Police Bhavan Kalaburagi

Police Bhavan Kalaburagi

Saturday, April 14, 2012

GULBARGA DIST REPORTED CRIMES


ದರೋಡೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:
ಶ್ರೀ ವಿಷ್ಣು ತಂದೆ ಮಾಣಿಕರಾವ ಕಂದಗೋಳೆ ಸಾ ಬಾತಂಬ್ರಾ ತಾ ಭಾಲ್ಕಿ ಹಾ ವ ಸಿ.ಟಿ ಸೆಂಟರ್ ಕಾಂಪ್ಲೇಕ್ಸ್ ಕೆ.ಬಿ.ಎನ್ ಆಸ್ಪತ್ರೆಯ ಎದುರುಗಡೆ ಮೇನ್ ರೋಡ ಗುಲಬರ್ಗಾ ರವರು ನಾನು ಮಹಾರಾಷ್ಟ್ರ ರಾಜ್ಯದ ಪೋನಾದಲ್ಲಿರುವ ಪಪ್ಪು ಇಂಟೆಲ್ ಕಂಪನಿಯವರು ನನಗೆ ಎರಡು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳ ಬೆಲೆಯ ಪರ್ನಿಚರಗಳನ್ನು ಮಾರಾಟಕ್ಕಾಗಿ ಕೊಟ್ಟಿದ್ದರು ಅದರಂತೆ ನಾನು ಹಣಮಂತ ಎಂಬ ಗ್ರಾಹಕನಿಗೆ ಇದರಲ್ಲಿಯ ಒಂದು ಸೆಟ್ ಫರ್ನಿಚರ ಮಾರಾಟ ಮಾಡಿದೆನು. ಹಣಮಂತ ಎಂಬಾತನು ಫರ್ನಿಚರಸ್ಸ ಸರಿ ಇಲ್ಲಾ ಕಳಪೆ ಸಾಮಾನುಗಳಿವೆ ಅಂತಾ ಹೇಳಿ ಹಿಂದುರುಗಿಸಿದನು.ಆ ಪ್ರಯುಕ್ತವಾಗಿ ನಾನು ಕಂಪನಿಯವರಿಗೆ ಉಳಿದ ಎಲ್ಲಾ ಸಾಮಾನುಗಳನ್ನು ಹಿಂತಿರುಗಿಸಿದೆನು.ಅದೇ ವೈಮನ್ಸಿನಿಂದ ಪೂನಾದ ಪಪ್ಪು ಇಂಟೆಲ್ ಕಂಪನಿಯ ಮಾಲಿಕನಾದ ಪಪ್ಪು ಎಂಬಾತನು.ಮಹ್ಮದ ಆರೀಫ ಸಂಗಡ ಐದು ಜನರಿಗೆ ನನಗೆ ಮುಗಿಸುವಂತೆ ಸೂಫಾರಿ ನೀಡಿ ದಿನಾಂಕ:13-04-2012 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಜಾಜಿ ಕಲ್ಯಾಣ ಮಂಟಪದ ಮುಂದಿನ ರಸ್ತೆಯಲ್ಲಿ ಸೈಕಲ್ ಮೋಟಾರ ನಂಬರ ಕೆಎ 32 ಇಎ 2136 ನೇದ್ದರ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆ ಟವೇರಾ ಕಂಪನಿಯ ವಾಹನ ನಂಬರ ಕೆಎ 35 ಎ 1986 ನೇದ್ದರಿಂದ ನಾಲ್ಕು ಜನರು ಇಳಿದು ನನಗೆ ನಿಲ್ಲಿಸಿ ನಾಲ್ಕು ಜನರು ಕೂಡಿ ನನ್ನನೂ ಜಬರ ದಸ್ತಿಯಿಂದ ಟವೆರಾ ಗಾಡಿ ಒಳಗೆ ಕುಡಿಸಿದಾಗ ಗಾಡಿಯಲ್ಲಿದ್ದ ಎರಡು ಜನರು ಅಲ್ಲದೆ ಉಳಿದ ನಾಲ್ಕು ಜನರು ಸಹ ಚಾಕುಗಳನ್ನು ತೋರಿಸಿ ನನಗೆ ಪ್ರಾಣ ಬೇದರಿಕೆ ಹಾಕಿ ಅದರಲ್ಲಿಯ ಮಹ್ಮದ ಆರೀಫ್ ಎಂಬುವವನು ನನ್ನ ಬಲಗೈ ಹಸ್ತಕ್ಕ ಚಾಕುವಿನಿಂದ ತಿವಿದು ರಕ್ತಗಾಯ ಮಾಡಿದ್ದು, ಆಗ ನನಗೆ ಅಪಹರಣ ಮಾಡುವುದನ್ನು ಗೊತ್ತಾಗಿ ನಾನು ಜೋರಾಗಿ ಚಿರುವುದನ್ನು ಆಜು-ಬಾಜು ಜನರು ನೋಡಿ ಪೊಲೀಸ ಕಂಟ್ರೋಲ್ ರೂಮಿಗೆ ಸಾರ್ವಜನಿಕರು ಪೋನ ಮಾಡಿ ತಿಳಿಸಿದರು. ನನಗೆ ಅದೇ ವಾಹನದಲ್ಲಿ ಕೆ.ಬಿ.ಎನ್ ಆಸ್ಪತ್ರೆ ಮುಂದುಗಡೆ ರಸ್ತೆಯ ಮುಖಾಂತರ ಗಾರ್ಡನ ಒಳಗಡೆಯ ರಸ್ತೆಯಿಂದ ಎಮ್.ಎಸ್.ಕೆ ಮೀಲ್ ರಸ್ತೆಯ ಮುಖಾಂತರ ವಾಹನದಲ್ಲಿ ನನಗೆ ಹಾಕಿಕೊಂಡು ಹೋಗುವಾಗ ನನ್ನನೂ ನಾಲ್ಕು ಜನರು ಬಿಗಿಯಾಗಿ ಹಿಡಿದಾಗ ಅದರಲ್ಲಿಯ ಮಹ್ಮದ ಆರಿಫ್ ಮತ್ತು ಇನ್ನೊಬ್ಬ ಕೂಡಿ ನನ್ನ ಕೋರಳಲ್ಲಿದ್ದ ಮೂರು ತೋಲಿ ಬಂಗಾರದ ಸರವನ್ನು ಕಿತ್ತುಕೊಂಡರು. ಅಲ್ಲದೆ ಎಲ್ಲರೂ ಕೂಡಿ ನನ್ನ ಬಲಗೈಯನ್ನು ಗಾಡಿಯ ಡೋರಿಗೆ ಬಡಿಸಿ ಗುಪ್ತಗಾಯ ಪಡಿಸಿರುತ್ತಾರೆ. ಮಹ್ಮದ ಆರಿಫ್ ಇತನ ಜೋತೆಗಿದ್ದ ಇನ್ನೂಳಿದ ಐದು ಜನರ ಹೆಸರು ವಿಳಾಸ ಗೋತ್ತಿಲ್ಲ ಅವರನ್ನು ನೋಡಿದರೆ ಗುರುತಿಸುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 395, 397 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಕುಪೇಂದ್ರ ತುಕಾರಾಮ ಚವ್ಹಾಣ ಸಾ: ಶೇರಿ ತಾಂಡಾ ತಾ; ಚಿಂಚೋಳಿರವರು ನಾನು ದಿನಾಂಕ: 13-04-2012 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಆಟೋರಿಕ್ಷಾ ನಂ ಕೆಎ-32 ಬಿ-6338 ನೇದ್ದರಲ್ಲಿ ಕುಳಿತು ಜಿ.ಜಿ.ಹೆಚ್ ಸರ್ಕಲದಿಂದ ಎಸ್.ಟಿ.ಬಿ.ಟಿ ಕ್ರಾಸ್ ಕಡೆಗೆ ಬರುತ್ತಿದ್ದಾಗ ಆಟೋರಿಕ್ಷಾ ಚಾಲಕನಾದ ಶಂಕರ ತಂದೆ ಜಗನಾಥ ದೇವಿನಗರ ಇತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಕಟ್ಟ ಹೊಡೆಯಲು ಗೋಗಿ ತನ್ನಿಂದ ತಾನೆ ಆಟೋರಿಕ್ಷಾ ಪಲ್ಟಿಗೊಳಿಸಿ ಆಟೋರಿಕ್ಷಾದಲ್ಲಿ ಕುಳ್ಳಿತ್ತಿದ್ದ ನನಗೆ ಮತ್ತು ಚಾಲಕನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2012 ಕಲಂ: 279 ,337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪಡಿಸಿದನ್ನು ವಿಚಾರಿಸಲು ಹೋದಾಗ ಹಲ್ಲೆ ಮಾಡಿದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪ ದೊಡ್ಡಮನಿ ಸಾ: ಮೇಳಕುಂದಾ (ಕೆ) ಗ್ರಾಮ ಹಾ:ವ: ತಾಜ ಸುಲ್ತಾನಪೂರ ಕ್ರಾಸ ಗುಲಬರ್ಗಾರವರು ನಾನು ದಿನಾಂಕ:-12/4/12 ರಂದು ಸಾಯಂಕಾಲ 6:30 ಗಂಟೆಗೆ ನನ್ನ ಮಾವನ ಟಾಟಾ ಎಸಿಇ ವಾಹನಕ್ಕೆ ಅಫಘಾತ ಪಡಿಸಿ ಹಾಗೇ ಬರುತ್ತಿದ್ದ 407 ಟೆಂಪೊ ಚಾಲಕನಿಗೆ ವಿಚಾರಿಸಲು ಹೋದಾಗ ಧಾನಮ್ಮ ಪೆಟ್ರೋಲ ಪಂಪ ಮಾಲಿಕನ ಮಗ ಕೃಷ್ಣಾ ಹಾಗೂ ಅವನ ಜೊತೆ 2 ಜನರು ಸಾ: ತಾಜಸುಲ್ತಾನಪೂರ ಕ್ರಾಸ ರವರು ನನಗೆ ಅವಾಚ್ಯವಾಗಿ ಬೈದು ಕೈ ಮುಷ್ಠಿಮಾಡಿ ಬಾಯಿ ಮೇಲೆ ಹೊಡೆದಿದ್ದರಿಂದ ಎರಡು ಹಲ್ಲುಗಳು ಅಲುಗಾಡುತ್ತಿದ್ದು ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ 509, 341, 323, 326, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: