Police Bhavan Kalaburagi

Police Bhavan Kalaburagi

Friday, December 4, 2020

BIDAR DISTRICT DAILY CRIME UPDATE 04-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-12-2020

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 106/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 03-12-2020 ರಂದು ಫಿರ್ಯಾದಿ ಹಾವಗೀರಾವ ತಂದೆ ನಾಗನಾಥ ಬಿರಾದರ, ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಮಾಧವ ನಗರ ಬೀದರ ರವರು ಮಾಧವ ನಗರದಿಂದ ಬೀದರ ನಗರಕ್ಕೆ ಹೋಗುತ್ತಿರುವಾಗ ಪಾಪನಾಶ 2ನೇ ಗೇಟ ಹತ್ತಿರ ಬಂದಾಗ ನೌಬಾದ ಕಡೆಯಿಂದ ಬೀದರ ಕಡೆಗೆ ಮೋಟಾರ ಸೈಕಲ ನಂ. ಕೆಎ-38/ಹೆಚ್-5528 ನೇದರ ಚಾಲಕನಾದ ಆರೋಪಿ ನಂ. 1 ಸಂಜುಕುಮಾರ ತಂದೆ ಯೇಶಪ್ಪಾ ಮಜಗೇನೋರ್ ವಯ: 25 ವರ್ಷ, ಜಾತಿ: ಕ್ರಿಶ್ವಯನ್, ಸಾ: ಶ್ರೀಮಂಡಲ ಬೀದರ ಇತನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮತ್ತು ಬೀದರ ಕಡೆಯಿಂದ ನೌಬಾದ ಕಡೆಗೆ ಲಾರಿ ನಂ. ಎಪಿ-24/ಟಿ.ಬಿ-1279 ನೇದರ ಚಾಲಕನಾದ ಆರೋಪಿ ನಂ. 2 ಇತನು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಎದುರು ಬದುರು ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಮೋಟಾರ ಸೈಕಲ ಚಾಲಕನಿಗೆ ಬಲಗಾಲ ಮೋಣಕಾಲ ಕೆಳಗೆ ಭಾರಿ ಗುಪ್ತಗಾಯ, ಬಲಭುಜಕ್ಕೆ  ಗುಪ್ತಗಾಯ, ಬಲಗಣ್ಣಿನ ಮೇಲೆ ರಕ್ತಗಾಯವಾಗಿರುತ್ತದೆ, ಲಾರಿ ನೇದರ ಚಾಲಕ ತನ್ನ ಲಾರಿನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಸಂಜುಕುಮಾರ ಇತನಿಗೆ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 74/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 03-12-2020 ರಂದು ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾರೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01/- ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿರುವುದನ್ನು ಕಂಡು ಪಿಎಸ್ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ರಾಜಕುಮಾರ ತಂದೆ  ಮಲ್ಲಿಕಾರ್ಜುನ ಇಪ್ಪಿ ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ಹಿರನಾಗಾಂವ, ತಾ: ಬಸವಕಲ್ಯಾಣ, 2) ಅಮ್ರುತ  ತಂದೆ ಲಕ್ಷ್ಮಣ ಸನಾಮಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಹಿರನಾಗಾಂವ ಅಂತ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ವ್ಯಕ್ತಿಗಳನ್ನು ಪರಿಶಿಲಿಸಿ ಅವರಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 4200/- ರೂಪಾಯಿ ನಗದು ಹಣ ಮತ್ತು 2 ಬಾಲ್ ಪೆನ್ನು ಹಾಗೂ ಮಟಕಾ ಅಂಕಿಗಳು ಸಿಕ್ಕಿದ್ದು, ನಂತರ ಇವುಗಳ ಬಗ್ಗೆ ವಿಚಾರಿಸಲು ನಾವು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡಿರುತ್ತೆವೆ, ಹೀಗೆ ನಾವಿಬ್ಬರು ಕೂಡಿ ವ್ಯವಹಾರ ಮಾಡುತ್ತೆವೆ ಅಂತಾ ತಿಳಿಸಿದರು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: