Police Bhavan Kalaburagi

Police Bhavan Kalaburagi

Tuesday, May 2, 2017

BIDAR DISTRICT DAILY CRIME UPDATE 02-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-05-2017

©ÃzÀgÀ UÁæ«ÄÃt ¥Éưøï oÁuÉ UÀÄ£Éß £ÀA. 25/2017, PÀ®A. 323, 324, 504. 506 eÉÆvÉ 34 L¦¹ :-
ದಿನಾಂಕ 01-05-2017 ರಂದು ಫಿರ್ಯಾದಿ ದಶರಥ ತಂದೆ ಬಸ್ಸಪ್ಪಾ ಮೇತ್ರೆ ವಯ: 65 ವರ್ಷ, ಸಾ: ಸೋಲಪೂರ ರವರು ತನ್ನ ಖಾಸಗಿ ಕೆಲಸದ ಪ್ರಯುಕ್ತ ಬೀದರ ನಗರಕ್ಕೆ ಹೋಗಿ ಮರಳಿ ತಮ್ಮೂರಿಗೆ ರಾತ್ರಿ ಬಂದು 2000 ಗಂಟೆಗೆ ತಮ್ಮೂರ ರವಿ ಮಲ್ಕಾನೋರ ಇವರ ಹೋಟಲದಲ್ಲಿ ಚಹಾ ಕುಡಿದು ಮನೆಗೆ ಬೊಮ್ಮಗೊಂಡೆಶ್ವರ ಚೌಕ ಹತ್ತಿರ ಊರಿನ ಗಣಪತಿ ಮೇತ್ರೆ ಇವನೊಂದಿಗೆ ಬರುವಾಗ ಫಿರ್ಯಾದಿಯು ನಾವು ಹೋಟಲದಲ್ಲಿ ಚಹಾ ಕುಡಿಯುತ್ತಿರುವಾಗ ನಮ್ಮ ಜೊತೆ ಇದ್ದ ವ್ಯಕ್ತಿ ಯಾರಿದ್ದರೂ ಅಂತಾ ಗಣಪತಿಗೆ ಕೇಳಲಾಗಿ ಸದರಿಯವನು ನಮ್ಮೂರ ವಿಜಯಕುಮಾರ ತಂದೆ ಭೀಮಣ್ಣಾ ಮೇತ್ರೆ ಇವನು ಇರುತ್ತಾನೆ ಅಂತಾ ತಿಳಿಸಿದನು, ಇಷ್ಟೆ ಮಾತಿಗೆ ಆರೋಪಿ ವಿಜಯಕುಮಾರ ತಂದೆ ಭೀಮಣ್ಣಾ ಮೇತ್ರೆ ಸಾ: ಸೋಲಪೂರ, ಇತನು ಫಿರ್ಯಾದಿಗೆ ನನ್ನ ಹೆಸರು ಕೇಳುವವ ನೀನ್ಯಾರೋ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದು, ಕೆಳಗೆ ಕೆಡವಿ ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಈ ಜಗಳವನ್ನು ರವಿ ತಂದೆ ರಘೂನಾಥ ಮಲ್ಕಾಪೂರೆ, ವೀರಶೇಟ್ಟಿ ತಂದೆ ಸಂಗ್ರಾಮ ಪಾಟೀಲ ಹಾಗು ಗಣಪತಿ ಮೇತ್ರೆ ಇವರು ಜಗಳ ಬಿಡಿಸಿಕೊಳ್ಳುತ್ತಿರುವಾಗ ಫಿರ್ಯಾದಿಯ ಮಗಳಾದ ಜಗದೇವಿ ಗಂಡ ದಶರಥ ಮೈಲಾರಿ ಇವಳು ಬಂದು ನಮ್ಮ ತಂದೆಗೆ ಏಕೆ? ಹೊಡೆಯುತ್ತಿದ್ದಿ ಎಂದು ಕೇಳಿದಕ್ಕೆ ಸದರಿ ಆರೋಪಿಯು ಫಿರ್ಯಾದಿಗೆ ಮಗಳಿಗೆ ನೀ ಯಾರೇ ಕೇಳಾಕಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನೀನು ನಿನ್ನ ತಂದೆ ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ಜೀವ ಸಹೀತ ಬಿಡುವುದಿಲ್ಲಾ ನಿಮಗೆ ಖತಮ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ, ನಂತರ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಮಗಳಾದ ಜಗದೇವಿ ಮತ್ತು ಮಗನಾದ ನರಸಿಂಗ್ ಇಬ್ಬರೂ ಕೂಡಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: