Police Bhavan Kalaburagi

Police Bhavan Kalaburagi

Wednesday, August 22, 2018

Yadgir District Reported Crimes Updated on 22-08-2018


                                    Yadgir District Reported Crimes
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ ;- 227/2018 ಕಲಂ: 143, 147, 323, 324, 504, 506, ಸಂ 149 ಐಪಿಸಿ;- ದಿ: 21/08/18 ರಂದು 8.30 ಪಿಎಮ್ಕ್ಕೆ ಅಜರ್ಿದಾರರಾದ ಶ್ರೀಮತಿ ಶಾಹೀದಾ ಗಂಡ ಮಹ್ಮದಶಾ ಮಕಾನದಾರ ಸಾ|| ಅಗ್ನಿ ತಾ|| ಸುರಪೂರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನಮಗೂ ಹಾಗು ನನ್ನ ಗಂಡನ ತಮ್ಮನಾದ ಖಾಸಿಂಶಾ ತಂದೆ ಮದರಶಾ ಮಕನದಾರ ಇವರ ಮದ್ಯ ಹೊಲ ಸವರ್ೆ ನಂಬರ 189 ನೇದ್ದರ ಹೊಲದ ಪಾಲುದಾರಿಕೆ ವಿಷಯವಾಗಿ ಸುಮಾರು ದಿನಗಳಿಂದ ತಕರಾರು ನಡೆದು ಸದರಿಯವನು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ಇಂದು ದಿನಾಂಕ 21/08/2018 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿದ್ದಾಗ ಆರೋಪಿತರು ಗುಂಪುಗೂಡಿ ಬಂದವರೇ ಹೊಲದ ದಾರಿ ವಿಷಯದಲ್ಲಿ ನನ್ನೊಂದಿಗೆ ತಕರಾರು ಮಾಡಿ ಜಗಳ ತೆಗೆದು ನಿನ್ನ ಗಂಡನಿಗೆ ಈ ಹೊಲ ನಮಗೆ ಬರುತ್ತದೆ ಅದರಲ್ಲಿ ಸಾಗುವಳಿ ಮಾಡಬೇಡ ಅಂದರೂ ಮತ್ತೆ ಮಾಡುತ್ತಿದ್ದು ಸೊಕ್ಕು ಜಾಸ್ತಿ ಆಗಿದೆ ಒಂದು ಕೈ ನೋಡುತ್ತೇವೆ ಅಂದಾಗ ನಾನು ಸುಮ್ಮನೆ ಯಾಕೆ ನಮ್ಮೊಂದಿಗೆ ಜಗಳ ಮಾಡುತ್ತಿದ್ದೀರಿ ಅಂತ ಕೇಳಿದ್ದಕ್ಕೆ ಖಾಸಿಂಶಾ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು ಆಗ ಉಳಿದವರು ಕೈಯಿಂದ ನನಗೆ ಬೆನ್ನಿಗೆ ಕಪಾಳಕ್ಕೆ ಹೊಡೆದು ಗುಪ್ತಗಾಯ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ಸತ್ತೆನೆಪ್ಪಾ ಅಂತಾ ಚೀರುತ್ತಿದ್ದಾಗ ಅಲ್ಲಿಯೇ ಹತ್ತಿರದಲ್ಲಿದ್ದ ನನ್ನ ಗಂಡನು ಓಡಿ ಬಂದು ಜಗಳ ಬಿಡಿಸುವಾಗ ನನ್ನ ಗಂಡನಿಗೂ ಕೂಡ ಎಳೆದಾಡಿ ಕೈಯಿಂದ ಹೊಡೆದು ಗುಪ್ತಗಾಯ ಪಡೆಸಿದ್ದು ಅಲ್ಲದೆ ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 227/18 ಕಲಂ:143, 147, 323, 324, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 226/2018 ಕಲಂ:323, 324, 504, 506, ಸಂ 34 ಐಪಿಸಿ;- ದಿ: 21/08/18 ರಂದು ಅಜರ್ಿದಾರರಾದ ಶ್ರೀಮತಿ ಪರವಿನ್ ಗಂಡ ಖಾಸಿಂಸಾಬ ಮಕಾನದಾರ ಸಾ|| ಅಗ್ನಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನಮಗೂ ಹಾಗು ನನ್ನ ಗಂಡನ ಅಣ್ಣ ಮಹ್ಮದಶಾ ತಂದೆ ಮದರಶಾ ಮಕನದಾರ ಇವರ ಮದ್ಯ ಹೊಲ ಸವರ್ೆ ನಂಬರ 189 ನೇದ್ದರ ಹೊಲದ ಪಾಲುದಾರಿಕೆ ವಿಷಯವಾಗಿ ಸುಮಾರು ದಿನಗಳಿಂದ ತಕರಾರು ನಡೆದು ಸದರಿಯವನು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದನು.      ಹೀಗಿದ್ದು ಇಂದು ದಿನಾಂಕ 21/08/2018 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿದ್ದಾಗ ನಮ್ಮ ಗಂಡನ ಅಣ್ಣನಾದ 1] ಮಹ್ಮದಶಾ ತಂದೆ ಮದರಶಾ ಮಕನದಾರ ಕೆ ಎಸ್ ಆರ್ ಟಿಸಿ ಕಂಡಕ್ಟರ ಹಾಗು ಆತನ ಹೆಂಡತಿ 2] ಶಾಹೀದಾ ಗಂಡ ಮಹ್ಮದ್ಷಾ ಮಕನದಾರ ಈ ಎರಡು ಜನರು ನಮ್ಮ ಹೊಲದಲ್ಲಿ ದಾರಿ ಇರದಿದ್ದರೂ ನಮ್ಮ ಹೊಲದಲ್ಲಿ ಬಿತ್ತನೆಮಾಡಿದ ಬತ್ತದ ಬೆಳೆಯಲ್ಲಿ ಟ್ರಾಕ್ಟರ ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿದ್ದು ಆಗ ನಾನು ಹೋಗಿ ಬೆಳೆಯಲ್ಲಿ ಟ್ರಾಕ್ಟರ ತೆಗೆದುಕೊಂಡು ಹೋದರೆ ಹೇಗೆ ಅಂತ ಕೇಳಿದಾಗ ಸದರಿಯವರಿಬ್ಬರೂ ಸೂಳೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯಾಗಿ ಬೈಯುತ್ತಾ ಇಬ್ಬರು ನನ್ನ ಕೂದಲು ಹಿಡಿದು ಎಳದಾಡಿ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ ಶಾಹೀದಾ ಇವಳು ನನ್ನ ಕೂದಲು ಹಿಡಿದು ಎಳದಾಡಿ ನೆಲಕ್ಕೆ  ಕೆಡವಿದ್ದು ಆಗ ಮಹ್ಮದಷಾ ಈತನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡೆಸಿದ್ದು ಅಲ್ಲದೆ ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 226/18 ಕಲಂ: 323, 324, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 384/2018 ಕಲಂ 78[3] ಕೆ.ಪಿ ಆಕ್ಟ;- ದಿನಾಂಕ 21/08/2018 ರಂದು ಸಾಯಂಕಾಲ 16-30  ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 21/08/2018 ರಂದು ಮದ್ಯಾಹ್ನ 14-15 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ  ತನಗೆ ಬಂದ ಮಾಹಿತಿಯನ್ನು ತಿಳಿಸಿದ ಮೇರೆಗೆ ಫಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಗಾಂಧಿ ಚೌಕ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 270=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ಸಂಖ್ಯೆ 20/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 17-00 ಗಂಟೆಗೆ  ಠಾಣೆ ಗುನ್ನೆ ನಂಬರ 384/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 59/2018  ಕಲಂ 283 ಐಪಿಸಿ;- ದಿನಾಂಕ 21/08/2018 ರಂದು 1-30  ಪಿ.ಎಂ.ಕ್ಕೆ  ಶ್ರೀಮತಿ ಪಿ.ಎಸ್. -1 ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಭೀಮರತ್ನ ಪಿ.ಎಸ್. -1 ಸಂಚಾರಿ ಪೊಲೀಸ ಠಾಣೆ ಆಗಿದ್ದು ತಮ್ಮಲ್ಲಿ ಮೂಲಕ ವರದಿ ಸಲ್ಲಿಸುವುದೇನೆಂದರೆ ಇಂದು ದಿನಾಂಕ: 21/08/2018 ರಂದು 12-45 ಪಿ.ಎಂ. ಸುಮಾರಿಗೆ ಯಾದಗಿರಿ ನಗರದ ಸುಭಾಷ್ ವೃತ್ತದ ಹತ್ತಿರ ನಾನು ಪೆಟ್ರೊಲಿಂಗ್  ಕರ್ತವ್ಯ ಕುರಿತು ಹೊರಟಾಗ ಯಾದಗಿರಿ-ಚಿತ್ತಾಪುರ ಮುಖ್ಯ ರಸ್ತೆ ಮೇಲೆ  ಒಂದು ಕ್ರೂಜರ್ ಜೀಪ್ ವಾಹನ ನಂಬರ  ಕೆಎ-33, 4550 ನೇದ್ದರ ಚಾಲಕನು ಮುಖ್ಯ ರಸ್ತೆಯ ಮೇಲೆ ವಾಹನಗಳ ಸಂಚಾರಕ್ಕೆ ಅಪಾಯಕರವಾದ ರೀತಿಯಲ್ಲಿ ಹಾಗೂ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ತನ್ನ ಕ್ರೂಜರ್ ಜೀಪ್ ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದನ್ನು ಕಂಡು ಸದರಿ ವಾಹನದ ಚಾಲಕನಿಗೆ ನಾನು ಹೆಸರು, ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಎಮ್.ಡಿ.ಗೌಸ್ ತಂದೆ ಸಾಧಿಕ್ ಬಾಬು ಶೇಕ್  ವಯಾ:26 ವರ್ಷ, : ಕ್ರೂಜರ್ ಜೀಪ್ ನಂಬರ ಕೆಎ-33, 4550 ನೆದ್ದರ ಡ್ರೈವರ ಜಾತಿ:ಮುಸ್ಲಿಂಸಾ;ಲಾಡೇಸ್ ಗಲ್ಲಿ, ಯಾದಗಿರಿ  ಅಂತಾ ತಿಳಿಸಿದ್ದು ಇರುತ್ತದೆಸದರಿ ಚಾಲಕನು ತನ್ನ ಕ್ರೂಜರ್ ಜೀಪ ವಾಹನವನ್ನು ಮುಖ್ಯ ರಸ್ತೆಯ ಮೇಲೆ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಓಡಾಡುವಾಗ ತೊಂದರೆಯಾಗುವಂತೆ ಅಪಾಯಕರವಾದ ರೀತಿಯಲ್ಲಿ ನಿಲ್ಲಿಸಿದ್ದರಿಂದ  ಸದರಿ ವಾಹನವನ್ನು  ಚಾಲಕನ ಸಮೇತ ಠಾಣೆಗೆ ತಂದು  ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ  ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 59/2017 ಕಲಂ 283 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ 145/2018 ಕಲಂ.143,504,365,ಸಂ. 149 ?????;- ದಿನಾಂಕ; 21/08/2018 ರಂದು 6-45 ಪಿಎಮ್  ಕ್ಕೆ ಪಿರ್ಯಾದಿ ಶ್ರೀಮತಿ ಗೇಣಿಬಾಯಿ ಗಂಡ ಹಿರಾಸಿಂಗ್ ಚವ್ಹಾಣ ವ;55 ಜಾ; ಲಂಬಾಣಿ ಉ; ಕೂಲಿಕೆಲಸ ಸಾ; ಬಾಲಾಜಿ ನಗರ ಬಸವಂತಪುರ ತಾಂಡಾ ತಾ;ಜಿ; ಯಾದಗಿರಿ ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿಸಿದ್ದು, ಸದರಿ ದೂರು ಅಜರ್ಿಯ ಸಾರಾಂಶವೆನೆಂದರೆ, ನನಗೆ ಒಂದು ಹೆಣ್ಣು, ಮೂರು ಜನ ಗಂಡು ಮಕ್ಕಳಿದ್ದು ಅದರಲ್ಲಿ ಮಲ್ಲು ತಂದೆ ಹಿರಾಸಿಂಗ್ ಈತನಿಗೆ ಸುಮಾರು 6 ವರ್ಷಗಳ ಹಿಂದೆ ನನ್ನ ಸಹೋದರ ಸಂಬಂದಿಕನಾದ ಹಣಮಂತ ತಂದೆ ರೇಖು ರಾಠೋಡ ಸಾ; ಬಳವಡಗಿ ತಾಂಡಾ ಈತನ ಮಗಳಾದ ರೇಖಾ ಇವಳ ಜೋತೆಯಲ್ಲಿ ವಿವಾಹ ಮಾಡಿದ್ದು ಇರುತ್ತದೆ. ವಿವಾಹವಾದಾಗಿನಿಂದ ನನ್ನ ಸೊಸೆ ರೇಖಾ ಇವಳು ಸಂಸಾರ ಮಾಡದೇ ತವರು ಮನೆಯಲ್ಲಿದ್ದು, ಈಗೆ ಎರಡು ವರ್ಷದ ಹಿಂದೆ ನಮ್ಮ ಮೇಲೆ ವರದಕ್ಷಿಣೆ ಕೇಸು ಹಾಕಿದ್ದು ಇರುತ್ತದೆ.ಹಿಗೀದ್ದು ಇಂದು ದಿನಾಂಕ;21/08/2018 ರಂದು ವರದಕ್ಷಿಣೆ ಕೇಸಿನ ಹಾಜರಾತಿ ಇದ್ದುದರಿಂದ ನಾನು ಮತ್ತು ನನ್ನ ಗಂಡ ಹಿರಾಸಿಂಗ ತಂದೆ ವಾಘು ಚವ್ಹಾಣ ಹಾಗೂ ನನ್ನ ಮಗ ಮಲ್ಲು ತಂದೆ ಹಿರಾಸಿಂಗ ಕೋರ್ಟಗೆ ಯಾದಗಿರಿಗೆ ಬಂದಿದ್ದು, ನನ್ನ ಮಗನ ಹೆಂಡತಿ ರೇಖಾ ಮತ್ತು ಅವಳ ತಾಯಿ ರುಕ್ಕಿಬಾಯಿ ಇವರು ಸಹಾ ಕೋರ್ಟಗೆ ಬಂದಿದ್ದರು. ನಾವು ಕೋರ್ಟ ಹಾಜರಾತಿ ಮುಗಿಸಿಕೊಂಡು ಊರಿಗೆ ಹೋಗಲು ಸಾಯಂಕಾಲ 5-00 ಗಂಟೆ ಸುಮಾರಿಗೆ ಚಿತ್ತಾಪುರ ರಸ್ತೆಯ ಕಣರ್ಾಟಕ ಬ್ಯಾಂಕಿನ ಮುಂದುಗಡೆ ನಿಂತಿದ್ದಾಗ, 1) ದೇವ್ಲಾ ತಂದೆ ಹಣಮಂತ ರಾಠೋಡ 2) ಆನಂದ ತಂದೆ ಹಣಮಂತ ರಾಠೋಡ 3) ಜೀತ್ಯಾ ತಂದೆ ನಾರಾಯಣ ಚವ್ಹಾಣ 4) ರೇಖಾ ಗಂಡ ಮಲ್ಲು 5) ರುಕ್ಕಿಬಾಯಿ ಗಂಡ ಹಣಮಂತ 6) ರಾಜು ತಂದೆ ಬೋಜ್ಯಾ 7) ಸಂತೋಷ ತಂದೆ ಸೇವು 8) ಸೊಮ್ಲಾ ತಂದೆ ಲೋಕ್ಯಾ 9) ವಿಜ್ಯಾ ತಂದೆ ದೇವ್ಯಾ ಸಾ; ಎಲ್ಲರೂ ಬಳವಡಗಿ ತಾಂಡಾ ತಾ; ಚಿತ್ತಾಪೂರ ಎಲ್ಲರೂ ಬಂದವರೇ ನನ್ನ ಮಗ ಮಲ್ಲು ಈತನಿಗೆ ಲೇ ಮಗನೇ, ನಿನ್ನದು ಬಹಳ ಆಗಿದೇ ಅಂತಾ ಅಂದವರೇ, ಯಾವುದೋ ಉದ್ದೇಶದಿಂದ ರಹಸ್ಯ ಸ್ಥಳದಲ್ಲಿಡಲು ಎಲ್ಲರೂ ಸೇರಿ ಎತ್ತಿಕೊಂಡು ಒಂದು ಕ್ರೂಸರ ಜೀಪಿನಲ್ಲಿ ಹಾಕಿಕೊಂಡರು. ಆಗ ನಾನು ಮತ್ತು ನನ್ನ ಗಂಡ ಹಾಗೂ ಅಲ್ಲೇ ಇದ್ದ ಅಜರ್ುನ ತಂದೆ ಸಜ್ಜನ ಚವ್ಹಾಣ, ಸಂತೋಷ ತಂದೆ ಸೋಮಸಿಂಗ್ ಪವಾರ ಎಲ್ಲರೂ ಯಾಕೇ ಮಲ್ಲು ಈತನನ್ನು ಎತ್ತಿಕೊಂಡು ಹೊರಟಿದ್ದೀರಿ ಅಂತಾ ಕೇಳಲು, ನಮಗೆ ತಳ್ಳಿ ಬೈದಾಡುತ್ತಾ ಹೊರಟು ಹೋದರು.
   ಕಾರಣ ನನ್ನ ಮಗ ಮಲ್ಲು ತಂದೆ ಹಿರಾಸಿಂಗ ಚವ್ಹಾಣ ಈತನಿಗೆ ಯಾವುದೋ ಉದ್ದೇಶದಿಂದ ರಹಸ್ಯ ಸ್ಥಳದಲ್ಲಿಡುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋದ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.145/2018 ಕಲಂ; 143,504, 365 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 167/2018 ಕಲಂ 457,380 ಐಪಿಸಿ;- ದಿನಾಂಕ 21-08-2018 ರಂದು 3 ಪಿ ಎಂಕೆ ಶ್ರೀ ಹಣಮಂತ ತಂದೆ ಬೀಮಣ್ಣ ಕೊರಮ ವಯಾ|| 50 ವರ್ಷ ಜಾ|| ಕೊರವೆರ(ಭಜಂತ್ರಿ) ಸಾ|| ಬಳಿಚಕ್ರ ತಾ|| ಜಿಲ್ಲಾ|| ಯಾದಗಿರಿ ಇವರು ಠಾಣೆಗೆ ಬಂದು ತಮ್ಮ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ. ನನ್ನ ಅಂಗಡಿಯಲ್ಲಿ ಕಳ್ಳತನವಾಗಿರುತ್ತದೆ ಅಂಗಡಿಯ ಹೆಸರು ಶ್ರೀಸಿದ್ದೇಶ್ವ ಎಸ್.ಸ್ಟಿ.ಡಿ. ಮತ್ತು ಜನರಲ್ ಸ್ಟೋರ ಬಳಿಚಕ್ರ ಗೇಟದಲ್ಲಿ ಇರುತ್ತದೆ. ನನ್ನ ಅಂಗಡಿಯು ದಿನಾಂಕ 21-08-2018 ರಂದು ಬೆಳೆಗ್ಗೆ 5-30 ಎ ಎಂ ಕ್ಕೆ ಬೀಗ ಮುರಿದಿರುವದು ಪಕ್ಕದಲ್ಲಿನ ಹೊಟೆಲ್ನವರಾದ ಶಮಕರ ಕಲಾಲ್ ರವರು ಪೋನ ಮೂಲಕ ತಿಳಿಸಿರುತ್ತಾರೆ. ನಂತರ ಬಂದು ನೋಡಿದಲ್ಲಿ ಅಂಗಡಿಯು ಕಳ್ಳತನವಾಗಿರುವದು ತಿಳಿದಿರುತ್ತದೆ. ಅಂಗಡಿಯಲ್ಲಿನ ಸಾಮಾಗ್ರಿಗಳು ಮತ್ತು ಅಂಗಡಿಯಲ್ಲಿನ ಮೊಬೈಲ ರೀಚಾರ್ಜ ಹಣವು ಕಳ್ಳತನವಾಗಿರುತ್ತದೆ. ಕಳ್ಳತನ ವಾಗಿರುವ ಸಾಮಾಗ್ರಿಗಳು 1)ಸೋನಿ ಡಿಜಿಟಲ್ ಕ್ಯಾಮರಾ.ಅದು ಹಳೆಯ ಕ್ಯಾಮರಾ 6 ವರ್ಷಗಳ ಮೇಲ್ಪಟ್ಟು ಹಳೆಯದು. 2)ಪಿಜ್ ಪಿಲಿಮ್ ಡಿಜಿಟಲ್ ಕ್ಯಾಮರಗಳೊಂದಿಗೆ ಅಂಗಡಿಯಲ್ಲಿನ ಕೆಲವು ಸಾಮಾಗ್ರಿಗಳ (ಜನರಲ್ ಸ್ಟೋರ ಸಾಮಾಗ್ರಿಗಳು) ಕಳುವಾಗಿರುತ್ತವೆ.  3)ಮೊಬೈಲ ರೀಚಾರ್ಜ ಹಣವು ಕಳುವಾಗಿರುತ್ತದೆ. 4)ಜಿಯೋ ಪೋನ ಮತ್ತು ರಿಚಾರ್ಜ ಹಣ 8000=00 ರುಪಾಯಿಗಳು ಏರಟೇಲ್ ರೀಚಾರ್ಜ 7000=00 ರುಪಾಯಿಗಳು. ವಡಾಪೋನ ರೀಚಾರ್ಜ 2000=00 ಜಿಯೋಪೋನ ರಿಚಾರ್ಜ. 3000=00 ಮತ್ತು ಅಂಗಡಿಯಲ್ಲಿನ ಹಣವು 3000=00 ರೂ.ಗಳು ಕಳ್ಳತನ ವಾಗಿದ್ದು. ಮತ್ತು ಅಂಗಡಿಯಲ್ಲಿನ ಸಾಮಾನು 1000=00 ರೂಪಾಯಿಗಳು ಹಿಗೆ ಒಟ್ಟು ಹಣವು 24000=00 ರೂಪಾಯಿಗಳು ಸಾಮಾಗ್ರಿಗಳು ಕಳ್ಳತನವಾಗಿದ್ದು.ದಿನಾಂಕ 20-08-2018 ರಂದು 8-30 ಪಿಎಂ ದಿಂದ ದಿನಾಂಕ 21-08-2018 ರಂದು ಬೆಳೆಗ್ಗೆ 5-30 ಗಂಟೆಯ ಒಳಗೆ ಕಳ್ಳತನವಾಗಿರಬಹುದು ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ವಗೈರೆ ಪಿಯರ್ಾದಿ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 167/2018 ಕಲಂ 457.380. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 168/2018 ಕಲಂ 279,337,338, ಐಪಿಸಿ ಮತ್ತು 187 ಐಎಮವಿ ಕಾಯ್ದೆ;- ದಿನಾಂಕ: 21-08-2018 ರಂದು ಸಾಯಂಕಾಲ 04-00 ಗಂಟೆಗೆ ರಾಯಚೂರಿನ ಬೆಟ್ಟದೂರ ಆಸ್ಪತ್ರೆಯಿಂದ ಒಂದು ಹೇಳಿಕೆ ಪಿಯರ್ಾಧಿ ಪಡೆದುಕೊಂಡ ಬಂದ ಸಾರಂಶವೆನೆಂದರೆ ಪಿಯರ್ಾಧಿ ಮತ್ತು ಆತನ ಅಣ್ಣ ದಿನಾಂಕ: 14-08-2018 ರಂದು ಬೆಳಿಗ್ಗೆ 07-00 ಗಂಟೆಗೆ ಹೋಲಕ್ಕೆ ಕಣೆಕಲ್ - ಸಣ್ಣ ಸಂಬ್ರ ರೋಡಿನ ಮೇಲೆ ಬಸವರಾಜಪ್ಪ ಇವರ ಹೊಲದ ಹತ್ತಿರ ನಮ್ಮ ಹೋಲಕ್ಕೆ ಮೋಟರ ಸಯಕಲ್ ಮೇಲೆ ಹೋಗುವಾಗ ಎದುರಿನಿಂದ ಟಾಟಾ ಎಸಿ ನಂ.ಕೆಎ-33 ಎ-4011 ನೆದ್ದರ ಚಾಲಕನಾದ ರಮೆಶ ತಂದೆ ಹಣಮಂತ ವಡ್ಡರ ಸಾ|| ಕಣೆಕಲ್ ಇತನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ ಡಿಕ್ಕಿ ಪಡಿಸಿದ್ದರಿಂದ ಪಿಯರ್ಾಧಿ ಮತ್ತು ಆತನ ಅಣ್ಣನಿಗೆ ಎರಡು ಕೈಗಳಿಗೆ ಬಾರಿ ಗಾಯವಾದ ಬಗ್ಗೆ ದೂರಿನ ಸಾರಂಶ ಇರುತ್ತದೆ
 

No comments: