Police Bhavan Kalaburagi

Police Bhavan Kalaburagi

Thursday, August 16, 2018

Yadgir District Reported Crimes Updated on 16-08-2018


                                                  Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 268/2018 ಕಲಂ:143,147,148,341,323,326,504,506 ಸಂಗಡ 149 ಐಪಿಸಿ;- ದಿನಾಂಕ 15.08.2018 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳುಗಳು ಹಾಗೂ ಇತರರು ಸೇರಿ ಕಂದಕೂರು ಗ್ರಾಮದ ಕೊಂಡಮಾಯಿ ಜಾತ್ರೆ ಮುಗಿಸಿಕೊಂಡು ಮರಳಿ ಬಳಿಚಕ್ರದೊಡ್ಡ ತಾಂಡಾಕ್ಕೆ ಹೋಗುತ್ತಿದ್ದಾಗ ಆರೋಪಿತರೆಲಾರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಬಂದು ಸದರಿಯವರಿಗೆ ತಡೆದುನಿಲ್ಲಿಸಿ ಕೈಯಿಂದ ಕಟ್ಟಿಗೆಯಿಂದ ಮತ್ತು ಕಬ್ಬಿಣದ ಸಾಮಾನುಗಳಿಂದ ಹೊಡೆ-ಬಡೆ ಮಾಡಿ ಸಾಧಾ ಹಾಗೂ ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 268/2018 ಕಲಂ: 143, 147, 148, 341, 323, 326, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 377/2018 ಕಲಂ 279 338 ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ;- 15/08/2018  ರಂದು ಬೆಳಿಗ್ಗೆ 10.00 ಎ.ಎಂ.ಕ್ಕೆ ಶ್ರೀ ಇಂದ್ರಸಿಂಗ್ ತಂದೆ ತುಳಜಾರಾಮಸಿಂಗ್ ರಜಪೂತ್ ಸಾ|| ವಿಧ್ಯಾನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:14/08/2018 ರಂದು ಸಾಯಂಕಾಲ 04:00 ಪಿಎಂಕ್ಕೆ ಅಣ್ಣ ದೇವಸಿಂಗ್ ಈತನು ಪಾಲಕಮ್ಮ ಗುಡಿಯ ಹತ್ತಿರ ನಿಲ್ಲಿಸಿದ್ದ, ಎಗ್ಗ ರೈಸ್ ಬಂಡಿಯನ್ನು ತಗೆದುಕೊಂಡು ಬಸವೇಶ್ವರ ವೃತದ ಹತ್ತಿರ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ನಮ್ಮ ಮೋಟರ ಸೈಕಲ್ ನಂ.ಕೆಎ-33 ವ್ಹಿ-0954 ನೇದ್ದರ ಮೇಲೆ ಹೋದನು. ನಂತರ ರಾತ್ರಿ 11:20 ಪಿಎಂ ಸುಮಾರಿಗೆ ನನಗೆ ಪರಿಚಯದವನಾದ ಮಲ್ಲಿಕಾಜರ್ುನ ಈತನು ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ಅಮೀರ ಇಬ್ಬರು ಕೂಡಿ ಶಹಾಪುರ ಪಟ್ಟಣದ ಶಹಾಪುರ-ಹತ್ತಿಗುಡೂರ ರೋಡಿನಲ್ಲಿಯ ಎ & ಎ ಗ್ಯಾರೇಜ್ ಹತ್ತಿರ ಇರುವ ಬ್ರಿಡ್ಜ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ ನಿಮ್ಮ ಅಣ್ಣ ದೇವಸಿಂಗ್ ಈತನು ರಾತ್ರಿ 11:10 ಪಿಎಂ ಸುಮಾರಿಗೆ ಬ್ರಿಡ್ಜ ದಾಟಿ 'ಸಾಯಿ ಪವರ ಸ್ಪ್ರೆಯರ' ಮುಂದೆ ಹೊರಟಾಗ ಹಿಂದಿನಿಂದ ಅಂದರೆ ಹತ್ತಿಗುಡೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ.ನಂ. ಕೆಎ-36 ಬಿ-4727 ನೇದ್ದರ ಚಾಲಕ ನಿಂಗಪ್ಪ ತಂದೆ ನಾಗಪ್ಪ ಸಾ|| ವಿಭೂತಿಹಳ್ಳಿ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ದೇವಸಿಂಗನ ಮೋಟರ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಭಾರಿ ಅಪಘಾತವಾಗಿದ್ದು, ಸದರಿಯವನಿಗೆ ಶಹಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಎಫ್.ಐ.ಆರ್ ಮಾಡಲು ತಿಳಿಸಿದ್ದರಿಂದ  ಸದರ ದೂರಿನ ಸಾರಾಂಶದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ. 377/2018 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
 
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 126/2018 ಕಲಂ: 143, 147, 148, 341, 323, 324, 307, 504, 506, 427 ಸಂಗಡ 149 ಐಪಿಸಿ;- ದಿನಾಂಕ:15.08.2018 ರಂರು ನಾನು ಬೆಳಗ್ಗೆ 08:00 ಗಂಟೆಗೆ ಪಿಎಸ್ಐ  ರವರ ಆದೇಶದಮೇರೆಗೆ ಗಾಯಾಳು ಮಲ್ಲಣ್ಣ ತಂದೆ ಹಣಮಂತ್ರಾಯ ಗುಡಿ ಸಾ:ಗುಡೇರದೊಡ್ಡಿ ಕಕ್ಕೇರಾ ರವರ ಎಮ್.ಎಲ್.ಸಿ  ವಿಚಾರಣೆ ಕುರಿತು ಸುರುಪುರ ತಾಲೂಕ ಸರಸಕಾರಿ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದು ಸದರಿ ಗಾಯಾಳುವಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲ್ಬುಗರ್ಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ ಬಗ್ಗೆ ತಿಳಿಸಿದರಿಂದ ನಾನು ಕಲ್ಬುಗರ್ಿ ಸರಕಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಮಲ್ಲಣ್ಣ ತಂದೆ ಹಣಮಂತ್ರಾಯ ಗುಡಿ ವ:25 ಜಾ;ಬೇಡರ ಉ;ಕೂಲಿಕೇಲಸ ಸಾ:ಗುಡೇರದೊಡ್ಡಿ ಕಕ್ಕೇರಾ ಇತನಿಗೆ ಘಟನೆಯ ಬಗ್ಗೆ ವಿಚಾರಿಸಿ ಸದರಿ ಯವನ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಈ ದಿವಸ 3-00 ಪಿಎಮ್ ದಿಂದ 4-00 ಪಿಎಮ್ ವರೆಗೆ ಪಡೆದುಕೊಂಡು ಸದರಿ ಪಿಯರ್ಾದಿಯ ಹೇಳಿಕೆಯೊಂದಿಗೆ ಮರಳಿ ಠಾಣೇಗೆ 9-00 ಪಿಎಮ್ ಕ್ಕೆ ಬಂದಿದ್ದು ಸದರಿ ಪಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳು ಇದ್ದು ನಾನು ಎರಡೆನೆಯವನು ನನಗೆ ಮದುವೆಯಾಗಿದ್ದು ಒಂದು ಗಂಡು ಮಗು ಇರುತ್ತದೆ. ಈಗ ಸುಮಾರು ಎರಡು ವರ್ಷಗಳ ಹಿಂದೆ ಕಕ್ಕೆರಾ ದಳರದೊಡ್ಡಿಯ ಹುಡುಗರು ಕಕ್ಕೆರಾ ನಮ್ಮೂರಿಗೆ ಬಂದು ಕನಕದಾಸ ಚೌಕ್ ಹತ್ತಿರ ಜಗಳ ತೆಗೆದು ಹೊಡೆಬಡೆ ಮಾಡಿ ನಮ್ಮವರ ಮೇಲೆ ಹಲ್ಲೆ ಮಾಡಿದ್ದರು.ಈ ಬಗ್ಗೆ ಅವರ ಮೇಲೆ ಕೇಸು ಆಗಿದ್ದು ಆವಾಗಿನಿಂದ ನಮ್ಮ ಮೇಲೆ ವೈಶಮ್ಯ ಇಟ್ಟುಕೊಂಡಿದ್ದರು.
      ಹೀಗಿರುವಾಗ ದಿನಾಂಕ:14.08.2018 ರಂದು ಬೆಳಿೆಗ್ಗೆ 09:00 ಗಂಟೆಗೆ ಸುಮಾರಿಗೆ ನಾನು ಮತ್ತು ರಾಜುಗೌಡ ತಂದೆ ಯಂಕೊಬ ದೋರೆ, ಮಾನಪ್ಪ ತಂದೆ ಮಲ್ಲಪ್ಪ ಎಲ್ಲರು ಕೂಡಿಕೊಂಡು ನಮ್ಮ ಸಂಬಂಧಿಕರಾದ ದೇವನಗೌಡ ತಂದೆ ಹಣಮಂತ್ರಾಯ ಇವರು ಲಿಂಗಸುಗೂರಿನಲ್ಲಿ ಇರುವದರಿಂದ ನಮ್ಮ ಎಂಡಿವೊರ ನಂ.ಎಮ್ ಹೆಚ್-12 ಜಿಎಮ್-9500 ನೆದ್ದರಲ್ಲಿ ಲಿಂಗಸುಗೂರಕ್ಕೆ ಹೋಗಿ ಮರಳಿ ಅದೆ ವಾಹನದಲ್ಲಿ ದೇವನಗೌಡನೊಂದಿಗೆ ಅಗಸ್ಟ 15 ಸ್ವಾತಂತ್ರ್ಯ ದಿನಾಚರಣೆ ಹಬ್ಬ ಪ್ರಯುಕ್ತ ಚೆನ್ನಪಟ್ಟಣಕ್ಕೆ ಹೋಗುವ ಸಲುವಾಗಿ ಕಕ್ಕೇರಾಕ್ಕೆ ಬಂದು ಶ್ರೀ ಸಂಗಮೇಶ್ವರ ಗುಡಿಯ ಹತ್ತಿರ ಇರುವಾಗ ಶರಣುಕುಮಾರ ಸೊಲ್ಲಾಪುರ ಇವರ ಅಂಗಡಿಯ ಮುಂದಿನ ರೋಡ ಮೇಲೆ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹೊರಟಾಗ 1) ಶರಣಕುಮಾರ ತಂದೆ ಬೀಮರಾಯ ಸೊಲ್ಲಾಪುರ 2) ಅಂಬ್ರೇಶ ತಂದೆ ಬೀಮರಾಯ ಸೊಲ್ಲಾಪುರ 3) ಮಾನಪ್ಪ ತಂದ ಎಬೀಮರಾಯ ಸೊಲ್ಲಾಪುರ 4) ಹಯ್ಯಾಳಪ್ಪ ತಂದೆ ಬೀಮರಾಯ ಸೊಲ್ಲಾಪುರ 5) ಹಣಮಂತ ತಂದೆ ಬೀಮರಾಯ ಸೊಲ್ಲಾಪುರೆ 6) ಅಂಬ್ರಪ್ಪ ತಂದೆ ಬೊಜಪ್ಪ ದಳರ 7) ತಿಮ್ಮಣ್ಣ ತಂದೆ ಬೊಜಪ್ಪ ದಳರ 8) ಶಿವಪ್ಪ ದಳರ 9) ಹಣಮಂತ ತಂದೆ ಬಾಲಪ್ಪ ಬೈಲಾಪರ 10) ಭೀಮರಾಯ ತಂದೆ ಶಿವಪ್ಪ ಸೊಲ್ಲಾಪುರ ಇವರೆಲ್ಲರು ಸೇರಿ ನಾವು ಹೋಗುವ ವಾಹನವನ್ನು ನೋಡಿ ಎಲ್ಲರು ಕೇಕೆ ಹಾಕುತ್ತಾ ಇವತ್ತು ಬ್ಯಾಟಿ ಸಿಕ್ಕಾವ ಬಿಡುವದು ಬೇಡ್ರಿ ಅಂತ ಕೈಯಲ್ಲಿ ರಾಡು ಮಚ್ಚು ಬಡಿಗೆಗಳನ್ನು ಹಿಡಿದು ಬಂದವರೆ ನಮ್ಮ ವಾಹನವನ್ನು ತಡೆದು ನಿಲ್ಲಿಸಿ ಅವರಲ್ಲಿಯ ಶರಣಕುಮಾರ ಇತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಾಗ ಎಡಗೈ ತೋರು ಬೆರಳಿಗೆ ಎಟು ಬಿದ್ದು ಬಾರಿ ರಕ್ತಗಾಯವಾಯಿತು. ಆಗ ನಾವು ಅವರಿಗೆ ಅಂಜಿ ವಾಹನದಿಂದ ಕೆಳಗೆ ಇಳಿದಾಗ ಅಂಬ್ರೇಶ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ಕೊಲೆಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಮಾನಪ್ಪ ತಂದೆ ಭೀಮರಾಯ, ಹಯ್ಯಾಳಪ್ಪ ತಂದೆ ಭೀಮರಾಯ ಇವರು ರಾಜುವಿನ ತೆಕ್ಕೆಗೆ ಬಿದ್ದು ಕೆಳಗೆ ಕೆಡವಿ ಕೈಯಿಂದ ಅವನ ಬೆನ್ನಿಗೆ ಗುದ್ದಿ, ಕಾಲಿನಿಂದ ಅವನ ಮೈಮೇಲೆ ಒದ್ದು ಒಳಪೆಟ್ಟು ಮಾಡಿದರು. ರಾಜುವಿನ ಹತ್ತಿರ ಇರುವ ಕೊರಳಲ್ಲಿಯ 20 ಗ್ರಾಂ ಬಂಗಾರದ ಚೈನ್ ಕಳೆದಿರುತ್ತದೆ. ಹಣಮಂತ ತಂದೆ ಭೀಮರಾಯ, ಅಮರಪ್ಪ ತಂದೆ ಬೊಜಪ್ಪ, ತಿಮ್ಮಣ್ಣ ತಂದೆ ಬೊಜಪ್ಪ ರವರೂ ಕೂಡಾ ರಾಜುವಿಗೆ ಕೈ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟುಮಾಡಿದರು. ಇನ್ನೊಮ್ಮೆ ಈ ಸೂಳೆಮಕ್ಕಳೂ ಈ ದಾರಿಗೆ ಬರಬಾರದು ಅಂತ ಅವಾಚ್ಯ ಶಬ್ದಗಳಿಂದ ಬೈದರು. ಶಿವಪ್ಪ ದಳರ, ಹಣಮಂತ್ರಾಯ ತಂದೆ ಬಾಲಪ್ಪ, ಭೀಮರಾಯ ತಂದೆ ಶಿವಪ್ಪ ಇವರು ಮಾನಪ್ಪನಿಗೆ ಹಿಡಿದು ಕೈಯಿಂದ ಅವನ ಬೆನ್ನ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಡ್ಡ ಕಲ್ಲುಗಳನ್ನು ಎತ್ತಿ ಕೊಂಡು ನಮ್ಮ ಎಂಡಿವೊರ್ ವಾಹನದ ಮೇಲೆ ಹಾಕಿ  ಗ್ಲಾಸ್ ಮತ್ತು ವಾಹನವನ್ನು ಜಖಮಗೊಳಿಸಿರುತ್ತಾರೆ. ಅಂದಾಜು ಕಿಮ್ಮತ್ತು ಮೂರು ಲಕ್ಷ ರೂಪಾಯಿಗಳ ಕಿಮ್ಮತ್ತಿನ ವಾಹನ ಜಖಮಗೊಳಿಸಿ ನಾಶಪಡಿಸಿರುತ್ತಾರೆ. ಆಗ ಅಲ್ಲಿಯೆ ಇದ್ದ ಶಿವು ತಂದೆ ಹಣಮಂತ್ರಾಯ ಗುಡಿ, ಹಯ್ಯಾಳಪ್ಪ ತಂದೆ ಮಾಹಾದೇವಪ್ಪ ಅಸ್ಕಿ, ರಾಘವೇಂದ್ರ ಕಂಬ್ಳಿ, ಅಯ್ಯಣ್ಣ ತಂದೆ ಹಣಮಂತ ಚಿಂಚೊಡಿ, ರಂಗಪ್ಪ ಗುಡಿ ಜಾಲಹಳ್ಳಿ, ವೆಂಕಟೇಶ ತಂದೆ ಜೊಗಪ್ಪ ಮಲಮುತ್ತೆರದೊಡ್ಡಿ ಇವರು ಘಟನೆಯನ್ನು ನೋಡಿ ಜಗಳವನ್ನು ಬಿಡಿಸಿದಾಗ ನಾನು ಮತ್ತು ನನ್ನ ಸಂಗಡ ಇದ್ದವರು ವಾಹನ ಬಿಟ್ಟು ಅಂಜಿ ಓಡಿ ಬಂದೆವು. ನನಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ನಿನ್ನೆ ಸುರಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನಮ್ಮ ವಾಹನವನ್ನು ತಡೆದು ನಿಲ್ಲಿಸಿ ರಾಡುಗಳಿಂದ ನಮಗೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಫೀಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:126/2018 ಕಲಂ: 143, 147, 148, 341, 323, 324, 307, 504, 506, 427 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: