Police Bhavan Kalaburagi

Police Bhavan Kalaburagi

Thursday, June 21, 2018

BIDAR DISTRICT DAILY CRIME UPDATE 21-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-06-2018

d£ÀªÁqÁ ¥Éưøï oÁuÉ AiÀÄÄ.r.Dgï £ÀA. 07/2018, PÀ®A. 379 L¦¹ :-
ಫಿರ್ಯಾದಿ ಕವಿತಾ ಗಂಡ ಸಂಜುಕುಮಾರ ಜಟಗೊಂಡ ಸಾ: ಅಲ್ಲಾಪೂರ ಗ್ರಾಮ ರವರ ಮಾವನಾದ ನಾಗಪ್ಪಾ ಜಟಗೊಂಡಾ ರವರಿಗೆ ಅಲ್ಲಾಪೂರ ಗ್ರಾಮದ ಹೊಲ ಸರ್ವೆ ನಂಬರ 15 ನೇದ್ದರಲ್ಲಿ 01 ಎಕರೆ 01 ಗುಂಟೆ ಜಮೀನು ಇದ್ದು, ಜಮೀನಿಗೆ ವರ್ಷ ಪಿ.ಕೆ.ಪಿ.ಎಸ್ ಬ್ಯಾಂಕ ನೇಮತಾಬಾದ (ಅಲ್ಲಾಪೂರ) ದಿಂದ 18,300/- ಸಾಲ ಪಡೆದಿದ್ದು, ಹೀಗಿರುವಾಗ ಹೊಲ ಬಿತ್ತುವ ಸಮಯ ಬಂದಿದೆ ಸರಿಯಾಗಿ ಮಳೆ ಬಿಳುತ್ತಿಲ್ಲಾ ಅಂತ ಪಿರ್ಯಾದಿಯವರ ಗಂಡ ತಮ್ಮ ತಂದೆ ತಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಅದೆ ಒಂದು ಕೊರಗಿನಲ್ಲಿ ಇರುತ್ತಿದ್ದರು, ಆವಾಗ ಫಿರ್ಯಾದಿಯು ತನ್ನ ಗಂಡನಿಗೆ ಇಂದು ಇಲ್ಲಾ ನಾಳೆ ಸಾಲ ತಿರಿಸೋಣಾ ಅಂತಾ ಧೈರ್ಯ ಹೇಳುತ್ತಾ ಬಂದಿದ್ದು, ಹೀಗಿರುವಾಗ ದಿನಾಂಕ 19-06-2018 ರಂದು ಫಿರ್ಯಾದಿ ಹಾಗೂ ಫಿರ್ಯಾದಿಯವರ ಗಂಡ ಸಂಜುಕುಮಾರ ಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಗಂಡ ಹೊಲದಲ್ಲಿದ್ದ ಹುಲ್ಲಿಗೆ ಹೊಡೆಯುವ ಔಷಧ ಕುಡಿದಿರುತ್ತಾರೆ, ತಕ್ಷಣ ಅವರಿಗೆ ಫಿರ್ಯಾದಿಯು ನೋಡಿ ಹಾಗೂ ಪಕದ್ದ ಹೊಲದಲ್ಲಿ ಕೆಲಸ ಮಾಡುತ್ತಿರುವ ಶ್ರೀಪತಿ ಅವರ ಜೊತೆಯಲ್ಲಿ ಒಂದು ಖಾಸಗಿ ಆಟೋದಲ್ಲಿ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-06-2018 ರಂದು ಫಿರ್ಯಾದಿಯವರ ಗಂಡ ಸಂಜುಕುಮಾರ ತಂದೆ ನಾಗಪ್ಪಾ ಜಟಗೊಂಡ, ವಯ 35 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲಾಪೂರ ಗ್ರಾಮ ಇವರು ಮೃತಪಟ್ಟಿರುತ್ತಾರೆ, ಸಂಜುಕುಮಾರ ರವರು ತಮ್ಮ ತಂದೆ ತಂಸಾಲವನ್ನು ಹೇಗೆ ತಿರಿಸುತ್ತಾರೆಂದು ಅದೇ ಒಂದು ಕೊರಗಿನಲ್ಲಿ ಔಷಧ ಕುಡಿದು ಮೃತಪಟ್ಟಿರುತ್ತಾರೆ, ಅವರ ಸವಿನ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: