Police Bhavan Kalaburagi

Police Bhavan Kalaburagi

Friday, June 14, 2019

KALABURAGI DISTRICT REPORTED CRIMES


ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 13/06/2019 ರಂದು ಮಧ್ಯಾಹ್ನ ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ  ಕಲಬುರಗಿ ನಗರದ ರಿಂಗ ರೋಡಿಗೆ ಇರುವ  ಮಹ್ಮದ ರಫೀಕ ಚೌಕ ಕ್ರಾಸನಲ್ಲಿ ಮೂರು ಜನರು ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಅಂಕಿ ಸಂಖ್ಯೆ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀಮತಿ ಗೀತಾ ಪ್ರೊ.ಡಿ.ಎಸ್.ಪಿ. ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಕ್ರಾಸನಲ್ಲಿ  ನಿಂತಿರುವ ಆಟೋರಿಕ್ಷಾಗಳ ಮರೆಯಲ್ಲಿ ನಿಂತು ನೋಡಲು  ಮೂರು ಜನರು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಚೌಕ  ಕ್ರಾಸನಲ್ಲಿ ಇರುವ  ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗಿ-ಬರುವ ಸಾರ್ವಜನಿಕರಿಗೆ 01 ರೂ.ಗೆ 80 ರೂ.ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಅವರಿಗೆ  ಮಟಕಾ ಅಂಕಿ ಸಂಖ್ಯೆ ಚೀಟಿಗಳು ಬರೆದುಕೊಡುತ್ತಿದ್ದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿಯಲು ಮಟಕಾ ಅಂಕಿ ಸಂಖ್ಯೆ ಬರೆಯಿಸಲು ಬಂದ ಜನರು ಅಲ್ಲಿಂದ ಓಡಿ ಹೋದರು. ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಮೂರು ಜನರಿಗೆ ನಾನು ಮತ್ತು ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡು  ಅವನ ಹೆಸರು ವಿಳಾಸ ವಿಚಾರಿಸಲೂ  ಅವರಲ್ಲಿ ಒಬ್ಬನು ತನ್ನ ಹೆಸರು 1)ಅಕ್ಬರ ತಂದೆ  ಮಕಬೂಲಸಾಬ  ಮೂಲಗೆ ಸಾ: ಬಂದೇನವಾಜ ಮಜೀದ ಹತ್ತಿರ ಮಿಲ್ಲತ ನಗರ ಕಲಬುರಗಿ. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1240/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 2)ರುಕ್ಕಮೋದ್ದಿನ ತಂದೆ ಮಶಾಕಸಾಬ  ಪಿಂಜಾರ ಸಾ: ಜಂಜಂ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1860/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 3) ಮಹ್ಮದ ಸದ್ದಾಂ ತಂದೆ ಸತ್ತಾರಮಿಯ್ಯಾ  ಸಾ:  ನೂರಾನಿ ಮೊಹಲ್ಲಾ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1780/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. ನಂತರ  ಅಕ್ಬರ, ರುಕ್ಕಮೋದ್ದಿನ, ಮಹ್ಮದ ಸದ್ದಾಂ ಮೂರು ಜನರಿಗೆ ಮಟಕಾ ಚೀಟಿಗಳು ಯಾರಿಗೆ ಒಯ್ದು ಕೊಡುತ್ತೀ  ಅಂತಾ ಕೇಳಲಾಗಿ ಮೂರು ಜನರು ಶಬ್ಬೀರ ಅಲಿ ತಂದೆ ರುಕ್ಕಮೋದ್ದಿನ  ಸಾ: ನೂರಾನಿ ಮೊಹಲ್ಲಾ ಕಲಬುರಗಿ ಇತನಿಗೆ ಒಯ್ದು ಕೊಡುವುದಾಗಿ ತಿಳಿಸಿದರು. ಈ ಮೇಲಿನ ಮುದ್ದೆ ಮಾಲನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಠಾಣೆ ಗುನ್ನೆ ನಂ.161/2019 ಕಲಂ 78 (3) ಕೆ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 11/06/2019 ರಂದು ಸಾಯಂಕಾಲ 7-30 ಪಿ.ಎಮ್ ಗಂಟೆಗೆ ಶ್ರೀ ಮಂಜುನಾಥ ತಂದೆ ಚಂದ್ರಾಮಪ್ಪ ಕೆರೂರ ಸಾ|| ಇಜೇರಿ ಗ್ರಾಮದಲ್ಲಿ ಊರ ಹೊರವಲಯದಲ್ಲಿ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ರೋಡಿನ ಪಕ್ಕದಲ್ಲಿ ಯಡ್ರಾಮಿ ಚಿಗರಳ್ಳಿ ರೋಡಿನ ಮೂಲಕ ನಡೆದುಕೊಂಡು ಇಜೇರಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಯಡ್ರಾಮಿ ಕಡೆಯಿಂದ ಒಂದು ಹಿರೋ ಹೊಂಡಾ ಶೈನ್ ಮೋಟಾರ ಸೈಕಲ್ ನೇದ್ದರ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನನಗೆ ಎದುರಿಗೆ ಡಿಕ್ಕಿ ಪಡಿಸಿದನು. ಆಗ ನಾನು ಕೆಳಗಡೆ ಬಿದ್ದುದ್ದರಿಂದ ನನಗೆ ಎಡ ಕಿವಿಯ ಮೇಲೆ ತಲೆಗೆ ಹಾಗು ತಲೆಯ ಹಿಂದೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಮತ್ತು ಎಡ ಕೈ ಭುಜದ ಮೇಲೆ, ಬೆನ್ನಿಗೆ, ಬಲ ಕೈ ಮುಂಗೈಗೆ ಬಲ ಕಾಲಿನ ಮೊಳಕಾಲಿನ ಹಿಂದೆ ತರಚಿದ ರಕ್ತಘಾಯವಾಗಿರುತ್ತದೆ. ನಂತರ ಸ್ವಲ್ಪ ಮುಂದೆ ಹೋಗಿ ಅವನು ಮೋಟಾರ ಸೈಕಲ್ ಮೇಲಿಂದ ಬಿದ್ದಿರುತ್ತಾನೆ. ಆಗ ನಾನು ಮೋಟಾರ ಸೈಕಲ್ ನಂಬರ್ ನೋಡಲಾಗಿ ಕೆ.-32-.ಜೆ.-6282 ಇದ್ದು, ಚಾಲಕನ ಹೆಸರು ವಿಳಾಸ ವಿಚಾರಿಸಲು ವಿರೇಶ ತಂದೆ ಮಲ್ಲಪ್ಪ ಮದರಿ ಸಾ; ಜೈನಾಪೂರ ಎಂದು ಗೊತ್ತಾಗಿರುತ್ತದೆ. ನಂತರ ಅವನು ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ  ಠಾಣೆ ಗುನ್ನೆ ನಂ 121/2019 ಕಲಂ 279. 337 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಕುಮಾರಗೌಡ ತಂದೆ ಶಿವಲಿಂಗಪ್ಪ ಪಾಟೀಲ್ ಸಾ|| ಅಫಜಲಪೂರ ರವರ ತಂದೆಯವರು ಕಳೆದ 7 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸದ್ಯ ನಾನು ನಮ್ಮ ತಾಯಿ ಇಂದುಮತಿ ಇವರೊಂದಿಗೆ ವಾಸವಾಗಿರುತ್ತೇನೆ. ಊದನೂರ ಗ್ರಾಮದ ಸಾಗರ ತಂದೆ ಲಕ್ಷ್ಮಣ @ ಲಚ್ಚಪ್ಪ ರಾಠೋಡ ಇವನು ನನಗೆ ಸುಮಾರು 2 ವರ್ಷಗಳಿಂದ ಪರಿಚಯ ಇರುತ್ತಾನೆ. ಸಾಗರ ಇತನು  ತನ್ನ ಕೆಟ್ಟ ಚಟಗಳ ಸಲುವಾಗಿ ಬೇರೆಯವರ ಹತ್ತಿರ ಸಾಲ ಮಾಡಿಕೊಂಡಿದ್ದು, ಸಾಲಗಾರರು ಹಣ ಕೇಳುತ್ತಿರುವುದರಿಂದ ಅವನು ಒಂದು ತಿಂಗಳುಗಳಿಂದ ಊದನೂರ ಗ್ರಾಮಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ತಿರುಗಾಡುತ್ತಿದ್ದು, ಅವನು ನನಗೆ ಅನೇಕ ಸಲ ಕೈಗಡ ರೂಪದಲ್ಲಿ ಹಣ ಕೊಡು ಅಂತ ಹೇಳಿದ್ದು ಅದಕ್ಕೆ ನಾನು ನನ್ನ ಹತ್ತಿರ ಹಣ ಇರುವುದಿಲ್ಲ ಅಂತ ಹೇಳುತ್ತಾ ಬಂದಿದ್ದು ಇರುತ್ತದೆ. ದಿನಾಂಕ:12.06.2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಕಲಬುರಗಿ ನಗರದ ಎಸ್.ಬಿ.. ಕಾಲೋನಿಯಲ್ಲಿರುವ ನಮ್ಮ ಮಾವನವರಾದ ಅಶೋಕ ಪಾಟೀಲ್ ಇವರ ಮನೆಯಲ್ಲಿ ಇದ್ದಾಗ ಸಾಗರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಈಗತಾನೇ ಹೈದ್ರಾಬಾದನಿಂದ ಕಲಬುರಗಿಗೆ ಬಂದಿರುತ್ತೇನೆ ನನಗೆ ಊರಿಗೆ ಹೋಗುವ ಸಲುವಾಗಿ ಹಣ ಇರುವುದಿಲ್ಲ ನೀನು ಕನಕ ತ್ರಿಶೂಲ್ ಲಾಡ್ಜ ಹತ್ತಿರ ಬಂದು ಸ್ವಲ್ಪ ಹಣ ಕೊಟ್ಟು ಹೋಗು ಅಂತ ತಿಳಿಸಿದ ಮೇರೆಗೆ ನಾನು ಬೆಳಿಗ್ಗೆ 11:00 ಗಂಟೆಗೆ ಕನಕ ತ್ರಿಶೂಲ್ ಲಾಡ್ಜಿಗೆ ಬಂದಿದ್ದು ಅಲ್ಲಿ ಸಾಗರ ಇತನು ತನ್ನ ಸಂಗಡ ಇತರೆ 4-5 ಜನರೊಂದಿಗೆ ನಿಂತಿದ್ದು, ಆಗ ಅವರು ನನಗೆ ಲಾಡ್ಜ ಒಳಗೆ ಒಂದು ರೂಮಿನಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿ ಎಷ್ಟು ಹಣ ತಂದಿದ್ದಿಯಾ ಅಂತ ಕೇಳಿದನು. ಅದಕ್ಕೆ ನಾನು ನಿನಗೆ ಊರಿಗೆ ಹೋಗುವ ಸಲುವಾಗಿ ರೂ. 200/- ಗಳನ್ನು ತಂದಿರುತ್ತೇನೆ ಅಂತ ಅಂದಿದ್ದಕ್ಕೆ ಸಾಗರ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಭೋಸಡಿ ಮಗನಾ ಕೇವಲ 200/- ರೂಪಾಯಿ ಏತಕ್ಕೆ ಸಾಲುತ್ತವೆ ಅಂತ ಅನ್ನುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎಡಗಡೆ ಕಿವಿಯ ಮೇಲೆ ಜೋರಾಗಿ ಹೊಡೆದಿದ್ದು ಇದರಿಂದ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ಅವನೊಂದಿಗೆ ಇದ್ದ ಇತರೆ 4 ಜನರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಮಗನಿಗೆ ಸುಮ್ಮನೆ ಬಿಡಬಾರದು ಅವರು ಕೂಡ ಕೈಯಿಂದ ಹೊಡೆದಿದ್ದಲ್ಲದೆ ಕಾಲಿನಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ಈ ವಿಷಯ ನಮ್ಮ ಮಾವ ಅಶೋಕ ಪಾಟೀಲ್ ಇವರಿಗೆ ಗೊತ್ತಾಗಿ ಅವರು ಬಂದ ನಂತರ ಸಾಗರ ಮತ್ತು ಅವನೊಂದಿಗೆ ಇದ್ದ ಇತರರು ಅಲ್ಲಿಂದ ಓಡಿ ಹೋದರು. ಎಲ್ಲರೂ ಕೂಡಿ ಓಡಿ ಹೋಗುವಾಗ ಈ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ನನಗೆ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆ ಗುನ್ನೆ ನಂ. 46/2019 ಕಲಂ 143, 147, 342, 323, 504, 506 ಸಂಗಡ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಉಮರ ತಂದೆ ಅಹ್ಮೆದ ಅಪುಲ ಸಾ:ಮಿಜಬಾ ನಗರ ಎಮ್‌ಎಸ್‌ಕೆ ಮಿಲ್‌ ಕಲಬುರಗಿ ರವರ ಮನೆಯ ಸಂಸಾರ ವಿಷಯದಲ್ಲಿ ನನ್ನ ಮತ್ತು ನನ್ನ ಹೇಂಡ್ತಿ ಮದ್ಯ ಜಗಳವಾಗಿದ್ದು ನಾನು ಅವಳನ್ನು ಬೈದು ಬೇದರಿಸಿದ್ದು ದಿನಾಂಕ 12/06/2019 ರಂದು ಮದ್ಯಾಹ್ನ ನಾನು ಮತ್ತು ನನ್ನ ಹೇಂಡ್ತಿ ಜಗಳವಾಡಿದ್ದರಿಂದ ನನ್ನ ಹೇಂಡ್ತಿ ಅವರ ತಂದೆಗೆ ಮತ್ತು ಅವರ ಅಣ್ಣಂದಿರರಿಗೆ ಪೋನ ಮಾಡಿ ನಾನು ಅವಳನ್ನು ಹೊಡೆದಿರುತ್ತೇನೆ ಅಂತಾ ಪೋನ ಮಾಡಿದ್ದರಿಂದ ಅವರು ನಾವು ಇರುವ ಮಿಜಬಾ ನಗರ ಮನೆಗೆ ಸಾಯಾಂಕಾಲ 1) ಇರ್ಮಾನ ತಂದೆ ಶಾಲಿಪೀರ 2) ಮುಶಾ ಸೇಹಿಲ್‌ ತಂದೆ ಶಾಲಿಪೀರ 3) ಆರೀಫ್‌ ತಂದೆ ಮಹ್ಮದ 4) ಅಚರಕಾರ್ದಿ ತಂದೆ ರಹೆಮಾನ ಸಾ: ಎಲ್ಲರೂ ಬೀದರ ಇವರು ಬಂದು ನನಗೆ ತಡೆದು ಏ ರಂಡಿ ಮಗನೇ ನಮ್ಮ ಅಕ್ಕನಿಗೆ ಹೊಡೆಯುತ್ತಿರಿ ಅಂತಾ ನಮ್ಮ ಮನೆಗೆ ಬಂದು ನನಗೆ ಕೈಯಿಂದ ಹೊಡೆಬಡೆ ಮಾಡಿ ನೇಲಕ್ಕೆ ಹಾಕಿ ಹೊಡೆದು ಬೆನ್ನಿಗೆ , ಎದೆಗೆ ಗುಪ್ತಗಾಯ ಮಾಡಿದ್ದು ಮತ್ತು ಚೆಪ್ಪಿಗೆ ಇಂಜೆಕ್ಷನ ಮಾಡಿದಂತೆ ಚುಚ್ಚಿ ಗಾಯಮಾಡಿದ್ದು ಮತ್ತು ಏ ರಂಡಿ ಮಗನೇ ಇನ್ನೊಮ್ಮೆ ನಮ್ಮ ಅಕ್ಕನಿಗೆ ಏನಾದರೂ ಕಿರಿ ಕಿರಿ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ  ನನ್ನ ಹೇಂಡ್ತಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿರುತ್ತಾರೆ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ  ಗುನ್ನೆ ನಂ 160/2019 ಕಲಂ 323 324 341 504 506 ಸಂ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಹಿಬೂಬ್ ತಂದೆ ದಾವುಲ್ ಸಾಬ್ ನಾಶಿ ಸಾ; ಗುಡೂರ (ಎಸ್.) ತಾ; ಜೇವರಗಿ ಜಿ; ಕಲಬುರಗಿ ರವರು ದಿನಾಂಕ; 12/06/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಅಮೀರಬೀ ಮತ್ತು ಮಗ ಶರ್ಮೋದ್ದಿನ್ ಕೂಡಿಕೊಂಡು ನಮ್ಮ ಹೊಲ ಸರ್ವೆ ನಂ: 67 ರಲ್ಲಿ ಕಸ ತೆಗೆಯುತ್ತಿದ್ದಾಗ ಸಾಯಂಕಾಲ 4-00 ಗಂಟೆಯ ಸುಮಾರಿಗೆ ಕಸದಲ್ಲಿ ಇದ್ದ ಹಾವು ಹರಿದಾಡುತ್ತ ಬಂದು ನನ್ನ ಹೆಂಡತಿ ಅಮೀರಬೀ ಇವಳ ಎಡ ಕಾಲಿನ ಹೆಬ್ಬರಳಿಗೆ ಕಚ್ಚಿದ್ದರಿಂದ ಕಾಲಿಗೆ ರಕ್ತ ಹರಿದು ಹಲ್ಲು ನಟ್ಟ ಗುರುತು ಕಂಡಿದ್ದು ಇದೆ. ನಾನು ನನ್ನ ಹೆಂಡತಿ ನೋಡಿ ನಂತರ ಊರಿಗೆ ಕರೆದುಕೊಂಡು ಬಂದು ಊರಲ್ಲಿ ಗೌಂಟಿ ಔಷಧಿ ಕೊಡಿಸಿರುತ್ತೇನೆ.ನನ್ನ ಹೆಂಡತಿ ರಾತ್ರಿ ಚನ್ನಾಗಿದ್ದಳು.ಇಂದು ದಿನಾಂಕ; 13/06/2019 ರಂದು ಬೆಳಿಗ್ಗೆ ಯಾಕೋ ಸುಸ್ತಾಗಿರುತ್ತದೆ. ಮಾತು ಸರಿಯಾಗಿ ಹೊರಡುತ್ತಿಲ್ಲ ಅಂತಾ ತಿಳಿಸಿದ್ದರಿಂದ ನಾನು ನನ್ನ ಹೆಂಡತಿ ಚಿಕಿತ್ಸೆ ಕುರಿತು ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 12-00 ಘಂಟೆಯ ಸುಮಾರಿಗೆ ಮಾರ್ಗ ಮದ್ಯದಲ್ಲಿ ಅಂದರೆ ವಿಜಯಪೂರ ಕ್ರಾಸ್ ಹತ್ತಿರ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಯು.ಡಿ.ಆರ್. ನಂ  10/2019 ಕಲಂ; 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ.

Thursday, June 13, 2019

KALABURAGI DISTRICT PRESS NOTE


ಪತ್ರಿಕಾ ಪ್ರಕಟಣೆ
ದಿನಾಂಕ: 12/06/2019 ರಂದು ಮೇದಕ ಗ್ರಾಮಲ್ಲಿ ಹೊಲದ ಹಂಚಿಕೆ ವಿಷಯ ಹಾಗು ಹಳೆಯ ಸಾಲ 50ಸಾವಿರ ಮರಳಿ ನೀಡುವ ವಿಷಯದಲ್ಲಿ ಗ್ರಾಮದ ಮಲ್ಕಪ್ಪ ತಂದೆ ಚಿನ್ನಯಾ ಹಾಗು ಅವನ ಉಳಿದ 05 ಜನ ಅಣ್ಣ ತಮ್ಮಂದಿರ ನಡುವೆ ತಕರಾರು ಇದ್ದು, ಇದಲ್ಲದೆ ಇದೇ ವಿಷಯಕ್ಕೆ ಗ್ರಾಮದಲ್ಲಿ ಪಂಚಾಯತಿ ಆಗಿದ್ದು, ಅದರಲ್ಲಿ ಮಲ್ಕಪ್ಪನಿಗೆ ಅವನ ಅಣ್ಣ ತಮ್ಮಂದಿರು ಜಮೀನು ಪೋಡಿ ಖರ್ಚಿಗಾಗಿ ಬೇಕಾಗುವ ಹಣ ಕೊಡಬೇಕು ಹಾಗು ಹಳೆಯ ಬಾಕಿ 50 ಸಾವಿರ ರುಪಾಯಿಕೂಡ ಕೊಡಬೇಕು ಅಂತ ಪಂಚಾಯತಿಯಲ್ಲಿ ತೀರ್ಮಾನ ಆಗಿದ್ದು ಅದರಂತೆ ಮಲ್ಕಪ್ಪನು ತನ್ನ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ ಮಾಡಲು ತನಗೆ ಕೊಡಬೇಕಾದ ಹಳೆಯ ಬಾಕಿ 50 ಸಾವಿರ ರುಪಾಯಿ ಮತ್ತು ಪೋಡಿ ಮಾಡಿಕೊಡಲು ಬೇಕಾಗುವ ಹಣ ಕೊಡ್ರಿ ಅಂತ ಕೇಳುತ್ತಾ ಬಂದಿದ್ದು, ಅದಕ್ಕೆ ಅವರೆಲ್ಲರೂ ಮಲ್ಕಪ್ಪನೊಂದಿಗೆ ನಾವು ಯಾವುದೇ ದುಡ್ಡು ಕೊಡುವುದಿಲ್ಲ ನೀನು ಜಮೀನು ಹೇಗೆ ಹಂಚಿ ಕೊಡುವುದಿಲ್ಲ ಅಂತ ತಕರಾರು ಮಾಡಿದು ಅವರ ನಡುವೆ ವೈಮನಸ್ಸು ಉಂಟಾಗಿದ್ದು ಇರುತ್ತದೆ.
            ಹೀಗಿದ್ದು ನಿನ್ನೆ ದಿನಾಂಕ 12/06/2019 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ಮಲ್ಕಪ್ಪ ಹಾಗು ಆತನ ಮಕ್ಕಳಾದ ಶಂಕ್ರೆಪ್ಪ ಹಾಗು ಚನ್ನಪ್ಪ ಇವರು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಮಲ್ಕಪ್ಪನ ಅಣ್ಣ ತಮ್ಮಂದಿರು ಹಾಗು ಅವರ ಕುಟುಂಬದವರಾದ  1] ಹಣಮಂತ ತಂದೆ ಆಶಪ್ಪ, 2] ಆಶಪ್ಪ ತಂದೆ ಚಿನ್ನಯ್ಯಾ, 3] ರಾಮಲು ತಂದೆ ಚಿನ್ನಯ್ಯಾ 4] ಸೀನಪ್ಪ ತಂದೆ ರಾಮಲು, 5] ಶರಣಪ್ಪ ತಂದೆ ಚನ್ನಪ್ಪ, 6] ಪದ್ಮಮ್ಮ ಗಂಡ ಆಶಪ್ಪ, 7] ಲಾಲಮ್ಮ ಗಂಡ ಶರಣಪ್ಪ, 8] ಪವಿತ್ರಾ ತಂದೆ ರಾಮಲು ಹೀಗೆ ಎಲ್ಲರೂ ಸೇರಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ  ಗುನ್ನೆ ನಂ: 77/2019 ಕಲಂ 143. 147. 148. 302. ಸಂಗಡ 149 ಐಪಿಸಿ ನೇದ್ದರಲ್ಲಿ 08 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಇರುತ್ತದೆ.
          ಸದರಿ ಕೃತ್ಯ ನಡೆದ ಸ್ಥಳಕ್ಕೆ ಮಾನ್ಯ ಮನೀಷ್ ಖರ್ಬೀಕರ ಐ.ಪಿ.ಎಸ್  .ಜಿ.ಪಿ ಈಶಾನ್ಯ ವಲಯ, ಹಾಗು ಮಾನ್ಯ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐ.ಪಿ.ಎಸ್. ಎಸ್.ಪಿ ಕಲಬುರಗಿ ರವರು ಸ್ಥಳಕ್ಕೆ ಭೆಟಿ ನೀಡಿದ್ದು ಸದರಿ ಪ್ರಕರಣದಲ್ಲಿ 08 ಜನ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ ಕಲಬುರಗಿ ರವರು ಮಾನ್ಯ ಎ.ಎಸ್.ಪಿ ಚಿಂಚೋಳಿ ರವರ ಮಾರ್ಗದರ್ಶನದಲ್ಲಿ ಮುಧೋಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ತಮ್ಮರಾಯ ಪಾಟೀಲ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಅದರಂತೆ ಇಂದು ದಿನಾಂಕ: 13/06/2019 ರಂದು ಪ್ರಕರಣ ಆರೋಪಿತರಾದ 1] ಆಶಪ್ಪ ತಂದೆ ಚಿನ್ನಯ್ಯಾ ವಯ: 55, 2] ರಾಮಲು ತಂದೆ ಚಿನ್ನಯ್ಯಾ ಇವರನ್ನು ತೆಲಂಗಾಣ ರಾಜ್ಯದ ವಿಠಲಾಪೂರ ಗ್ರಾಮದಿಂದ ಹಾಗು 3] ಪದ್ಮಮ್ಮ ಗಂಡ ಆಶಪ್ಪ, 4] ಲಾಲಮ್ಮ ಗಂಡ ಶರಣಪ್ಪ, 5] ಪವಿತ್ರಾ ತಂದೆ ರಾಮಲು ಇವರನ್ನು ಕಾನಾಗಡ್ಡ ಗ್ರಾಮದಿಂದ ಬೆಳಿಗ್ಗೆ 11:30 ಕ್ಕೆ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿ ಆರೋಪಿತರು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು ಹಾಗು ಅದಕ್ಕೆ ಬಳಸಿದ್ದ ಎರಡು ರಕ್ತ ಹತ್ತಿದ ಗಳೆಯ ಮೇಳಿಗಳು, ರಕ್ತ ಹತ್ತಿದ ಒಂದು ಕೊಡಲಿ ಕಾವು ಮತ್ತು ರಕ್ತ ಹತ್ತಿದ ಒಂದು ಬಡಿಗೆಯನ್ನು ಜಪ್ತಿ ಪಡಿಸಿಕೊಂಡು ನಂತರ 05 ಜನ ಆರೋಪಿತರನ್ನು ಬಂಧನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಕಾರ್ಯಾಚರಣೆಯಲ್ಲಿ ಮುಧೋಳ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಸಂಗಮೇಶ ಪ್ರೋ, ಪಿ.ಎಸ್., ಪಿಸಿ ಮಲ್ಲಿಕಾರ್ಜುನ್ ಮಡಿವಾಳ, ಮಂಜುನಾಥ, ದೊಡ್ಡ ಬಸವ, ಚಂದ್ರಕಾಂತ, ಶಾಂತವೀರ, ರಾಜಕುಮಾರ ತಳವಾರ, ಪ್ರೇಮಕುಮಾರ, ವೀರಾರೆಡ್ಡಿ, ಭಗವಂತ, ಇಂದುಮತಿ ಮಪಿಸಿ ಹಾಗು ಡಬ್ಲು ಹೋಮಗಾರ್ಡ ಈರಮ್ಮ ಭಾಗಿಯಾಗಿದ್ದರು.  
          ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿತರಾದ ಹಣಮಂತ ತಂದೆ ಆಶಪ್ಪ, ಸೀನಪ್ಪ ತಂದೆ ರಾಮಲು, ಹಾಗು ಶರಣಪ್ಪ ತಂದೆ ಚನ್ನಪ್ಪ ಇವರ ಶೋಧ ಕಾರ್ಯ ಜಾರಿಯಲ್ಲಿ ಇರುತ್ತದೆ .ಸದರಿ ಆರೋಪಿತರನ್ನು ಕೂಡಲೇ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗುವುದು.

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕ್ರೆಪ್ಪ ಯಂಗಿನಮನೆ  ಸಾ|| ಮೇದಕ ತಾ|| ಸೇಡಂ ರವರ ಮಾವ ಮಲ್ಕಪ್ಪ ಮತ್ತು ಆತನ ಅಣ್ಣತಮ್ಮಂದಿರ ಮದ್ಯ ಹೊಲ ಹಂಚಿಕೆ ಮಾಡಿಕೊಳ್ಳುವ ವಿಷಯದಲ್ಲಿ ತಕರಾರಿದ್ದು ದಿನಾಂಕ 12-06-2019 ರಂದು 09-30 ಎ.ಎಂಕ್ಕೆ ನಮ್ಮ ಮಾವ ಮಲ್ಕಪ್ಪ, ಗಂಡ ಶಂಕ್ರೆಪ್ಪ ಮತ್ತು ಭಾವ ಚನ್ನಪ್ಪ ಮೇದಕ ಗ್ರಾಮದ ತಮ್ಮ ಹೊದಲ್ಲಿರುವಾಗ ಹಣಮಂತ ತಂದೆ ಆಶಪ್ಪ ಸಂಗಡ 07 ಜನರು ಸಾ|| ಎಲ್ಲರೂ ಮೇದಕ ತಾ|| ಸೇಡಂ ರವರು ಕುಡಿಕೊಂಡು  ಕೂಡಿ ಕೊಲೆ ಮಾಡುವ ಉದ್ದೇಶದಿಂದ ಕೊಡಲಿ, ಬಿಡಿಗೆ ಹಿಡಿದುಕೊಂಡು ಬಂದು ಮಲ್ಕಪ್ಪ, ಶಂಕ್ರೆಪ್ಪ ಮತ್ತು ಚನ್ನಪ್ಪ ಇವರೊಂದಿಗೆ ಜಗಳ ತೆಗೆದು ಕೊಡಲಿ ಬಡಿಗೆಯಿಂದ ಮೂವರಿಗೂ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆ  ಗುನ್ನೆ ನಂ.77/2019 ಕಲಂ.143,147,148,302 ಸಂ.149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-06-2019 ರಂದು ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನೆಟ್ಟಿ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಅಫಜಲಪೂರ ಘತ್ತರಗಾ ಗ್ರಾಮಕ್ಕೆ ಹೋಗುವ ರೋಡಿಗಿರುವ ಬನ್ನೆಟ್ಟಿ ಕ್ರಾಸ್ ಹತ್ತಿರ 6-20 ,ಎಮ್.ಕ್ಕೆ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟಿಪ್ಪರ ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರನ್ನು ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಓಡಿ ಹೋದನು  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಡಿ-1624 ಇದ್ದು  ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 85/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 12.06.2019 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಮೃತ ಗಿರೀಶ ಇತನು ತಾನೂ ಕೆಲಸ ಮಾಡುವ ಚೌಡಾಪೂರ ಗ್ರಾಮದ ಪೆಟ್ರೊಲ ಪಂಪದಿಂದ ಕಲಬುರಗಿ ಕಡೆಗೆ ಬರುವ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ-32/ಇಯು-4149 ನೇದ್ದನ್ನು ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಹಡಗಿಲ ಹಾರುತಿ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ರೋಡ ಪಕ್ಕದಲ್ಲಿರುವ ರೋಡಿಗೆ ಸಂಬಂದಿಸಿದ ಒಂದು ಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಜಗದೇವಿ ಗಂಡ ಗಿರೀಶ ರೆಡ್ಡಿ  ಸಾ: ಫಾರೆಸ್ಟ  ಐಬಿ ಹತ್ತೀರ ಲಂಗಾರ ಹನುಮಾನ ನಗರ ನಿಜಾಮಪೂರ ರಿಂಗ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಠಾಣೆ ಗುನ್ನೆ ನಂ 72/2019  ಕಲಂ 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಸಂಚಾರಿ ಠಾಣೆ 02 : ದಿನಾಂಕ 12.06.2019 ರಂದು ಸಾಯಂಕಾಲ ಶ್ರೀ ಲಕ್ಷ್ಮಣ ತಂದೆ ಮರೆಪ್ಪಾ ಸೇಡಂಕರ ಸಾ : ಕುರಕುಂಟಾ ತಾ : ಸೇಡಂ ರವರ ಮಗ ಶ್ಯಾಮಕುಮಾರ ಇತನು ಮೋಟಾರ ಸೈಕಲ್ ನಂ KA32 W 4359 ನೇದ್ದನ್ನು ಸೇಡಂ ರೋಡದಿಂದ ಕಲಬುರಗಿ ರೋಡನಲ್ಲಿ ಬರುವ ಮದಿಹಾಳ ತಾಂಡಾ ಕ್ರಾಸ್ ಹತ್ತಿರ ರೋಡ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಬಸ್ ನಂ KA32 F 2069ನೇದ್ದರ ಚಾಲಕ ನಾಗಪ್ಪ ಈತನು ತನ್ನ ಬಸ್ಸನ್ನು ಅತೀ ವೇಗ & ಅಲಕ್ಷತನದಿಂದ ಚಲಾಯಿಸಕೊಂಡು ಬಂದು ಶ್ಯಾಮಕುಮಾರ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶ್ಯಾಮಕುಮಾರ ಈತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರ ಗುನ್ನೆ ನಂ 95/2019 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ 12-06-2019 ರಂದು  08-00 ಎ.ಎಂಕ್ಕೆ ಶ್ರೀಮತಿ ರಾಮಲಮ್ಮ ಗಂಡ ಸಾಯಪ್ಪ ಬಿಚಲ್ ಸಾ|| ದಮಗಾನಪೂರ (ತೆಲಂಗಾಣ) ಮತ್ತು  ಗಂಡ ಸಾಯಪ್ಪ, ಮಕ್ಕಳಾದ ಸಂಧ್ಯಾ, ಲಾವಣ್ಯ, ಸ್ವಾತಿ ಕೂಡಿ ಕಾರ ನಂ.ಎಂಹೆಚ್-04 ಹೆಚ್ಎಕ್ಸ್-4594 ನೇದ್ದರಲ್ಲಿ ಕಲಬುರಗಿ-ಆಳಂದ ರೋಡಿನ ಕಡಗಂಚಿ ಕೇಂದ್ರಿಯ ವಿಶ್ವವಿದ್ಯಾಲಯದ ಹತ್ತಿರ  ಹೋಗುತ್ತಿರುವಾಗ ಸಾಯಪ್ಪ ಇತನು ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಸಾಯಪ್ಪ ಮತ್ತು ಸಂಧ್ಯಾ ಇಬ್ಬರಿಗೂ ಭಾರಿಗಾಯವಾಗಿ ಮೃತಪಟ್ಟಿದ್ದು  ನನಗು  ಮತ್ತು ಲಾವಣ್ಯ, ಸ್ವಾತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆ ಗುನ್ನೆ ನಂ . 85/2019 ಕಲಂ.279,337,338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 12-06-2019 ರಂದು 04-00 ಪಿ.ಎಂಕ್ಕೆ ಶ್ರೀಮತಿ ಪ್ರಭಾವತಿ ಗಂಡ ಸಂಗಣ್ಣ ತಳವಾಡ ಸಾ|| ಭಟ್ಟರ್ಗಾ ತಾ|| ಆಳಂದ ರವರ  ಅಕ್ಕ ಕಸ್ತೂರಬಾಯಿ ಇವಳು ಹಿತ್ತಲಶಿರೂರ ಗ್ರಾಮದ ಕನಕದಾಸ ಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ್ ನಂ.ಕೆಎ-32 ಜಿಎ-9537 ನೇದ್ದರ ಸವಾರ ಸಿದ್ದಾರಾಮ ತಂದೆ ಶಿವಪುತ್ರ ಮೇತ್ರಿ ಸಾ|| ಯಳಸಂಗಿ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಡಿಕಿಪಡಿಸಿದ್ದರಿಂದ ಕಸ್ತೂರಬಾಯಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ.51/2019 ಕಲಂ.279,337,338,304(ಎ) ಐಪಿಸಿ ಸಂ.187 ಐ.ಎಂ.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ

Wednesday, June 12, 2019

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ  ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ಜಾವೀದ ಇತನು ಕಲಬುರಗಿಯಲ್ಲಿರುವ ತನ್ನ ಹೆಂಡತಿ ಮನೆಗೆ ಹೋಗುವ ಕುರಿತು ಜೇವರಗಿಯಿಂದ ಮೋಟಾರ ಸೈಕಲ ನಂಬರ ಕೆಎ-32/ಇಹೆಚ್-6770 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿಗೆ ಹೋಗುವ ಕುರಿತು ರೋಡ ಎಡಗಡೆಯಿಂದ ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಜೈಲ ಸಮೀಪ ಬರುವ ಇಂದುಮತಿ ಲೇಔಟ ಎದರು ರೋಡ ಮೇಲೆ ಎದುರನಿಂದ ಮೋಟಾರ ಸೈಕಲ ನಂ ಕೆಎ-32/ಇಯು-3831 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಾವೀದ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಜಾವೀದ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಯೇ ಮೃತಪಟ್ಟಿದ್ದು ಅಪಘಾತ ಮಾಡಿದ ಮೋಟಾರ ಸೈಕಲ ಸವಾರನಿಗೂ ಸಣ್ಣ ಪುಟ್ಟಗಾಯಗಳಾಗಿದ್ದು ಆತನು ತನ್ನ ಮೋಟಾರ ಸೈಕಲ ಅಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಶ್ರೀ ಮಹ್ಮದ ವಾಜೀದ ತಂದೆ ಲಾಲ ಅಹ್ಮದ ಖುರೇಷಿ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 71/2019 ಕಲಂ 279, 304 (ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕರಣ ಪ್ರಕರಣ ದಾಖಲಿಸಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ವಿಜಯಕುಮಾರ ಇತನು ತಾನೂ ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32/ಇಯು-5652 ನೇದ್ದರ ಹಿಂದುಗಡೆ ಸಂಜೀವ ಇವರನ್ನು ಕೂಡಿಸಿಕೊಂಡು ಹೊನ್ನಕಿರಣಗಿ ಗ್ರಾಮದಿಂದ ತೋನಸಳ್ಳಿ (ಎಸ್) ಗ್ರಾಮ ಶಹಾಬಾದ ಕ್ರಾಸ ಮುಖಾಂತರವಾಗಿ ಜೇವರಗಿ  ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತೀವಾಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹೊನ್ನಕಿರಣಗಿ ಗ್ರಾಮದ ಸಿಮಾಂತರ ಹತ್ತೀರ ರೋಡ ಮೇಲೆ ತನ್ನ ಮುಂದುಗಡೆ ಹೋಗುತ್ತಿರುವ ಯಾವದೋ ಒಂದು ಟ್ರ್ಯಾಕ್ಟರ ವಾಹನದ ಟ್ರ್ಯಾಲಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟಟ್ಟಿರುತ್ತಾನೆ ಅಂತಾ ಶ್ರೀ ಸಂಜೀವ ತಂದೆ ಶರಣಪ್ಪಾ ಅಡವಿ ಸಾ: ನೆಲೋಗಿ ಗ್ರಾಮ ತಾ: ಜೇವರಗಿ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 70/2019 ಕಲಂ 279, 304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

Tuesday, June 11, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಕುಂಚಾವಂ ಠಾಣೆ : ದಿನಾಂಕ 09-06-2019 ರಂದು 10-00 ಎ.ಎಂಕ್ಕೆ ಶ್ರೀ ಮಹೇಶ ತಂದೆ ಶರಣಪ್ಪ ಬೋಯಾ ಸಾ : ಇಂದಿರಾ ನಗರ ತಾಂಡೂರ ರವರ  ಅಣ್ಣ ಹಣಮಂತ ತಂದೆ ಶರಣಪ್ಪ ಇತನು ಮೋಟಾರ ಸೈಕಲ್ ನಂ. ಎಪಿ-09 ಎಜಿ-3899 ನೇದ್ದನ್ನು ಕುಂಚಾವರಂ-ಚಿಂಚೋಳಿ ರೋಡಿನ ಪೆದ್ದಮ್ಮ ಗುಡಿಯ ಹತ್ತಿರ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಸ್ಕ್ರೀಡ್ ಆಗಿ ಬಿದ್ದಿದ್ದರಿಂದ ಹಣಮಂತುಗೆ ಭಾರಿಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆ ಗುನ್ನೆ ನಂ 28/2019 ಕಲಂ 279, 304(ಎ) ಐಪಿಸಿನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ 09-06-2019 ರಂದು 09-00 ಎ.ಎಂಕ್ಕೆ ಶ್ರೀ ಭೀಮಾಶಂಕರ ತಂದೆ ಶಿವಶರಣಪ್ಪ ಕಲಶೆಟ್ಟಿ ಸಾ : ಹೆಬಳಿ ತಾ : ಆಳಂದರವರ  ತಮ್ಮ ಮಲ್ಲಿಕಾರ್ಜುನ  ಇತನು ಮೋಟಾರ ಸೈಕಲ್ ನಂ. ಕೆಎ-32 ಇಎಫ್-9604 ನೇದ್ದರ ಮೇಲೆ ಆಳಂದ-ಕಲಬುರಗಿ ರೋಡಿನ ಲಾಡಚಿಂಚೋಳಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕ್ರೂಜರ್ ಜೀಪ ನಂ.ಕೆಎ-14 ಎ-3276 ನೇದ್ದರ ಚಾಲಕ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮಲ್ಲಿಕಾರ್ಜುನನಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ ಗುನ್ನೆ ನಂ 83/2019 ಕಲಂ 279, 304(ಎ) ಈಪಿಸಿ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ವಿ. ಹೊದಲೂರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 10/06/2019 ರಂದು ರಾತ್ರಿ ಮಾನ್ಯ ತಹಸಿಲ್ದಾರರು ಅಫಜಲಪೂರ ರವರೊಂದಿಗೆ ನಾನು ಮತ್ತು ಬಿರಪ್ಪ  ಗ್ರಾಮ ಲೇಕ್ಕಾಧಿಕಾರಿ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕರು ಅಫಜಲಪೂರ ಇಬ್ಬರೂ ಗಸ್ತು ತಿರುಗುತ್ತಾ ಸೊನ್ನ ಗ್ರಾಮದಿಂದ ಅಫಜಲಪೂರ ಪಟ್ಟಣಕ್ಕೆ ಬರುವ ಮುಖ್ಯ ರಸ್ತೆ ಮೇಲೆ ಕರಜಗಿ ಕ್ರಾಸ್ ಹತ್ತೀರ ಇದ್ದಾಗ ಒಂದು ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಿಕ್ಕಿದ್ದು ಅದನ್ನು ನಿಲ್ಲಿಸಲು ಅದರ ಚಾಲಕನಿಗೆ ಸೂಚನೆ ಕೊಟ್ಟಾಗ ಸದರಿ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿ ನಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ನಾವು ಟ್ರ್ಯಾಕ್ಟರ ನಂಬರ ನೋಡಲು ಅದರ ನೊಂದಣಿ ಸಂಖ್ಯೆ ಕೆಎ-28 ಟಿಸಿ-0982 ಇರುತ್ತದೆ ಸದರಿ ಜಪ್ತಿ ಮಾಡಲಾಗಿ ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಟ್ರ್ಯಾಕ್ಟರದಲ್ಲಿದ್ದ ಮರಳಿನ ಕಿಮ್ಮತ್ತು ಅಂದಾಜು 3000/- ರೂ ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದರಿಂದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿದ್ದು ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆ ಗುನ್ನೆ ನಂ 84/2019 ಕಲಂ 379 ಐಪಿಸಿ & 21(1) ಎಮ್ ಎಮ್ ಡಿ ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ .
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ದಿನಾಂಕ 08-12-2015 ರಂದು ಶ್ರೀಮತಿ ಭವಾನಿಬಾಯಿ ಗಂಡ ನಾರಾಯಣಸಿಂಗ ಠಾಕೂರ ಸಾ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರ  ಮಗಳು ರೀನಾ ಇವಳಿಗೆ ಬಹದ್ದೂರಸಿಂಗ ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 50 ಗ್ರಾಂ ಬಂಗಾರ ನೀಡಿದ್ದು ನಂತರ ಕೆಲದಿನಗಳ ನಂತರ ಬಹದ್ದೂರಸಿಂಗ ಸಂಗಡ ಒಬ್ಬಳು ಸಾ : ಸೋಲಾಪೂರ ಹಾ : ವ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರು  ಕೂಡಿ ನಿನ್ನ ತವರು ಮನೆಯಿಂದಒಂದು ಕಾರು ಹಾಗೂ ಮನೆ ಕಟ್ಟಲು ಹಣ ತೆಗೆದುಕೊಂಡು ಬಾ ಅಂತ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 03-06-2019 ರಂದು 11-30 ಪಿ.ಎಂದಿಂದ 04-06-201912-00 ಎ.ಎಂ ಅವಧಿಯಲ್ಲಿ ಆರೋಪಿ ಬಹದ್ದೂರಸಿಂಗ ಇತನು ಕಲಬುರಗಿಯ ಕೊಂಡೆದಗಲ್ಲಿಯಲ್ಲಿರುವ ಮನೆಯಲ್ಲಿ ರೀನಾಳಿಗೆ ದೈಹಿಕ ಮಾನಸಿಕ ಕಿರುಕುಳ ನೀಡಿ ಕಾಲಿನಿಂದ ಹೊಟ್ಟೆಗೆ ಒದ್ದಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೆ ದಿನಾಂಕ 07-06-2019 ರಂದು 04-00 ಪಿ.ಎಂಕ್ಕೆ ರೀನಾ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ ನಂ 72/2019 ಕಲಂ 498(ಎ) 302, 304(ಬಿ) ಸಂಗಡ 34 ಐಪಿಸಿ ಮತ್ತು 3, 4 ಡಿ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.