತ್ತು ಅಲಕ್ಷ್ಯತನವೆ ಕಾರಣವಿದ್ದು ಇವರ ಮೇಲೆ  ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 7 ಎ.ಎಂ.ಕ್ಕೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2018 ಕಲಂ 279,  304(ಎ) ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು.
 
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 39/2018  ಕಲಂ.323,326, 504,506 ಐಪಿಸಿ;-ದಿನಾಂಕ-25-02-2018 ರಂದು 11-00 ಎಎಮ್ ಗಂಟೆಗೆ ನನ್ನ ಸಣ್ಣ ಮಗ ಸಾಬಣ್ಣ ಇತನು ನಾನಿರುವ ನನ್ನ ದೊಡ್ಡ ಮಗ ಬನ್ನಪ್ಪನ ಮನೆಗೆ ಬಂದು ಏನಪ್ಪಾ ನಿನು ನಮ್ಮ ಅಮ್ಮ ದೊಡ್ಡ ಮಗ ಬನ್ನಪ್ಪ ನಿಗೆ ನೋಡುತ್ತಿರಿ ನನಗೆ ಏನು ನೋಡುತಿಲ್ಲ ನಾನು ದೊಡ್ಡಿಯಲ್ಲಿರುವ ಬೇವಿನ ಮರ ಮತ್ತು ಜಾಲಿಮರಗಳನ್ನು ಮಾರಿಕೊಳುತ್ತೇನೆ ಅಂತಾ ಅಂದನು ಆಗ ನಾನು ನಿಮ್ಮ ಅಣ್ಣನಿಗೆ ಕೇಳಿ ಮಾರಪ್ಪಾ ಅಂತಾ ಅಂದೆನು ಏ ನಿನ್ನವ್ವನ ಮಗನೆ ಲಂಗಾ ಸೂಳೆ ಮಗನೆ ನಾನು ಏನು ಮಾಡಿದರು ಕೂಡ ಬೇಡ ಅಂತಿರಿ ಅಣ್ಣನಿಗಾದರೆ ಎಲ್ಲಾ ಕೊಡುತ್ತಿರಿ ನಿನು ಬಹಳ ನೀಚ ಸೂಳೆ ಮಗ ಇದ್ದಿ ಅಂತಾ ಬೈಯುತ್ತಾ ಅಲ್ಲೆ ಬಿದ್ದಿದ್ದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗಾಲಿನ ಮೋಣಕಾಲಿನ ಮೇಲೆ ತೋಡೆಯ ಹತ್ತಿರ ಹೊಡೆದು ಭಾರಿ ಗುಪ್ತಗಾಯ ಮಾಡಿದ್ದು ತೊಡೆಯ ಎಲಬು ಮುರಿದಂತೆ ಮೆಲನೊಟಕ್ಕೆ ಕಂಡು ಬಂದಿರುತ್ತದೆ ಆಗ ನಾನು ಚೀರಾಡುವ ಸಪ್ಪಳ ಕೇಳಿ ನನ್ನ ಹೆಂಡತಿ ಬಂದು ನನಗೆ ಹೊಡೆಯುವದನ್ನು ಬಿಡಿಸಿಕೊಂಡಳು ನನ್ನ ಹೆಂಡತಿ ಬಿಡಿಸಿಕೊಂಡಾಗ ಮಗನೇ ನಿನಗ ಯಾರು ಇಲ್ಲದಾಗ ಬಂದು ನಿನಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿ ಹೊದನು ಆಗ ನನ್ನ ಹೆಂಡತಿ ನನಗೆ ಸಮದಾನ ಮಾಡಿದಳು ನನ್ನ ದೊಡ್ಡಮಗ ಬನ್ನಪ್ಪ ಇತನು ಮಕ್ತಲ್ ಗೆ ಹೋಗಿದ್ದರಿಂದ ಆತ ಬಂದ ನಂತರ ಆಸ್ಪತ್ರೆಗೆ ಹೊದರಾಯಿತು ಅಂತಾ ಮನೆಯಲ್ಲಿ ಸುಮ್ಮನಿದ್ದೇನು ನನ್ನ ಮಗ ರಾತ್ರಿ ಬಂದಿದ್ದರಿಂದ ಆತನಿಗೆ ವಿಷಯ ತಿಳಿಸಿದೆನು ಆಗ ಆತ ಬೆಳಿಗ್ಗೆ ಆಸ್ಪತ್ರೆಗೆ ಹೋಗೊಣ ಈಗ ನಾನು ತಮ್ಮನಿಗೆ ಕೆಳುತ್ತೇನೆ ಅಂತಾ ಆತನಿಗೆ ಅಪ್ಪನಿಗೆ ಯಾಕೆ ಹೊಡೆದಿ ಅಂತಾ ಕೇಳಿದರೆ ಆತನಿಗೂ ಕೂಡ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾನೆ  ಅಂದು ರಾತ್ರಿ ಯಾಗಿದ್ದರಿಂದ ಸುಮ್ಮನಿದ್ದು ದಿನಾಂಕ-26-02-2018 ರಂದು ಮದ್ಯಹ್ನ 02-00 ಗಂಟೆ ಸುಮಾರಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಬಂದು ಸೇರಿಕೆಯಾಗಿದ್ದು ಇರುತ್ತದೆ, ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಕಪಾಳಕ್ಕೆ ಮತ್ತು ಕಲ್ಲಿನಿಂದ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಮಗ ಸಾಬಣ್ಣ ತಂದೆ ತಾಯಪ್ಪ ಮ್ಯಾಕಲ್ ಸಾ|| ಗುಡ್ಲಾಗುಂಟ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಪಿಯರ್ಾಧಿ ನಿಡಿದ್ದು ಇರುತ್ತದೆ.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 64/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 26/02/2018 ರಂದು ಬೆಳಿಗ್ಗೆ 4-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 26-02-2018 ರಂದು ಬೆಳಿಗ್ಗೆ 1-00 ಗಂಟೆಗೆ ನಾನು ಠಾಣೆಯಸಿಬ್ಬಂದಿ ರಾಮಪ್ಪ ಹೆಚ್.ಸಿ.168, ಲಕ್ಕಪ್ಪ,ಪಿ.ಸಿ, 198, ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಕರೆದು ಕೊಂಡು ಠಾಣೆಯ ಜೀಪ್ ನಂ ಕೆ.ಎ-33-ಜಿ-0138 ನ್ನೇದ್ದರಲ್ಲಿ ಹೋರಟು ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಮಾಡುತ್ತ ವಾಲ್ಮೀಕಿ ಚೌಕ ಹತ್ತಿರ ಬೆಳಿಗ್ಗೆ 1-20 ಗಂಟೆಗೆ ಇದ್ದಾಗ ದೋರನಳ್ಳಿ ಹಳ್ಳದಲ್ಲಿ ಒಂದು ಟ್ರ್ಯಾಕ್ಟರದಲ್ಲಿ  ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದಿದ್ದು ಜೀಪಿನಲ್ಲಿರುವ ಸಿಬ್ಬಂದಿಯವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿಮಾಡಬೆಕೆಂದು ತಿಳಿಸಿ ದಾಳಿ ಕುರಿತು ಹೊರಟು ದೋರನಳ್ಳೀ ಗ್ರಾಮಕ್ಕೆ ಬೆಳಿಗ್ಗೆ 1-40 ಗಂಟೆಗೆ ಹೋಗಿ ಅಲ್ಲಿ ಸಿದ್ದಾರೂಡ ಮಠದ ಮುಂದೆ ಎರಡು ಜನರು ವ್ಯೆಕ್ತಿಗಳು ನಿಂತಿದ್ದು ಜೀಪನಿಲ್ಲಿಸಿ ಸದರಿಯವರಿಗೆ ಕರೆದು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1] ಬಸವರಾಜ ತಂದೆ ಅಮೃತ ಪಸ್ಪೂಲ್ ವ|| 28 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ದೋರನಳ್ಳಿ 2] ಸುದೀರ ತಂದೆ ಬಸವರಾಜ ಸರಡಿಗಿ ವ|| 25 ಜಾ|| ಕುರುಬುರ ಉ|| ಒಕ್ಕಲುತನ ಸಾ|| ದೋರನಳ್ಳಿ ಅಂತ ತಿಳಿಸಿದರು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೇ ಬರೆಯಿಸಿಕೊಡಲು ಕೆಳೀಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಎಲ್ಲರು ಕೂಡಿ ಜೀಪಿನಲ್ಲಿ ದಾಳಿ ಕುರಿತು 1-50 ಗಂಟೆಗೆ ಹೋರಟು ದೋರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯ ಮುಂದೆ 1-55 ಗಂಟೆಗೆ ಜೀಪ ಸೈಡಿಗೆ ನಿಲ್ಲಿಸಿ ಟ್ರ್ಯಾಕ್ಟರ ಬರುವದನ್ನು ನೋಡುತ್ತ ನಿಂತಾಗ ಶಹಾಪೂರ-ಯಾದಗಿರಿ ಮುಖ್ಯರಸ್ತೆಯ ಯಾದಗಿರಿ ಕಡೆಯಿಂದ  ಬೆಳಿಗ್ಗೆ 2-00 ಗಂಟೆಗೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ. ತಮ್ಮ ಟ್ರ್ಯಾಕ್ಟರ ಮಾಲಿಕರಾದ ನನ್ನ ತಂದೆ ಶಿವಲಿಂಗಪ್ಪ ತಂದೆ ನಾಗಪ್ಪ ಆಂದೇಲಿ ಸಾ|| ದೋರನಳ್ಳಿ ಇವರು ನಮ್ಮ ಗ್ರಾಮದ ಹಳ್ಳಕ್ಕೆ ಹೋಗಿ ಹಳ್ಳದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಶಹಾಪೂರಕ್ಕೆ ಹೋಗಿ ಮಾರಾಟ ಮಾಡಲು ತಿಳೀಸಿದ್ದರಿಂದ ನಾನು ಟ್ರ್ಯಾಕ್ಟರನ್ನು ತೆಗೆದುಕೊಂಡು ನಮ್ಮ ದೋರನಳ್ಳಿ ಗ್ರಾಮದ ಹಳ್ಳಕ್ಕೆ ಹೋಗಿ ಟ್ರ್ಯಾಕ್ಟರದಲ್ಲಿ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೊರಟಿರುತ್ತೆನೆ. ಅಂತ ತಿಳಿಸಿದನು ಆಗ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ತನ್ನ ಮಲ್ಲಿಕಾಜರ್ುನ್ ತಂದೆ ಶೀವಲಿಂಗಪ್ಪ ಆಂದೇಲಿ ವ|| 24 ಜಾ|| ಕುರುಬುರ ಉ|| ಒಕ್ಕಲುತನ ಸಾ|| ದೋರನಳ್ಳಿ ಅಂತ ತಿಳಿಸಿದನು ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಬಿಳಿ, ಮತ್ತು ನೀಲಿ, ಬೂದಿ ಬಣ್ಣದ ಸ್ವರಾಜ 735ಎಕ್ಸ.ಟಿ ಕಂಪನಿಯ ಟ್ರ್ಯಾಕ್ಟರ ನಂಬರ ಇರುವದಿಲ್ಲಾ ಅದರ ಇಂಜಿನ ನಂ 391357ಖಘಇ04554 ಚೆಸ್ಸಿ ನಂ ಘಙಖಿಇ28432126408 ಅಂತ ಇದ್ದು ಸದರಿ ಟ್ರ್ಯಾಕ್ಟರಕ್ಕೆ ಹೊಂದಿಕೊಂಡು ಕೆಂಪುಬಣ್ಣದ ಟ್ರ್ಯಾಲಿ ನಂಬರ ಇರುವದಿಲ್ಲಾ ಅ:ಕಿ: 150000=00 ರೂ ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1 ಬ್ರಾಸ್ ಮರಳು ಇದ್ದು ಅದರ ಅ:ಕಿ:1500=00 ರೂ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ. ಜೀಪಿನ ಲೈಟಿನ ಬೇಳಕಿನಲ್ಲಿ ಪಂಚರ ಸಮಕ್ಷಮ ಬೆಳಿಗ್ಗೆ 2-00 ಎ.ಎಮ್. ದಿಂದ 3-00 ಎ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರ ಚಾಲಕನಿಗೆ ತನ್ನ ಟ್ರ್ಯಾಕ್ಟರನ್ನು ಠಾಣೆಗೆ ತೆಗೆದು ಕೊಂಡು ಹೋಗಲು ತಿಳಿಸಿದ್ದರಿಂದ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಬಂದು ಹಳಿಸಗರದ ಚೌಡಯ್ಯನ ಗುಡಿಯ ಹತ್ತಿರ ನಿಧಾನವಾಗಿ ಚಲಾಯಿಸಿದ ಹಾಗೆ ಮಾಡಿ ಟ್ರ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಟೈಯರ ನೋಡಿದ ಹಾಗೆ ಮಾಡಿ ಟ್ರ್ಯಾಕ್ಟರ ಬಿಟ್ಟು ಓಡಿಹೊದನು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ನಂತರ ಬೇರೆಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 3-50 ಎ.ಎಮ್.ಕ್ಕೆ ಬಂದು. ವರದಿಯನ್ನು ತಯಾರಿಸಿ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಟ್ರ್ಯಾಕ್ಟರ ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಬೆಳಿಗ್ಗೆ 4-30 ಎ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 64/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 65/2018 ಕಲಂ 379  ಐ.ಪಿ.ಸಿ  ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 26/02/2018 ರಂದು  ಮುಂಜಾನೆ 09-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗಾರಜ ಜಿ. ಪಿ.ಐ ಶಹಾಪೂರ ಪೊಲೀಸ್ ಠಾಣೆ  ರವರು ಮರಳು ತುಂಬಿದ ಒಂದು ಟ್ಯಾಕ್ಟರ ವಾಹನದೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿಪಂಚನಾಮೆ, ಹಾಗೂ ಟ್ಯಾಕ್ಟರ ವಾಹನ ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 26/02/2018 ರಂದು ಬೆಳಿಗ್ಗೆ 04-45 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕಾಯರ್ಾಚರಣೆ ಕುರಿತು. ಠಾಣೆಯಿಂದ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ.-33-ಜೆ-138 ನೇದ್ದರಲ್ಲಿ ಹೊರಟು ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ನಿಗಾ ಮಾಡುತ್ತಾ ತಿರುಗಾಡುತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದೋರನಳ್ಳಿ ಗ್ರಾಮದ ಟೋಕಾಪೂರ ಕ್ರಾಸ್ ಹತ್ತಿರ ಬೆಳಿಗ್ಗೆ 6-35 ಗಂಟೆಗೆ ಹೋಗಿ ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಬರುತಿದ್ದ ಟ್ಯಾಕ್ಟರ ನಂ ಕೆಎ-33-ಟಿ-2868 ಇರುತ್ತದೆ ಇಂಜಿನ್ ನಂಬರ ಓಎಎಖ00070  ಇದ್ದು,  ಅಂ.ಕಿ 2 ಲಕ್ಷ ರೂಪಾಯಿ ಮತ್ತು ಟ್ಯಾಕ್ಟರ ಇಂಜಿನಿಗೆ  ಹೊಂದಿಕೊಂಡಿರುವ  ಟ್ರಾಲಿ ನೋಡಲಾಗಿ ಕೆಂಪು ಬಣ್ಣದ  ಟ್ರಾಲಿ ಇದ್ದು ನಂಬರ ಪ್ಲೇಟ್ ಇರುವುದಿಲ.್ಲ  ಅಂ.ಕಿ 50,000/- ರೂಪಾಯಿ ಮತ್ತು ಸದರಿ ಟ್ಯಾಕ್ಟರ ಟ್ರಾಲಿಯಲ್ಲಿ ಅಂದಾಜು 1 ಬ್ರಾಸ್ ನಷ್ಟು ಮರಳು ಇದ್ದು ಅದರ ಅಂ.ಕಿ 1500/- ರೂಪಾಯಿ ಆಗಬಹುದು. ಸದರಿ ವಾಹನವನ್ನು ಮುಂಜಾನೆ 07-15 ಗಂಟೆಯಿಂದ 08-15 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಢಿದ್ದು ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಸರಕಾರಿಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಸಾಗಿಸುತಿದ್ದ ಬಗ್ಗೆ ದೃಡಪಟ್ಟಿದ್ದರಿಂದ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 65/2018 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 41/2018 ಕಲಂ  87 ಕೆ.ಪಿ.ಕಾಯ್ದೆ  ;- ದಿನಾಂಕ: 26-02-2018 ರಂದು 4-30 ಪಿ.ಎಂ.  ಸೂರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಪೂರ ಗ್ರಾಮದ ಸಣ್ಣ ಮಜೀದಿ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯಂದಿಂದ ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿರುವಾಗ ಸಿಬ್ಬಂಧಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮೂರು ಜನ ಆರೋಪಿತರದಿಂದ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 3400/- ರೂಗಳು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ 6 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 43/2018 ಕಲಂ.279.337.338  ಐ.ಪಿ.ಸಿ.ಮತ್ತು 187 ಐ,ಎಂ ವಿ ಯಾಕ್ಟ;- ದಿನಾಂಕ: 25/02/2018 ರಂದು ರಾರ್ತಿ 9-00 ಪಿ,ಎಂ ಕ್ಕೆ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರದಿಂದ ಬಾಲಂಕು ಆಸ್ಪರ್ತೆಯಿಂದ ಆರ್ ಟಿ, ಎಂ ಎಲ್ ಸಿ ಇದೆ ಅಂತ ಂಏಲ್ ಮುಖಾಂತರ ವಸೂಲಾದ ಮಾಹಿತಿ  ಮೇರೆಗೆ ಿಂದು ದಿನಾಂಕ:26/02/2018 ರಂದು 12 ಪಿ,ಎಂ ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾಋ ಹೊಂದುತ್ತಿದ್ದ ಗಾಯಾಳು ಪಿರ್ಯಾದಿ ,ಟಿ ಯಲ್ಲಿ ಇದ್ದುದ್ದರಿಂದ ಮತ್ತು ಗಾಯಾಳು ಮ್ಔನೇಶ ೀತನು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ  ವೈದ್ಯಾಧಿಕಾರಿಗಳು 6 ಪಿ,ಎಂ ನಂತರ ಗಾಯಾಳು ಪಿರ್ಯಾದಿ ರಾಜು @ ರಾಜಾ ಭಕ್ಷ ಇವನ ಹೇಳಿಕೆ ಪಡೆದುಕೊಳ್ಳುವಂತೆ ಲಿಖಿತವಾಗಿ ಸೂಚಿಸಿದ ಮೇರೆಗೆ ನಾಣು 6ಪಿ,ಎಂ ನಂತರ ಅಂದರೆ 6-15 ಪಿ,ಎಂ ದಿಂದ 7-15 ಪಿ,ಎಂ ವರೆಗೆ ಗಾಯಾಳು ಪಿರ್ಯಾದಿ ರಾಜು @ ರಾಜಾ ಭಕ್ಷ ತಂದೆ ಮೈನೊದ್ದಿನ ಬಂಕಲದೊಡ್ಡಿ ಸಾ|| ತಿಂಥಣಿ ಇವನಿಗೆ ವಿಚಾರಿಸಿ ಪಿಯಾಱದಿ ಹೇಳಿಕೆ ಪಡೆಯಲಾಗಿ ನಿನ್ನೆ ದಿನಾಂಕ: 25/02/2018 ರಂದು 1-30 ಪಿ,ಎಂ ಕ್ಕೆ ಕೆಂಬಾವಿಯಲ್ಲಿರುವ ನನ್ನ ಅಕ್ಕಳಿಗೆ ಮಾತನಾಡಿಸಿಕೊಂಡು ಬಂದರಾಯಿತು ಅಂತ ನನ್ನ ಗೆಳೆಯನಾದ ಮೌನೇಶ ತಂದೆ ಅಂಬ್ರೇಶ ಅಂಗಡಿ ಸಾ|| ತಿಂಥಣಿ ಇವನಿಗೆ ಜೋತೆಗೆ ಕರೆದುಕೊಂಡು ನನ್ನ ಮಾವನ MAESTRO  ಮೋಟಾರ ಸೈಕಲ ನಂ: ಕೆಎ-36 ಇಕೆ-7218 ನೇದ್ದರ ಮೇಲೆ ತಿಂಥಣಿಯಿಂದ ಹೋರಟು ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ  ಮದ್ಯಾಹ್ನ 2-30 ಪಿ,ಎಂ ಸುಮಾರಿಗೆ ಸೂರಪೂರ- ಕೆಂಬಾವಿ ಮುಖ್ಯ ರಸ್ತೆಯ ಮೇಲೆ ಬರುವ ದೇವರಗೋನಾಲ ಹತ್ತಿರ ಇರುವ ಸಿದ್ದಾರ್ಥ ಶಾಲೇ ಹತ್ತಿರ ರೋಡಿನ ೆಡಭಾಗದಲ್ಲಿ ಹೊರಟಿದ್ದಾಗ ಅದೇ ಸಮಯಕ್ಕೆ ಕೆಂಬಾವಿ ಕಡೆಯಿಂದ  ಅಂದರೆ ಎದುರಿನಿಂದ ಒಂದು ನಂಬರ ಇಲ್ಲದ ಅಶೋಕ ಲೈಲ್ಯಾಂಡ ಮಿನಿ ಗುಡ್ಸ ವಾಹನ ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ವಾಹನದ ಮೇಲೆ ನಿಯಂರ್ತಣ ಕಳೇದುಕೊಂಡು ರೋಡಿನ ಪೂರ್ತಿ ಬಲ ಭಾಗಕ್ಕೆ ಬಂದು ನಮ್ಮಮೋಟಾರ ಸೈಕಲಕ್ಕೆ ಬಲವಾಗಿ ಡಿಕ್ಕಿ ಪಡಿಸಿದನು. ಆಗ ನಾನು ಮತ್ತು ನನ್ನ ಹಿಂದೆ ಕುಳಿತ ಮೌನೇಶ ಿಬ್ಬರು ವಾಹನ ಸಮೇತ ಕೆಳಗಡೆ ಬಿದ್ದೆವು. ವಾಹನ ಡಿಕ್ಕಿ ಪಡಿಸಿದ ಪ್ರಯುಕ್ತ ನನಗೆ ಬಲ ಗದ್ದಕ್ಕೆ ರಕ್ತಗಾಯ, ಬಲ ತೋಡೆಯ ಹತ್ತಿರ , ಬಲ ಮೋಣಕಾಲ ಚಿಪ್ಪನ ಹತ್ತಿರ, ಬಲ ಮೋಣಕಾಲ ಕೆಳಗೆ ಮೂರು ಕಡೆ ಮುರಿದಿರುತ್ತದೆ. ನಂತರ ಮೌನೇಶನಿಗೆ ನೋಡಲಾಗಿ ಅವನಿಗೆ ಎಡ ಕಿವಿಯ ಹತ್ತಿರ ತರಚಿದ ಗಾಯ ಬಲ ಪಾದದ ಮೇಲೆ ಮೋಣಕಾಲಿಗೆಭಾರಿ ಪೆಟ್ಟಾಗಿ ಮುರಿದಿರುತ್ತದೆ. ಅಪಘಾತ ಪಡಿಸಿದ ನಂತರ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು ನಂತರ ಅವನನ್ನು ನೋಡಿದಲ್ಲಿ ಗುರುತಿಸುತ್ತೆವೆ. ನಂತರ ಅಲ್ಲಿಯೇ ನಮ್ಮ ಹಿಂದು ಗಡೆ ಬರುತ್ತಿದ್ದ ನಮ್ಮೂರ ಸಲಿಂಸಾಬ ತಂದೆ ಬಂದಗಿಸಾಬ ಲವಾರ ಮತ್ತು ಖಾಜಾಸಾಬ ತಂದೆ ಮೋದಿನಸಾಬ ಗುಂತಗೋಳ ಿವರು ಬಂದು ನಮಗೆ 108 ವಾಹನದಲ್ಲಿ ಉಪಚಾರಕ್ಕಾಗಿ ಜಿ,ಜಿ,ಹೆಚ್ ಸುರಪೂರಕ್ಕೆ ಸೇರಿಕೆ ಮಾಡಿರುತ್ತಾರೆ. ಅಲ್ಲಿಂಧ ನಮಗೆ ಹೆಚ್ಚಿನ ಉಪಚಾರಕ್ಕಾಗಿ ವೈದ್ಯರ ಸಲಹೆ ಮೇರೆಗೆ ರಾಯಚೂರಿನ ಆಸ್ಪತ್ರೆಗೆ ನಮ್ಮ ನಮ್ಮ ಸಂಬಂದಿಕರಾದ 1 ಸಬಜನಸಾಬ ತಂದೆ ಖಾಜಾ ಮೈನೋದ್ದಿನ ದಾಂಡೇಲಿ ಮತ್ತು 2) ಮಹಾದೇವ ತಂದೆ ಭಿಮಣ್ಣ ಅಗಡಿ ಸಾ|| ಇಬ್ಬರೂ ತಿಂಥಣಿ ರವರು ಸೇರಿಕೆ ಮಾಡಿರುತ್ತಾರೆ,ಕಾರಣ ನಮಗೆ ಅತೀ ವೇಗ ಮತ್ತು ಅಲಕ್ಷತನದಿಂಧ ವಾಹನ ಚಲಾಯಿಸಿ ಅಪಘಾತ ಪಡಿಸಿದ ಻ಶೋಕ ಲೈಲ್ಯಾಂಡ ಮಿನಿ ಗೂಡ್ಸ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈ ಕೊಳ್ಳ ಬೇಕು ಅಂತ ಹೇಳಿ ಬರೆಯಿದ ಹೇಳಿಕೆ ನಿಜವಿರುತ್ತದೆ ಅಂತ ಹೇಳಿಕೆ ಸಾರಾಂಶದ  ಮೇಲಿಂದ ಠಾಣಾ ಗುನ್ನೆ ನಂ: 43/2018 ಕಲಂ 279.337.338 ಐಪಿಸಿ ಮತ್ತು 187 ,ಎಂ ವಿ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ, 143, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ: 26/02/2018 ರಂದು ರಾತ್ರಿ 10.30 ಪಿ.ಎಮ್ ಕ್ಕೆ ಪಿಯರ್ಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನಂದರೆ, ಇಂದು ದಿನಾಂಕ:26/02/2018 ರಂದು ರಾತ್ರಿ 09.30 ಪಿಎಂ ಸುಮಾರಿಗೆ ನಾನು ಊಟ ಮಾಡಿ ನಮ್ಮ ಮನೆಯ ಮುಂದೆ ಇರುವ ಹನುಮಾನ ದೇವರ ಗುಡಿಯ ಕಟ್ಟೆ ಕಡೆಗೆ ಹೋಗುತ್ತಿದ್ದಾಗ, ಹನುಮಾನ ದೇವರ ಗುಡಿ ಮುಂದೆ ನಮ್ಮೂರಿನ 1) ಬಸವರಾಜ ತಂದೆ ಗುರುಲಿಂಗಪ್ಪ ಕಡತಗಲ್ಲ, 2) ನಾನಾಗೌಡ ತಂದೆ ಗುರುಲಿಂಗಪ್ಪ ಕಡತಗಲ್ಲ 3) ಹಣಮಂತ್ರಾಯ ತಂದೆ ಗುರುಲಿಂಗಪ್ಪ ಕಡತಗಲ್ಲ, 4) ಪರಪ್ಪ ತಂದೆ ಗುರುಲಿಂಗಪ್ಪ ಕಡತಗಲ್ಲ, 5) ಭೀಮನಗೌಡ ತಂದೆ ಗುರುಲಿಂಗಪ್ಪ ಕಡತಗಲ್ಲ, 6) ನಾಗಮ್ಮ ತಂದೆ ಬಸವರಾಜ ಕಡತಗಲ್ಲ ಎಲ್ಲರೂ ಜಾ: ಕುರುಬರ ಸಾ: ರಾಜಾಪೂರ ಇವರುಗಳು ಗುಂಪು ಕಟ್ಟಿಕೊಂಡು ನಮಗೆ ಹೊಡೆಯುವ ಉದದ್ದೇಶದಿಂದ ಬಂದು ನಮ್ಮ ತಮ್ಮನಾದ ವೆಂಕಟೇಶ ತಂದೆ ತಿಪ್ಪಣ್ಣಗೌಡ ಉದ್ದಾರ ಈತನಿಗೆ ಅವಾಚ್ಯವಾಗಿ ಬೈಯುತ್ತಾ ಜಗಳ ತಗೆಯುತ್ತಿದ್ದರು, ಆಗ ನಾನು ಯಾಕೆ ಜಗಳ ಆಡುತ್ತೀರಿ, ಯಾಕೆ ಬೈಯುತ್ತೀರಿ ಅಂತಾ ಬಿಡಿಸಿಕೊಳ್ಳಲು ಹೋದಾಗ, ಬೋಸಡಿ ಮಗನೆ ನಿನಗೆ ಕಾಯುತ್ತಿದ್ದೇವೆ ಬಾರಲೆ ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈಯ್ದು, ಎಲ್ಲರು ನನಗೆ ಸುತ್ತುವರೆದರು, ಅದರಲ್ಲಿ ಬಸವರಾಜ ಮತ್ತು ನಾನಾಗೌಡ ಇವರು ತಮ್ಮ ಕೈಯಲ್ಲಿಯ ಬಡಿಗೆಯಿಂದ ನನ್ನ ಬಲಗಡೆಯ ಮುಡ್ಡಿಗೆ, ಟೊಂಕಕ್ಕೆ ಮತ್ತು ಎಡಗೈ ಹಸ್ತದ ಹತ್ತಿರ ಹೊಡೆದು ಗುಪ್ತಗಾಯ ಮಾಡಿದರು, ಆಗ ಹಣಮಂತ್ರಾಯ ಮತ್ತು ಪರಪ್ಪ ನನಗೆ ಕೈಯಿಂದ ಬೆನ್ನಿಗೆ ಮತ್ತು ಹಣೆಗೆ ಹೊಡೆದರು, ಭೀಮನಗೌಡ ಮತ್ತು ನಾಗಮ್ಮ ಇವರು ಕೈಯಿಂದ ಹೊಡೆಯುತ್ತಾ, ಬೀಮನಗೌಡ ಬಾಯಿಂದ ನನ್ನ ಬಲಗೈ ಬೆರಳಿನ ಸಂದಿಗೆ ಮತ್ತು ಹಣೆಗೆ ಕಚ್ಚಿರುತ್ತಾರೆ, ಆಗ ನಾನು ಸತ್ತೆನೆಪ್ಪೊ ಅಂತಾ ಚೀರುತ್ತಿದ್ದಾಗ ಎಲ್ಲರೂ ನನಗೆ ಕೆಳಗೆ ಕೆಡವಿ ಕಾಲಿನಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ನನ್ನ ಹೆಂಡತಿ ಸರಸ್ವತಿ ಮತ್ತು ತಮ್ಮನ ಹೆಂಡತಿ ಮೇನಕಾಗಾಂಧಿ ಇವರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು, ಆಗ ಆರೋಪಿತರೆಲ್ಲರೂ, ಮಗನೆ ಇವತ್ತು ಉಳದಿ, ಇನ್ನೊಮ್ಮೆ ಸಿಗು ನಿನಗೆ ಜೀವ ಸಹಿತಿ ಬಿಡುವದಿಲ್ಲ ಮಗನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.
                ಕಾರಣ ನನಗೆ ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 28/2018  ಕಲಂ 143, 147, 148, 323, 324, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
  
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 29/2018 ಕಲಂ, 341, 323, 324, 427, 504, 506 ಸಂ: 34 ಐಪಿಸಿ;- ದಿನಾಂಕ: 26/02/2018 ರಂದು ರಾತ್ರಿ 11.30 ಪಿ.ಎಮ್ ಕ್ಕೆ ಪಿಯರ್ಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನಂದರೆ, ಇಂದು ಇಂದು ದಿನಾಂಕ:26/02/2018 ರಂದು ಸಾಯಂಕಾಲ 06.30 ಗಂಟೆ ಸುಮಾರಿಗೆ ನಮ್ಮ ಸಂಬಂದಿಕರಲ್ಲಿಯ ವೆಂಕಟೇಶ @ ಮುದುಕಪ್ಪ ತಂದೆ ತಿಪ್ಪಣ್ಣಗೌಡ ಉದ್ದಾರ ಈತನು ಸುಮಾರು 6 ತಿಂಗಳ ಹಿಂದೆ ಕೊಟ್ಟ 5000=00 ರೂಪಾಯಿ ಹಣ ಮರಳಿ ಕೊಡು ಅಂತಾ ಕೇಳಿದ್ದಕ್ಕೆ ನನಗೆ ಅವಾಚ್ಯವಾಗಿ ಬೈಯ್ದು ಜಗಳ ಮಾಡಿದ್ದನು. ನಾನು ಹಿರಿಯರಿಗೆ ಹೇಳಿ ವಿಚಾರ ಮಾಡಿದರಾಯಿತು ಅಂತಾ ಸುಮ್ಮನಾದೆನು. ನಂತರ ಇಂದು ರಾತ್ರಿ 09.30 ಪಿಎಂ ಸುಮಾರಿಗೆ ನಾನು ಊಟ ಮಾಡಿದರಾಯಿತು ಅಂತಾ ನಮ್ಮೂರ ಹನುಮಾನ ದೇವರ ಗುಡಿಯಿಂದ ನಮ್ಮ ಮನೆಗೆ ಹೊಗುತ್ತಿದ್ದಾಗ 1) ವೆಂಕಟೇಶ @ ಮುದುಕಪ್ಪ ತಂದೆ ತಿಪ್ಪಣ್ಣಗೌಡ ಉದ್ದಾರ ಮತ್ತು 2) ಕೃಷ್ಣಪ್ಪ ತಂದೆ ತಿಪ್ಪಣ್ಣಗೌಡ ಉದ್ದಾರ ಇವರಿಬ್ಬರು ಕೂಡಿ ಬಂದು ನನಗೆ ತಡೆದು ನಿಲ್ಲಿಸಿ, ಸೂಳೆ ಮಗನೆ ನಮಗೆ ಹಣ ಕೇಳುವಷ್ಟು ದೈರ್ಯ ಬಂತಾ ಮಕ್ಕಳೆ ನಿಮಗೆ, ಬರ್ರೆಲೆ ಎಷ್ಟು ಜನ ಇದ್ದೀರಿ ಅಂತಾ ನನಗೆ ಇಬ್ಬರು ಕೂಡಿ ಕೈಯಿಂದ ಹೊಡೆಯತೊಡಗಿದರು, ಆಗ ಕೃಷ್ಣಪ್ಪ ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಹೊಟ್ಟೆಗೆ ಹೊಡೆದು ಗುಪ್ತಪೆಟ್ಟು ಮಾಡಿದ, ಅಷ್ಟರಲ್ಲಿ ನಮ್ಮ ಅಣ್ಣಂದಿರಾದ ಬಸವರಾಜ, ಮತ್ತು ನಾನಾಗೌಡ ಇವರುಗಳು ಬಿಡಿಸಲು ಬಂದಾಗ ಕೃಷ್ಣಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಸವರಾಜ ಈತನ ಬೆನ್ನಿಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದ. ವೆಂಕಟೆಶ@ ಮುದುಕಪ್ಪ ಈತನು ಕೈಯಿಂದ ನಾನಾಗೌಡ ಈತನಿಗೆ ಕಪಾಳಕ್ಕೆ ಹೊಡೆದನು. ಆಗ ಅಲ್ಲಿಗೆ ಬಂದ ನಮ್ಮ ತಮ್ಮಂದಿರಾದ ಭಿಮನಗೌಡ, ಪ್ರಕಾಶ, ಇವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ನಂತರ ಕೃಷ್ಣಪ್ಪ ಮತ್ತು ವೆಂಕಟೆಶ ಇವರು ಮಕ್ಕಳೆ ಇನ್ನೊಮ್ಮೆ ನಮಗೆ ಹಣ ಕೇಳಲು ಬಂದರೆ ನಿಮಗೆ ಜೀವದಿಂದ ಊಳಿಸುವದಿಲ್ಲ, ಖಲಾಸ್ ಮಾಡಿಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದರು. ನನಗೆ ಮತ್ತು ನಮ್ಮ ಅಣ್ಣ ಬಸವರಾಜ ಈತನಿಗೆ ಬಹಳ ಗುಪ್ತಪೆಟ್ಟಾಗಿದ್ದು ನಮಗೆ ಆಸ್ಪತ್ರೆಗೆ ಕಳುಹಿಸಬೇಕು ಮತ್ತು ನಮಗೆ ಕೈಯಿಂದ ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕನೂನು ಕ್ರಮ ಜರುಗಿಸಬೇಕು ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 29/2018  ಕಲಂ 341 323, 324, 427, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: